ಉಡುಪಿ: ಶಿಷ್ಯ ಸ್ವೀಕಾರಕ್ಕೆ ಸಿದ್ದವಾದ ಪಲಿಮಾರು ಶ್ರೀ, ಶೈಲೇಶ್ ಉಪಾಧ್ಯಾಯಗೆ ದೀಕ್ಷೆ 
ರಾಜ್ಯ

ಉಡುಪಿ: ಶಿಷ್ಯ ಸ್ವೀಕಾರಕ್ಕೆ ಸಿದ್ದವಾದ ಪಲಿಮಾರು ಶ್ರೀ, ಶೈಲೇಶ್ ಉಪಾಧ್ಯಾಯಗೆ ದೀಕ್ಷೆ

ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು (63) ಶಿಷ್ಯ ಸ್ವೀಕಾರ ಮಾಡಲು ನಿರ್ಧರಿಸಿದ್ದಾರೆ. ತಮ್ಮ ಉತ್ತರಾಧಿಕಾರಿಯನ್ನಾಗಿ ಪಲಿಮಾರು ಮೂಲಮಠದ ಯೋಗ ದೀಪಿಕಾ ಗುರುಕುಲದಲ್ಲಿ ....

ಉಡುಪಿ: ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು (63)  ಶಿಷ್ಯ ಸ್ವೀಕಾರ ಮಾಡಲು ನಿರ್ಧರಿಸಿದ್ದಾರೆ. ತಮ್ಮ ಉತ್ತರಾಧಿಕಾರಿಯನ್ನಾಗಿ ಪಲಿಮಾರು ಮೂಲಮಠದ ಯೋಗ ದೀಪಿಕಾ ಗುರುಕುಲದಲ್ಲಿ ವೇದ ವಿದ್ಯಾರ್ಥಿ ಶೈಲೇಶ್ ಉಪಾಧ್ಯಾಯ ಅವರನ್ನು ಆಯ್ಕೆ ಮಾಡಿದ್ದಾರೆ.
ಕೊಡವೂರು ಕಂಬಳಕಟ್ಟದವರಾದ ಶೈಲೇಶ್ ಸುರೇಂದ್ರ ಉಪಾಧ್ಯಾಯ, ಲಕ್ಷ್ಮಿ ಉಪಾಧ್ಯಾಯ ಅವರ ಪುತ್ರ. ಇವರು ನಾಲ್ಕನೇ ವರ್ಷದ ವೇದಾದ್ಯಯನದಲ್ಲಿ ತೊಡಗಿಕೊಂಡಿದ್ದು ಇವರ ಸೋದರ ವಿಶ್ವೇಶ ಉಪಾಧ್ಯಾಯ ಮುನಿಯಾಲು ಆಯುರ್ವೇದ ಕಾಲೇಜಿನಲ್ಲಿ ಬಿಎಎಂಎಸ್ ಅಧ್ಯಯನ ಮಾಡುತ್ತಿದ್ದಾರೆ.ಸನ್ಯಾಸ ದೀಕ್ಷೆ ಪಡೆದ ನಂತರ ಪಲಿಮಾರು ಶ್ರೀಗಳ ಬಳಿ ವಿದ್ಯಾಭ್ಯಾಸ ಮುಂದುವರಿಸುವ ತೀರ್ಮಾನಕ್ಕೆ ಶೈಲೇಶ್ ಬಂದಿದ್ದಾರೆ ಎನ್ನಲಾಗಿದೆ.
ದಕ್ಷಿಣ ಕನ್ನಡ ಕಟೀಲು ಶಿಬರೂರು ಮೂಲದವರಾದ ಪಲಿಮಾರು ಶ್ರೀಗಳು 1974ರಲ್ಲಿ ಶ್ರೀವಿದ್ಯಾಮಾನ್ಯತೀರ್ಥ ಅವರಿಂದ ಸನ್ಯಾಸ ದೀಕ್ಷೆ ಪಡೆಇದ್ದರು.ಧಾರ್ಮಿಕ ಚಟುವಟಿಕೆಗಳ ಮೂಲಕವೇ ಹೆಸರಾಗಿರುವ ವಿದ್ಯಾಧೀಶ ತೀರ್ಥ ಶ್ರೀಪಾದರು ತಮ್ಮ ಎರಡನೇ ಪರ್ಯಾಯ ಅವಧಿಯಲ್ಲಿ ಶ್ರೀಕೃಷ್ಣನ ಪೂಜಾ ಕೈಂಕರ್ಯದಲ್ಲಿ ತೊಡಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test: ವಿಂಡೀಸ್ ವಿರುದ್ಧ ಕುಲದೀಪ್ ಯಾದವ್ ಭರ್ಜರಿ ಬೌಲಿಂಗ್, ವಿಶ್ವ ದಾಖಲೆ

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

SCROLL FOR NEXT