ತರಬೇತಿ ನೀಡುತ್ತಿರುವ ನಿವತ್ತ ಸೇನಾಧಿಕಾರಿ 
ರಾಜ್ಯ

ಬಳ್ಳಾರಿ: ಯುವ ಆಕಾಂಕ್ಷಿಗಳಿಗೆ ಉಚಿತ ತರಬೇತಿ ನೀಡುತ್ತಿರುವ ನಿವೃತ್ತ ಸೇನಾಧಿಕಾರಿ

ಒಮ್ಮೆ ಸೈನಿಕನಾದರೇ ಯಾವಾಗಲೂ ಸೈನಿಕನೇ ಎಂಬ ಗಾದೆ ಮಾತಿನಂತೆ ಸೈನಿಕನಿಗೆ ಯಾವಾಗಲೂ ದೇಶವೇ ಮೊದಲು, ನಂತರ ಸ್ನೇಹಿತರು ಮತ್ತು ಕುಟುಂಬ ...

ಬಳ್ಳಾರಿ:  ಒಮ್ಮೆ ಸೈನಿಕನಾದರೇ  ಯಾವಾಗಲೂ ಸೈನಿಕನೇ ಎಂಬ ಗಾದೆ ಮಾತಿನಂತೆ ಸೈನಿಕನಿಗೆ ಯಾವಾಗಲೂ ದೇಶವೇ ಮೊದಲು, ನಂತರ ಸ್ನೇಹಿತರು ಮತ್ತು ಕುಟುಂಬ ಬರುತ್ತದೆ.
ಬಳ್ಳಾರಿಯ ಹೂವಿನ ಹಡಗಲಿ ತಾಲೂಕಿನ ಮೊಹಮದ್ ರಫಿ, 2002 ರಲ್ಲಿ  ಭಾರತೀಯ ಸೇನೆಗೆ ದಾಖಲಾದರು, ಹವಾಲ್ದಾರ್ ಆಗಿ ಕೆಲಸ ಮಾಡಿದ್ದರು,  16 ವರ್ಷದ ಸೇವಾವಧಿ ನಂತರ ತಮ್ಮ ಸ್ವಂತ ಸ್ಥಳಕ್ಕೆ ಆಗಮಿಸಿ, ವಿಶ್ರಾಂತಿ ಪಡೆಯಲಿಲ್ಲ, ಭಾರತೀಯ ಸೇನೆ ಸೇರಲು ಬಯಸುವ ಯುವಕರಿಗೆ ಉಚಿತ ತರಬೇತಿ ನೀಡುತ್ತಿದ್ದಾರೆ.
ತಾವು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆ ಇತಿಹಾಸದಲ್ಲಿ ಓದಿದ  ಹಲವು ವಿಷಯಗಳು ತಲೆಯಲ್ಲಿ ತುಂಬಿದ್ದವು, ಹೀಗಾಗಿ ನನಗೆ ಸೇನೆಗೆ ಸೇರಲು ಸ್ಪೂರ್ತಿಯಾಯಿತು, ಶಾಲೆಯಲ್ಲಿ ಶಿಕ್ಷಕರು ಹೇಳುತ್ತಿದ್ದ ಕೆಚ್ಚೆದೆಯ ಸೈನಿಕರ ಬಗ್ಗೆ  ಕಥೆಗಳು ನನಗೆ ಸ್ಪೂರ್ತಿಯಾಗಿದೆ ಎಂದು ಹೇಳಿದ್ದಾರೆ.
16 ವರ್ಷಗಳ ಸೇವೆಯಲ್ಲಿ ಹಲವು ಕ್ಲಿಷ್ಟಕರ ಗಡಿಯಲ್ಲಿ ಕೆಲಸ ಮಾಡಿದ್ದೇನೆ, ಜಮ್ಮು ಕಾಶ್ಮೀರದಲ್ಲಿ ಆರು ವರ್ಷ ಕೆಲಸ ಮಾಡಿದ್ದೇನೆ, ಪ್ರತಿ ಸಲ ಮನೆಗೆ ಬಂದು ವಾಪಸ್ ಹೋಗುವಾಗ, ಮನೆಯವರೆಲ್ಲಾ ನೋವಿನಲ್ಲಿ  ಕಳುಹಿಸಿಕೊಡುತ್ತಿದ್ದರು, 
