ನೀಲಾ 
ರಾಜ್ಯ

ಮಹಿಳಾ ದಿನ: ನೀಲಾ ಎಂಬ ರೈಲ್ವೆ ಗೇಟ್ ವು'ಮ್ಯಾನ್'!

ನಾನು ರೈಲು ಬರುವುದಕ್ಕೆ ಐದು ನಿಮಿಷಕ್ಕೆ ಮುನ್ನ ಗೇಟನ್ನು ಹಾಕುತ್ತೇನೆ. ಕೆಲವೊಮ್ಮೆ ವಾಹನ ಚಾಲಕರು ನನ ಮೇಲೆ ಮನಬಂದಂತೆ ಹರಿಹಾಯುತ್ತಾರೆ. ಆದರೆ ನಾನು ಅವರಿಗೆ ನಿಮ್ಮ ಜೀವ ಎಷ್ಟು....

ಆನೆಕಲ್: "ನಾನು ರೈಲು ಬರುವುದಕ್ಕೆ ಐದು ನಿಮಿಷಕ್ಕೆ ಮುನ್ನ ಗೇಟನ್ನು ಹಾಕುತ್ತೇನೆ. ಕೆಲವೊಮ್ಮೆ ವಾಹನ ಚಾಲಕರು ನನ ಮೇಲೆ ಮನಬಂದಂತೆ ಹರಿಹಾಯುತ್ತಾರೆ. ಆದರೆ ನಾನು ಅವರಿಗೆ ನಿಮ್ಮ ಜೀವ ಎಷ್ಟು ಮುಖ್ಯ ಎನ್ನುವುದನ್ನು ನಿಧಾನವಾಗಿ ಮನವರಿಕೆ ಮಾಡುತ್ತೇನೆ"  56 ವರ್ಷದ ನೀಲಾ ಹೇಳಿದ್ದಾರೆ. ಇವರು ನೈಋತ್ಯ ರೈಲ್ವೆ ಮಂಡಳಿಯಲ್ಲಿ ಗೇಟ್ ವುಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 
ಆನೆಕಲ್ ಸಮೀಪದ ಮರಸೂರ್ ನಲ್ಲಿ ಈಕೆ ಗೇಟ್ ವುಮನ್ ಆಗಿದ್ದು ಈಕೆ ಮೂಲತಃ ತಮಿಳುನಾಡಿನ ಧರ್ಮಪುರಿಗೆ ಸೇರಿದವರು. ನೀಲಾ ಹಾಗೂ ಆಕೆಯ ಪತಿ ತಿರುನಾವುಕರಸು ಅವರು  45 ವರ್ಷಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದಾರೆ. ನೀಲಾ ಸುಮಾರು 14 ವರ್ಷಗಳ ಹಿಂದೆ ಗೇಟ್ ವುಮನ್ ಆಗಿ ಸೇವೆಗೆ ಸೇರಿಕೊಂಡಿದ್ದು ಕಳೆದ ಏಳು ವರ್ಷಗಳಿಂಡ ಮರಸೂರ್ ನಲ್ಲಿ ಆಕೆ ಕಾರ್ಯನಿರ್ವಹಿಸುತ್ತಿದ್ದಾರೆ.
"ನಾವು ಶಿಫ್ಟ್ ಮೇಲೆ ಕೆಲಸ ಮಾಡುತ್ತಿದ್ದೇವೆ,. ಬೆಳಿಗ್ಗೆ ಏಳರಿಂದ ರಾತ್ರಿ ಏಳರತನಕ ಒಂದು ಪಾಳಿ, ಅಲ್ಲವೇ ರಾತ್ರಿ ಏಳರಿಂದ ಬೆಳಿಗ್ಗೆ ಏಳರ ತನಕದ ಪಾಳಿ. ಈ ಎರಡೂ ಪಾಳಿಗಳಲ್ಲಿ ಪ್ರತಿದಿನ ಕನಿಷ್ಟ 15 ರಿಂದ 20 ರೈಲುಗಳು ಈ ಗೇಟ್ ಮೂಲಕ ಸಂಚರಿಸುತ್ತವೆ" ನೀಲಾ ಹೇಳಿದ್ದಾರೆ. ನೀಲಾ ರಾತ್ರಿ ಪಾಳಿಯಲ್ಲಿ ಸಹ ಎಚ್ಚರವಾಗಿದ್ದು ಕೆಲಸ ನಿರ್ವಹಿಸಬಲ್ಲರು. "ಗೇಟ್ ಮುಚ್ಚದೆ ಐದೇ ನಿಮಿಷ ನಿದ್ರಿಸಿದರೆ ಸಹ ಅಪಘಾತವಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಹಾಗಾಗಿ ನಾನೇನಾದರೂ ಓದುತ್ತಾ, ಇಲ್ಲವೆ ಇನ್ನೇನಾದರೂ ಮಾಡುತ್ತಾ ರಾತ್ರಿ ವೇಳೆ ಸದಾ ಎಚ್ಚರದಲ್ಲಿರುತ್ತೇನೆ."
ಕುತೂಹಲಕಾರಿ ಸಂಗತಿ ಎಂದರೆ ನೀಲಾ ಎಂದೂ ಶಾಲೆಗೆ ತೆರಳಿದವರಲ್ಲ. ಅವರು ಬೈಯಪ್ಪನಹಳ್ಳಿಯಲ್ಲಿದ್ದ ಸಮಯದಲ್ಲಿ ಎನ್ ಜಿಒ ಸದಸ್ಯರೊಬ್ಬರು ಆಕೆಗೆ ಓದುವುದು, ಬರೆಯುವುದನ್ನು ಹೇಳಿಕೊಟ್ಟಿದ್ದರು."ಇದು ನನಗೆ ಪಿಎನ್ ಆರ್ ಸಂಖ್ಯೆಗಳನ್ನು ಬರೆಯಲು ಸಹಾಯಕವಾಗಿದೆ, ಇದುವರೆಗೆ ಗೆ ನನ್ನ ವಿರುದ್ಧ ಯಾವುದೇ ದೂರುಗಳಿಲ್ಲ ಮತ್ತು ಅದು ಸ್ವತಃ ನನಗೆ ಅಭಿಮಾನದ ಸಂಗತಿಯಾಗಿದೆ" ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

SCROLL FOR NEXT