ರಾಜ್ಯ

ಧಾರವಾಡ: ಕತ್ತಿ ಹಿಡಿದು ಬ್ಯಾಂಕ್ ಗೆ ನುಗ್ಗಿ ಕ್ಯಾಶಿಯರ್ ಗೆ ಬೆದರಿಕೆ ಹಾಕಿದ ರೈತ

Sumana Upadhyaya
ಧಾರವಾಡ: ಕತ್ತಿ ಝಳಪಿಸುತ್ತಾ ರೈತ ಬ್ಯಾಂಕಿನೊಳಗೆ ನುಗ್ಗಿದಾಗ ಅಲ್ಲಿ ಸೇರಿದ್ದ ಗ್ರಾಹಕರು ಕೆಲ ಕಾಲ ಆತಂಕಗೊಂಡ ಪರಿಸ್ಥಿತಿ ಧಾರವಾಡ ಜಿಲ್ಲೆಯ ಅಮಿನ್ ಬಾವಿ ಗ್ರಾಮದ ಯುಕೊ ಬ್ಯಾಂಕಿನಲ್ಲಿ ಕಳೆದ ನಡೆದಿದೆ. ರೈತನನ್ನು ಬಸಪ್ಪ ಜಿ ಮುಂದಿನ್ಮಾನಿ ಎಂದು ಗುರುತಿಸಲಾಗಿದೆ. ಕತ್ತಿ ತೋರಿದ ಕ್ಯಾಶಿಯರ್ ಬಳಿ ಹಣ ಬೇಕೆಂದು ಬಸಪ್ಪ ಬೆದರಿಕೆ ಹಾಕಿದ್ದಾರೆ.
ಕ್ಯಾಶಿಯರ್ ಬಳಿ ಬಂದು ನನ್ನ ಸಾಲದ ಮೊತ್ತ ನೀವು ಭರಿಸಬೇಕು ಎಂದು ಕತ್ತಿ ತೋರಿಸಿ ಬೆದರಿಕೆ ಹಾಕಿದ್ದಾನೆ ಎಂದು ಮ್ಯಾನೇಜರ್ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
SCROLL FOR NEXT