ಗೋವಾ ಬಂದರು ಪ್ರವೇಶಿಸಿದ ಎಫ್ಎನ್ಎಸ್ ಚಾರ್ಲ್ಸ್ 
ರಾಜ್ಯ

ಭಾರತ-ಫ್ರಾನ್ಸ್ ವರುಣಾ ನೌಕಾ ಸಮರಭ್ಯಾಸ: ಐಎನ್ಎಸ್ ವಿಕ್ರಮಾದಿತ್ಯ ಭಾಗವಹಿಸುವುದು ಖಚಿತ!

ಎಂಜಿನ್ ಕೋಣೆಯಲ್ಲಿ ಅಗ್ನಿ ಆಕಸ್ಮಿಕವುಂಟಾಗಿ ಓರ್ವ ನೌಕಾಪಡೆ ಅಧಿಕಾರಿ ಮೃತಪಟ್ಟ ಘಟನೆಯ ನಂತರ...

ಕಾರವಾರ: ಎಂಜಿನ್ ಕೋಣೆಯಲ್ಲಿ ಅಗ್ನಿ ಆಕಸ್ಮಿಕವುಂಟಾಗಿ ಓರ್ವ ನೌಕಾಪಡೆ ಅಧಿಕಾರಿ ಮೃತಪಟ್ಟ ಘಟನೆಯ ನಂತರ ಇದೀಗ ಭಾರತದ ಏಕಮಾತ್ರ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಮಾದಿತ್ಯ ಸಹಜ ಸ್ಥಿತಿಗೆ ಬಂದಿದೆ. ನಿನ್ನೆ ಗೋವಾ ಸಮುದ್ರ ತೀರದಲ್ಲಿ ಆರಂಭಗೊಂಡ ವರುಣಾ 19.1 ಭಾರತ-ಫ್ರಾನ್ಸ್ ನೌಕಾ ಕಸರತ್ತಿನ 17ನೇ ಆವೃತ್ತಿಯಲ್ಲಿ ಭಾಗಿಯಾಗಿದೆ.
ಐಎನ್ಎಸ್ ವಿಕ್ರಮಾದಿತ್ಯ ನೌಕಾ ಕಸರತ್ತಿನಲ್ಲಿ ಇನ್ನೊಂದೆರಡು ದಿನಗಳಲ್ಲಿ ಭಾಗಿಯಾಗಲಿದೆ. ಮುಂಬೈಯ ನುರಿತ ತಂಡ ಕಾರವಾರಕ್ಕೆ ಆಗಮಿಸಿದ್ದು ಅಗ್ನಿ ಅವಘಡದ ನಂತರ ಹಡಗನ್ನು ದುರಸ್ತಿ ಮಾಡುವ ಕಾರ್ಯದಲ್ಲಿ ಹಗಲು-ರಾತ್ರಿ ಶ್ರಮಿಸುತ್ತಿದ್ದು ನಾಳೆಯೊಳಗೆ ವಿಮಾನವಾಹಕ ನೌಕೆ ಸಿದ್ಧವಾಗಲಿದೆ.
10 ದಿನಗಳ ನೌಕಾ ಸಮರಾಭ್ಯಾಸ ಎರಡು ಹಂತಗಳಲ್ಲಿ ನಡೆಯಲಿದೆ. ಗೋವಾದಲ್ಲಿ ಬಂದರು ಹಂತದಲ್ಲಿ ಪ್ರಾಜೆಕ್ಟ್ ಗಳ ಕಲಿಕೆಗೆ ಒಂದು ವಾಟರ್ ಶೆಡ್ ನಿಂದ ಇನ್ನೊಂದು ವಾಟರ್ ಶೆಡ್ ಕಡೆ ಚಲಿಸುವುದು, ವೃತ್ತಿಪರ ಸಂವಹನ, ಕ್ರೀಡಾ ಚಟುವಟಿಕೆ ಒಳಗೊಂಡಿರುತ್ತದೆ. ಎರಡನೇ ಸಮುದ್ರ ಹಂತದಲ್ಲಿ ಕಡಲ ಕಾರ್ಯಾಚಕಣೆಯಲ್ಲಿ ವಿವಿಧ ಹಂತಗಳನ್ನು ಒಳಗೊಂಡಿರುತ್ತದೆ. ಎರಡನೇ ಹಂತ ಮೇ ತಿಂಗಳ ಕೊನೆ ವೇಳೆಗೆ ಜಿಬೌತಿ, ಪೂರ್ವ ಆಫ್ರಿಕಾಗಳಲ್ಲಿ ನಡೆಯಲಿದೆ. ಅಲ್ಲಿ ಫ್ರಾನ್ಸ್ ನೌಕಾಪಡೆ ಕಾರ್ಯತಂತ್ರ ನೆಲೆಯನ್ನು ಹೊಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT