ರಾಜ್ಯ

ಬೆಂಗಳೂರಿನಲ್ಲಿ ಬಾಲಕಿಯರಿಬ್ಬರ ಶಂಕಾಸ್ಪದ ಸಾವು!

Vishwanath S
ಬೆಂಗಳೂರು: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಬಾಲಕಿಯರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ರಾಜಗೋಪಾಲನಗರದ ಸಂಪ್ ಗೆ ಬಿದ್ದು 12 ವರ್ಷದ ಜ್ಯೋತಿ ಮೃತಪಟ್ಟಿದ್ದು ಈಕೆಯ ಸಾವಿನ ಹಿಂದೆ ವಾಮಾಚಾರದ ಆರೋಪ ಕೇಳಿಬಂದಿದೆ. ಮತ್ತೊಂದು ಪ್ರಕರಣದಲ್ಲಿ ಬಾಗಲಗುಂಟೆಯ 11 ವರ್ಷದ ಪೂಜಾ ಎಂಬಾಕೆಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಸಂಶಯಾಸ್ಪದವಾಗಿ ಪತ್ತೆಯಾಗಿದೆ.
ಅನ್ಭುಕುಮಾರ್ 5 ತಿಂಗಳ ಹಿಂದೆ ನಗರದಲ್ಲಿ ಹೊಸ ಮನೆ ಕಟ್ಟಿದ್ದ. ಹೊಸ ಮನೆಯಲ್ಲಿ ಪೂಜೆ ಮಾಡುವ ಸಂದರ್ಭ ನರ ಬಲಿ ಕೊಡಬೇಕು ಎಂದು ಬೇರೆಯವರ ಬಳಿ ಈ ಹಿಂದೆ ಹೇಳಿಕೊಂಡಿದ್ದ. ಆದರೆ, ಸ್ಥಳೀಯರು ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದರು. ಇದೀಗ ಬಾಲಕಿ ಸಾವು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. 
ಈ ಸಂಬಂಧ ಅನ್ಭುಕುಮಾರ್ ರನ್ನು ಪೊಲೀಸರು ಬಂಧಿಸಿದ್ದಾರೆ.
SCROLL FOR NEXT