ರಾಜ್ಯ

ಕರ್ನಾಟಕ ನದಿಗಳ ನೀರು ಸ್ನಾನಕ್ಕೂ ಯೋಗ್ಯವಲ್ಲ, ಕುಡಿಯಬೇಡಿ: ಮಾಲಿನ್ಯ ಮಂಡಳಿ ಎಚ್ಚರಿಕೆ

Shilpa D
ಬೆಂಗಳೂರು: ಕರ್ನಾಟಕದ 15 ನದಿಗಳ ನೀರು ಸ್ನಾನ ಮಾಡಲು ಯೋಗ್ಯವಲ್ಲ, ಈ ನದಿಗಳ ನೀರನ್ನು ಕುಡಿಯಲು ಬಳಸಬೇಡಿ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿ ತಿಳಿಸಿದೆ.
ಅತಿ ದೊಡ್ಡ ನದಿಗಳ ನೀರು ಸ್ನಾನಕ್ಕೆ ಯೋಗ್ಯವಲ್ಲ, ಈ ಎಲ್ಲಾ ನದಿಗಳು ಸಿ. ಮತ್ತು ಡಿ ವರ್ಗಕ್ಕೆ ಸೇರಿವೆ, ಸಿ ವರ್ಗ ಎಂದರೇ ಶುದ್ದೀಕರಣದ ನಂತರ ಅದನ್ನು ಕುಡಿಯಲು ಬಳಸಬಹುದು, ಡಿ ವರ್ಗ ಎಂದರೇ ವನ್ಯಜೀವಿ ಮತ್ತು ಮೀನುಗಾರಿಕೆಗೆ ಮಾತ್ರ ಹಾಗೂ ಮನುಷ್ಯರ ಸ್ನಾನಕ್ಕೂ ಯೋಗ್ಯವಲ್ಲದ್ದು ಎಂದು ಹೇಳಿದ್ದಾರೆ.
ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು ಬಿ ವರ್ಗಕ್ಕೆ ಸೇರಿದ್ದು, ಇದು ಸ್ನಾನಕ್ಕೆ ಯೋಗ್ಯವಾಗಿದೆ, ಈ ಎರಡು ನದಿಗಳು ಬೇರೆ ನದಿಗಳಿಗಿಂತ ಉತ್ತಮವಾಗಿದೆ,  ಹೀಗಾಗಿ ಸರ್ಕಾರ ಈ ನದಿಗಳ ನೀರು ಬಳಕೆಗಾಗಿ ಕನಿಷ್ಠ ಮಟ್ಟದ ಹಿತಾಸಕ್ತಿ  ತೋರಬೇಕು ಎಂದು ಮಾಲಿನ್ಯಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ನೇತ್ರಾವತಿ ನದಿಯ ನೀರಿನ ಗುಣಮಟ್ಟವು ಏಪ್ರಿಲ್ 2018 ರಿಂದ ಮಾರ್ಚ್ 2019 ರವರೆಗೆ ಸ್ಥಿರವಾಗಿದೆ ಎಂದು ಹೇಳಿದ್ದಾರೆ,.ವರದಿ ಪ್ರಕಾರ ಅರ್ಕಾವತಿ ಮತ್ತು ಭಧ್ರಾ ನದಿಗಳು ತೀರಾ ಕೆಳಮಟ್ಟದಲ್ಲಿದೆ,ಯಗಚಿ, ಕಾವೇರಿ ಕಬಿನಿ  ಮತ್ತು ಕಾಳಿ ನದಿಗಳು ಕಳೆದ ಒಂದು ವರ್ಷದಿಂದ ಸಿ ಕೆಟಗರಿಯಲ್ಲೇ ಉಳಿದುಕೊಂಡಿದೆ.
ಇನ್ನು ಉಳಿದ  ಎಲ್ಲಾ ನದಿಗಳು ವರ್ಗದಲ್ಲಿ ಏರು ಪೇರು ಕಂಡು ಬಂದಿದೆ, ಇನ್ನೂ ಶಿಂಷಾ ನದಿ ನೀರು ಕೃಷಿಗೆ ಯೋಗ್ಯವಾಗಿದೆ, 2018ರ ಅಕ್ಟೋಬರ್  ನಿಂದ ನವೆಂಬರ್ ವರೆಗೂ ಇ ಕೆಟಗರಿ ಯಿಂದ ಡಿ ಕೆಟಗರಿಗೆ ಬಂದಿದೆ, 
ಅರ್ಕಾವತಿ, ಲಕ್ಷ್ಮಣತೀರ್ಥ, ಮಲಪ್ರಭಾ, ತುಂಗಭದ್ರಾ, ಭದ್ರಾ, ಕಾವೇರಿ ಕಬಿನಿ, ಕಗಿನ, ಕಾಳಿ, ಕೃಷ್ಣಸ ಶಿಂಷಾ, ಕುಮಾರಧಾರ್,ನೇತ್ರಾವತಿ, ತುಂಗಾ ಮತ್ತು ಯಗಚಿ ನದಿಗಳನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮೌಲ್ಯ ಮಾಪನ ಮಾಡಿದೆ. ಇದರಲ್ಲಿ ಭೀಮಾ ನದಿ ಸೇರಿಲ್ಲ, 
ಈ ಎಲ್ಲಾ ನದಿಗಳ ನೀರು ಕಂದು ಬಣ್ಣದ್ದಾಗಿದೆ.ಈ ನದಿಗಳ ನೀರು ಸ್ನಾನಕ್ಕೂ ಯೋಗ್ಯವಾಗಿಲ್ಲ ಎಂದು ಮಂಡಳಿ ತಿಳಿಸಿದೆ..
SCROLL FOR NEXT