ಬೆಂಗಳೂರು: ಮೇ 12ರ ಭಾನುವಾರ ವಿಶ್ವ ತಾಯಂದಿರ ದಿನ. ಈ ಸಂದರ್ಭದಲ್ಲಿ ಹಲವು ಸೆಲೆಬ್ರಿಟಿಗಳು, ಖ್ಯಾತ ಗಣ್ಯರು ತಮ್ಮ ತಾಯಂದಿರನ್ನು ನೆನೆದು ಶುಭಾಶಯ ಕೋರಿದ್ದಾರೆ.
ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ವಿಶ್ವ ಅಮ್ಮಂದಿರ ದಿನಾಚರಣೆ ಅಂಗವಾಗಿ ರಾಜ್ಯದ ಜನತೆಗೆ ಶುಭಾಶಯ ಕೋರಿದ್ದಾರೆ. ಕವಿ ಬಿ ಆರ್ ಲಕ್ಷ್ಮಣ್ ರಾವ್ ಅವರ, ಅಮ್ಮ, ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು/ಮಿಡುಕಾಡುತಿರುವೆ ನಾನು ಎಂದು ಕವನದ ಸಾಲುಗಳನ್ನು ಉಲ್ಲೇಖಿಸಿದ್ದಾರೆ. ಅಮ್ಮನ ಸ್ಥಾನವನ್ನು ಜಗತ್ತಿನ ಯಾವ ಸಂಪತ್ತೂ ತುಂಬಿಸಲಾಗದು. ಅಂತಹ ಅಪೂರ್ವ ಸಂಪತ್ತಿಗಾಗಿ ಮೀಸಲಿರುವ ದಿನವಿದು ಎಂದು ಹೇಳಿದ್ದಾರೆ.