ರಾಜ್ಯ

ಗದಗ: ಆಕರ್ಷಕ ಬಹುಮಾನದ ಆಮಿಷವೊಡ್ಡಿ ಲಾಟರಿ ಕಂಪೆನಿಯಿಂದ 4 ಸಾವಿರ ಮಂದಿಗೆ ಪಂಗನಾಮ!

Sumana Upadhyaya
ಗದಗ: ಜಿಲ್ಲೆಯ ನರಗುಂದ ತಾಲ್ಲೂಕಿನ ಲಾಟರಿ ಕಂಪೆನಿಯಿಂದ ಮೋಸಕ್ಕೊಳಗಾದ ಗ್ರಾಹಕರು ಲಾಟರಿ ಕಂಪೆನಿ ಮಾಲೀಕನ ಮನೆಯೊಳಗೆ ನುಗ್ಗಿ ಆತನನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಲಾಟರಿ ಖರೀದಿಸಿದ್ದ ಕೆಲವು ಮಹಿಳೆಯರು ಮಾಲೀಕರ ಮನೆಯೊಳಗೆ ನುಗ್ಗಿ ಕುರ್ಚಿ ಮತ್ತು ಟೇಬಲ್ ಗಳನ್ನು ಹೊತ್ತುಕೊಂಡು ಹೋದ ಪ್ರಸಂಗ ಕೂಡ ನಡೆಯಿತು.
ನರಗುಂದ ತಾಲ್ಲೂಕಿನ ಸುಮಾರು 4 ಸಾವಿರ ಮಂದಿ ಹಲವರು 250 ರೂಪಾಯಿ ಕಟ್ಟಿ ಲಾಟರಿ ಖರೀದಿಸಿ ಕಂಪೆನಿಯಿಂದ ಬಹುಮಾನ ಘೋಷಿಸುವುದಕ್ಕೆ ಕಾಯುತ್ತಿದ್ದರು.
ಫಲಿತಾಂಶ ಘೋಷಿಸಿದಾಗ ಹಣ ಕೊಟ್ಟು ಟಿಕೆಟ್ ಖರೀದಿಸಿದವರ ಯಾರ ಹೆಸರು ಕೂಡ ಇರಲಿಲ್ಲ. ಇದರಿಂದ ಆಕ್ರೋಶಗೊಂಡ ಜನರು ಕಾಡಪ್ಪ ಕಕನೂರು ಮತ್ತು ನರಗುಂದ ಪಟ್ಟಣದ ಹುಣಸಿಕಟ್ಟಿ ಗ್ರಾಮದ ಚಿಕ್ಕೊಪ್ಪದ ಎಸ್ ಕೆಯವರ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.
SCROLL FOR NEXT