ರಾಜ್ಯ

ಬೆಂಗಳೂರು: ಗಂಡು ಮಗು ಸಾವು, ನೊಂದ ತಂದೆ ಫ್ಲೈ ಓವರ್ ನಿಂದ ಜಿಗಿದು ಆತ್ಮಹತ್ಯೆ

Lingaraj Badiger
ಬೆಂಗಳೂರು: ಅನಾರೋಗ್ಯದಿಂದ 15 ದಿನದ ಗಂಡು ಮಗು ಮೃತಪಟ್ಟಿದ್ದರಿಂದ ನೊಂದ ತಂದೆ ಫ್ಲೈ ಓವರ್ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಶುಕ್ರವಾರ ನಡೆದಿದೆ.
ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಕಾಮಾಕ್ಷಿಪಾಳ್ಯದ ನಿವಾಸಿ ನರಸಿಂಹಮೂರ್ತಿ(28) ಎಂದು ಗುರುತಿಸಲಾಗಿದ್ದು, ಅವರ ಪತ್ನಿ ಇತ್ತೀಚಿಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗು ತೀವ್ರ ಅನಾರೋಗ್ಯದಿಂದ ಮೃತಪಟ್ಟಿತ್ತು. 
ಮಗುವಿನ ಸಾವಿನಿಂದ ತೀವ್ರ ಮನನೊಂದಿದ್ದ ಆಂಧ್ರ ಪ್ರದೇಶ ಮೂಲದ ನರಸಿಂಹಮೂರ್ತಿ ಅವರು ಇಂದು ಬೆಳಗ್ಗೆ ಪೀಣ್ಯಾದ ಫ್ಲೈಓವರ್ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಐದು ವರ್ಷಗಳ ಹಿಂದೆ ವಿವಾಹವಾಗಿದ್ದ ನರಸಿಂಹಮೂರ್ತಿ ಅವರಿಗೆ ಒಂದು ಹೆಣ್ಣು ಮಗುವಿದ್ದು, ಹೆರಿಗೆಗೆ ಹೋದ ಪತ್ನಿ ಹಾಗೂ ಮಗಳು ತವರಿನಲ್ಲಿ ಉಳಿದುಕೊಂಡಿದ್ದರು.
ಈ ಸಂಬಂಧ ಪೀಣ್ಯಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
SCROLL FOR NEXT