ನಾನು ಸೇನೆಗೆ ಸೇರಿದಾಗ ನನಗೆ ಯಾರು ಮಾರ್ಗದರ್ಶನ ನೀಡುವವರು ಯಾರು ಇಲ್ಲ, ಸೇನೆ ಸೇರಲು ಬೇಕಾದ ಅಹ್ರತೆಗಳ ಬಗ್ಗೆ ನನಗೆ ಮಾಹಿತಿ ಇರಲಿಲ್ಲ, ನಂತರ ನಾನು ಕರಾಟೆಗೆ ಸೇರಿದೆ, ಹಲವು ಕಿಮೀ ಗಳ ವರೆಗೆ ಓಡುತ್ತಿದ್ದೆ, ಸೇನೆ ಸೇರಲು ಬಯಸುವ  ಯುವಕರಿಗೆ, ಈ ರೀತಿಯ ತೊಂದಕೆ ಆಗಬಾರದೆಂದು ಸೇನೆ ಸೇರುವ ಯುವಕರಿಗೆ ಉಚಿತ ತರಬೇತಿ ನೀಡುತ್ತಿದ್ದಾರೆ.
ಬೆಳಗ್ಗೆ 5.30 ರಿಂದ 7 ಗಂಟೆವರೆಗೂ  ತರಬೇತಿ ನಡೆಯುತ್ತಿದೆ, ಬೆಳಗ್ಗಿನ ಹೊತ್ತು, ಫುಟ್ ಬಾಲ್, ವಾಲಿಬಾಲ್, ಮತ್ತಿತರ ಆಟಗಳನ್ನು ಆಡಿಸಲಾಗುತ್ತದೆ. ಜ್ವಲಂತ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ, ಭೌಗೋಳಿಕ ಹಿನ್ನೆಲೆ ಭಾರತ ಮತ್ತು ಪ್ರಪಂಚದ  ಬಗ್ಗೆ ಮಾಹಿತಿ ನಡಿ, ಭಾಷಣಗಳನ್ನು ನೀಡಲಾಗುತ್ತದೆ.
ದೇಶದ ವಿವಿದೆಡೆ ಈ ಎಲ್ಲಾ ರೀತಿಯ ತರಬೇತಿ ನೀಡಲು ಸುಮಾರು 30 ಸಾವಿರದಿಂದ 40 ಸಾವಿರ ರು ವರೆಗೆ ಚಾರ್ಜ್ ಮಾಡಲಾಗುತ್ತದೆ,  ನಾನು ಯಾವುದೇ ರೀತಿಯ ಚಾರ್ಜ್ ಮಾಡಲಾಗುತ್ತದೆ, ದೇಶಕ್ಕಾಗಿ ನಾನು ಉಚಿತ ಸೇವೆ ಮಾಡಲು ಬಯಸಿದ್ದೇನೆ, 15ರಿಂದ 23 ವರ್ಷ ವಯಸ್ಸಿನ ಯುವಕರಿಗೆ  ತರಬೇತಿ ನೀಡುತ್ತಿದ್ದಾರೆ, ಇದರಲ್ಲಿ ಈಗಾಗಲೇ ಕೆಲವರು ಪರೀಕ್ಷೆ  ಬರೆದಿದ್ದಾರೆ, 
ಕರ್ನಾಟಕದಾದ್ಯಂತ ರಫಿ ತರಬೇತಿ ಬಗ್ಗೆ  ತಿಳಿದಿದೆ, ಮುಂದಿನ ವಾರ ಮಂಡ್ಯ ಮತ್ತು ಮೈಸೂರಿನಿಂದ  ತರಬೇತಿಗಾಗಿ ತಂಡವೊಂದು ಬರುತ್ತಿದೆ, ನನ್ನ ಕೆಲಸವನ್ನು ಗುರುತಿಸಿ, ಗ್ರಾಮಸ್ಥರೇ ಇಲ್ಲಿಗೆ ಬರುವವರಿಗೆ  ಊಟ ಹಾಗೂ ವಸತಿ ವ್ಯವಸ್ಥೆ ಮಾಡುತ್ತಾರೆ ಎಂದು ರಫಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT