ರಾಜ್ಯ

ಮಹಾರಾಷ್ಟ್ರದೊಡನೆ ನೀರು ಹಂಚಿಕೆ: ಹೆಚ್ಚುವರಿ ಸಮಯ ಕೋರಿದ ಸಿಎಂ

Raghavendra Adiga
ಬೆಳಗಾವಿ: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಜತೆಗಿನ ನೀರು ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಲು ಹೆಚ್ಚಿನ ಸಮಯವನ್ನು ಕೋರಿದ್ದಾರೆ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ಶನಿವಾರ ಮಹಾರಾಷ್ಟ್ರದ ರಾಜಪುರ ಅಣೆಕಟ್ಟೆಗೆ ಭೇಟಿ ನೀಡಿದ್ದ ಸಮಯದಲ್ಲಿ ಈ ಬಗೆಗೆ ಸೂಚನೆ ನೀಡಿದ್ದಾರೆ.
ಎರಡೂ ರಾಜ್ಯಗಳ ಜಲಸಂಪನ್ಮೂಲ ಸಚಿವರು ಪರಿಸ್ಥಿತಿ ಕುರಿತು ವಿವರವಾದ ಮಾತುಕತೆ ನಡೆಸಿದ ನಂತರವೇ ಅಂತಿಮ ಒಪ್ಪಂದದ ಪತ್ರಕ್ಕೆ ಸಹಿ ಹಾಕಲಾಗುವುದು ಎಂದು ಅವರು ಹೇಳಿದರು. ಕುಡಿಯುವ ನೀರಿನ ಬಿಕ್ಕಟ್ಟನ್ನು ನಿಭಾಯಿಸಲು ಶಾಶ್ವತ ಪರಿಹಾರದ ಕ್ರಮಗಳನ್ನು ಕೈಗೊಳ್ಳಬೇಕಾದ ಬಗ್ಗೆ ಉಭಯ ಸರ್ಕಾರಗಳು ಚರ್ಚಿಸಲಿವೆ ಎಂದು ಶಿವಕುಮಾರ್ ಹೇಳಿದರು. "ಮಹಾರಾಷ್ಟ್ರವು ಕರ್ನಾಟಕಕ್ಕೆ ನಿರನ್ನು ನೀಡುವುದಕ್ಕೆ ಬದಲು ಉಭಯ ರಾಜ್ಯಗಳ ನಡುವೆ ನೀರು ವಿನಿಮಯ ಮಾಡಿಕೊಳ್ಳುವ ಕುರಿತು ಮಹಾ ಸರ್ಕಾರ ಪ್ರಸ್ತಾಪ ಇಟ್ಟಿದೆ.ಅಧಿಕಾರಿಗಳ ಮಟ್ಟದಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದೆ, ’’ ಎಂದು ಅವರು ಹೇಳಿದ್ದಾರೆ.
ಗಡಿ ಪ್ರದೇಶಗಳಲ್ಲಿನ ಬರಗಾಲದಿಂದ ಬಳಲುತ್ತಿರುವ ರೈತರ ಹಿತಾಸಕ್ತಿ ಕಾಪಾಡಲು ಉಭಯ ಸರ್ಕಾರಗಳು ಮಾತುಕತೆ ನಡೆಸಬೇಕು ಎಂದು ಮಹಾರಾಷ್ಟ್ರದ ಶಿರೋಲ್ ಕ್ಷೇತ್ರದ ಶಾಸಕ ಉಲ್ಹಾಸ್ ಪಾಟೀಲ್ ಹೇಳಿದರು. ಸಚಿವ ಸತೀಶ್ ಜಾರಕಿಹೋಳಿ ಮತ್ತು ಶಾಸಕರಾದ ಗಣೇಶ್ ಹುಕ್ಕೇರಿ, ಶ್ರೀಮಂತ್ ಪಾಟೀಲ್, ಮಹೇಶ್ ಕುಮತಳ್ಳಿ  ಲಕ್ಷ್ಮಿ ಹೆಬ್ಬಾಳ್ಕರ್ , ಮಹಂತೇಶ್ ಕೌಜಲಗಿ ಮತ್ತು ಎಂಎಲ್ ಸಿ ಮಹಂತೇಶ್ ಕವತಗಿಮಠ್ ಅವರೊಂದಿಗೆ, ಡಿಕೆಶಿ ಚಿಕ್ಕೋಡಿಯಲ್ಲಿರುವ ಕಲ್ಲೋಲ್ ಮತ್ತು ಮಂಜರಿಬ್ಯಾರೇಜ್‌ಗಳಿಗೆ ಭೇಟಿ ನೀಡಿದರು.
ಕೃಷಿ ಉದ್ದೇಶಗಳಿಗಾಗಿ ಕೃಷ್ಣಾ ನದಿಗೆ ಬಿಡುಗಡೆ ಮಾಡಲಾಗುತ್ತಿರುವ ನೀರನ್ನು ಬಳಸುವುದರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಅಧಿಕಾರಿಗಳನ್ನು ಕೇಳಿದರು .. ಚಿಕ್ಕೋಡಿ ತಾಲ್ಲೂಕಿನಲ್ಲಿಬವನ್ಸೌದತ್ತಿ ಹಾಗೂ ಮಂಜರಿ ನಡುವೆ  ನಿರ್ಮಿಸಲಾಗುತ್ತಿರುವ ಸೇತುವೆಯ ಕಾಮಗಾರಿಗಳ ಪರಿಶೀಲನೆಯನ್ನೂ ಸಹ ಸಚಿವರು ಇದೇ ವೇಳೆ ಕೈಗೊಡಿದ್ದಾರೆ.
ಮೇ 3 ರಿಂದ ರಾಜ್ಯ ಸರ್ಕಾರ ಮತ್ತು ಕರ್ನಾಟಕದ ಬಿಜೆಪಿ ಮುಖಂಡರು ಕೊಯ್ನಾ ಅಣೆಕಟ್ಟಿನಿಂದಕೃಷ್ಣಾ ನದಿಗೆ ನೀರು ಹರಿಸುವ ಕುರಿತು ಮಹಾರಾಷ್ಟ್ರ ಸರ್ಕಾರಕ್ಕೆ ಮಾತುಕತೆ ಮತ್ತು ಪತ್ರಗಳನ್ನು ಬರೆಯುತ್ತಿದ್ದಾರೆ. ಮಹಾರಾಷ್ಟ್ರ ಸರ್ಕಾರವು ಪ್ರತಿವರ್ಷ ಮೇ ತಿಂಗಳಲ್ಲಿ 4 ಟಿಎಂಸಿ ಅಡಿ ನೀರನ್ನು ಕರ್ನಾಟಕಕ್ಕೆ ಬಿಡುಗಡೆ ಮಾಡುತ್ತಿದ್ದು ಈ ಬಾರಿ ಆ ಸರ್ಕಾರ ನಿಗದಿತ ಪ್ರಮಾಣದ ನೀರನ್ನು ಬಿಡುಗಡೆ ಮಾಡದಿರಲು ತೀರ್ಮಾನಿಸಿದೆ.
SCROLL FOR NEXT