ಧಾರವಾಡದಲ್ಲಿ ಕುಸಿದುಬಿದ್ದ ನಿರ್ಮಾಣ ಹಂತದ ಕಟ್ಟಡ 
ರಾಜ್ಯ

ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ; ಆರೋಪ, ಪ್ರತ್ಯಾರೋಪಗಳ ಸುರಿಮಳೆ

ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಬೀಳಲು ಕಟ್ಟಡ ಮಾಲೀಕರು ಕಾರಣ ಎಂದು...

ಹುಬ್ಬಳ್ಳಿ: ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಬೀಳಲು ಕಟ್ಟಡ ಮಾಲೀಕರು ಕಾರಣ ಎಂದು ಹೇಳಲಾಗುತ್ತಿದ್ದರೂ ಕೂಡ ಕಟ್ಟಡ ನಿರ್ಮಿಸುವಾಗ ಕಾನೂನನ್ನು ಸರಿಯಾಗಿ ಪಾಲಿಸಲಾಗಿತ್ತೇ ಎಂಬ ಬಗ್ಗೆ ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆ ಅಧಿಕಾರಿಗಳಿಗೆ ಸಹ ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಕಟ್ಟಡ ಕುಸಿದುಬಿದ್ದ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಅದ ಕಾನೂನು ಸ್ಥಿತಿಗತಿ ಬಗ್ಗೆ ಅರಿವು ಇರಲಿಲ್ಲ. ಇದನ್ನು ಪಾಲಿಕೆಯ ವಲಯ ಆಯುಕ್ತರೇ ಒಪ್ಪಿಕೊಂಡಿದ್ದಾರೆ. ನಗರ ಯೋಜನೆ ಅಧಿಕಾರಿಗಳ ಬಳಿ ಸಹ ಯಾವುದೇ ಮಾಹಿತಿಯಿಲ್ಲ. ದಾಖಲೆಗಳನ್ನು ನೋಡಿದ ಮೇಲಷ್ಟೇ ಕಟ್ಟಡ ನಿರ್ಮಾಣಕ್ಕೆ ಪೂರ್ಣ ಪ್ರಮಾಣಪತ್ರ(ಸಿಸಿ) ನೀಡಿಲ್ಲ, ಕೇವಲ ಭಾಗಶಃ ಪೂರ್ಣ ಪ್ರಮಾಣಪತ್ರ ನೀಡಲಾಗಿದೆ ಎಂಬುದು ಗೊತ್ತಾಗಿದ್ದು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಸಿ ಡಬ್ಲ್ಯು ಶಕಿಲ್ ಹೇಳುವ ಅಹ್ಮದ್ ಹೇಳುವ ಪ್ರಕಾರ, ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಭಾಗಶಃ ಪೂರ್ಣ ಪ್ರಮಾಣಪತ್ರ ನೀಡುವ ಅವಕಾಶವಿದೆ. ಇದರಡಿ, ಬೇಸ್ ಮೆಂಟ್ ಮತ್ತು ಕೆಳಹಂತದ ಮಹಡಿಗೆ ಮಾತ್ರ ಪೂರ್ಣ ಪ್ರಮಾಣಪತ್ರ ನೀಡಲಾಗುತ್ತದೆಯೇ ಹೊರತು ಮೊದಲ ಮತ್ತು ಎರಡನೇ ಮಹಡಿಗಲ್ಲ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಂದೇ ಮಾತರಂ 150ನೇ ವಾರ್ಷಿಕೋತ್ಸವ: ಲೋಕಸಭೆಯಲ್ಲಿಂದು ಚರ್ಚೆ, ಎಲ್ಲರ ಚಿತ್ತ ಪ್ರಧಾನಿ ಮೋದಿಯತ್ತ

ಬೆಳಗಾವಿ ಚಳಿಗಾಲ ಅಧಿವೇಶನ: ಸರ್ಕಾರ-ವಿಪಕ್ಷಗಳ ನಡುವೆ ಜಟಾಪಟಿ ಸಾಧ್ಯತೆ, ಅವಿಶ್ವಾಸ ನಿರ್ಣಯ ಮಂಡಿಸಲು BJP ಮುಂದು..!

ಪರಪ್ಪನ ಅಗ್ರಹಾರದಲ್ಲಿ ಮಾರಾಮಾರಿ: ಸಹ ಕೈದಿಗೆ ಥಳಿಸಿದ ನಟ ದರ್ಶನ್?, ಸೆಲ್ ಬಳಿ ಕಟ್ಟೆಚ್ಚರ!: ವರದಿ

'ಮುಖ್ಯಮಂತ್ರಿಗಳೇ ಗಮನ ಕೊಡಿ': ಬಸ್ ಇಲ್ಲ.. ನಿತ್ಯ ಶಾಲೆಗೆ ಕಾಡಿನಲ್ಲಿ 14 ಕಿ.ಮೀ ನಡೆದೇ ಸಾಗುವ ವಿದ್ಯಾರ್ಥಿಗಳು!

ಬಾಬರ್ ಒಬ್ಬ ಆಕ್ರಮಣಕಾರ, ಬಾಬ್ರಿ ವಿಚಾರವನ್ನು ಭಾರತದ ಭ್ರಾತೃತ್ವ ಭಾವನೆಗೆ ಹೋಲಿಸದಿರಿ...

SCROLL FOR NEXT