ಸಾಂದರ್ಭಿಕ ಚಿತ್ರ 
ರಾಜ್ಯ

ಸಕಲೇಶಪುರ: 22 ಜಿಂಕೆಗಳನ್ನು ಬಂಧಿಸಿಟ್ಟಿದ್ದ ಎಸ್ಟೇಟ್ ಮಾಲೀಕನ ವಿರುದ್ಧ ಕೇಸು ದಾಖಲು

ಸಕಲೇಶಪುರ ತಾಲ್ಲೂಕಿನ ತನ್ನ ಕಾಫಿ ಎಸ್ಟೇಟ್ ನಲ್ಲಿ 22 ಜಿಂಕೆಗಳ ಹಿಂಡನ್ನು ಹಿಡಿದದ್ದಕ್ಕಾಗಿ ವನ್ಯಜೀವಿ ...

ಹಾಸನ: ಸಕಲೇಶಪುರ ತಾಲ್ಲೂಕಿನ ತನ್ನ ಕಾಫಿ ಎಸ್ಟೇಟ್ ನಲ್ಲಿ 22 ಜಿಂಕೆಗಳ ಹಿಂಡನ್ನು ಹಿಡಿದದ್ದಕ್ಕಾಗಿ ವನ್ಯಜೀವಿ ಕಾಯ್ದೆಯಡಿ ಅರಣ್ಯ ಇಲಾಖೆ ಅಧಿಕಾರಿಗಳು ಕೇಸು ದಾಖಲಿಸಿದ್ದಾರೆ. ಆರೋಪಿ ಎಸ್ಟೇಟ್ ಮಾಲೀಕ ತಲೆಮರೆಸಿಕೊಂಡಿದ್ದಾನೆ.
ಗ್ರಾಮಸ್ಥರೊಬ್ಬರು ನೀಡಿದ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಜಿಂಕೆಗಳನ್ನು ರಕ್ಷಿಸಿದರು. ಎಸ್ಟೇಟ್ ಮಾಲೀಕ 22 ಜಿಂಕೆ ಮರಿಗಳನ್ನು ಮತ್ತು ಅವುಗಳಿಗೆ ಹಾಲುಣಿಸುತ್ತಿದ್ದ ದೊಡ್ಡ ಜಿಂಕೆಯನ್ನು ಕೂಡ ಹಿಡಿದು ಬಂಧಿಸಿಟ್ಟಿದ್ದ. ಮಾಲೀಕ ತನ್ನ ಎಸ್ಟೇಟ್ ನಲ್ಲಿ ಕಬ್ಬಿಣದ ಕಂಬಿ ಮೂಲಕ ಬೇಲಿ ನಿರ್ಮಿಸಿಕೊಂಡಿದ್ದ.
ಜಿಂಕೆ ಮತ್ತು ಅದರ ಮರಿಗಳು ಆಹಾರ, ನೀರು ಹುಡುಕಿಕೊಂಡು ಎಸ್ಟೇಟ್ ಗೆ ನುಗ್ಗಿದ್ದ ವೇಳೆ ಮಾಲೀಕ ಅವುಗಳನ್ನು ಬಂಧಿಸಿದ್ದ. ರಕ್ಷಿಸಲ್ಪಟ್ಟ ಎಲ್ಲಾ ಜಿಂಕೆಗಳನ್ನು ಒಟ್ಟಿಗೆ ಬಂಧನದಿಂದ ಬಿಡಿಸಿ ಸಾಗಿಸುವುದು ಕಷ್ಟವಾಗುತ್ತದೆ. ಜಿಂಕೆಗಳು ತುಂಬ ಸೂಕ್ಷ್ಮ ಪ್ರಾಣಿಗಳು ಎನ್ನುತ್ತಾರೆ ಅರಣ್ಯ ಉಪ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು. 
ಸಕಲೇಶಪುರ ಗ್ರಾಮಾಂತರ ಪೊಲೀಸರು ಮಾಲೀಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ವನ್ಯಜೀವಿಗಳನ್ನು ಬಂಧನದಲ್ಲಿಟ್ಟುಕೊಳ್ಳುವುದು ಅಥವಾ ಮನೆಯಲ್ಲಿ ಇಟ್ಟುಕೊಳ್ಳುವುದು ಅಪರಾಧವಾಗುತ್ತದೆ ಎನ್ನುತ್ತಾರೆ ಪರಿಸರ ತಜ್ಞ ಹೆಚ್ ಎ ಕಿಶೋರ್ ಕುಮಾರ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT