ಪಾವಗಡ ಗ್ರಾಮಸ್ಥರಿಂದ ಪೂಜೆ 
ರಾಜ್ಯ

ವರುಣ ದೇವನ ಸಂತೃಪ್ತಿಗೊಳಿಸಲು ಗೊಡ್ಡು ಸಂಪ್ರದಾಯಕ್ಕೆ ಮೊರೆ ಹೋದ ತುಮಕೂರು ಗ್ರಾಮಸ್ಥರು!

ರಾಜ್ಯದ ಹಲವು ಜಿಲ್ಲೆಗಳಲ್ಲಿ ನೀರಿಗೆ ಬರಗಾಲ ಬಂದಿದೆ. ಬೋರ್ ವೆಲ್ ಗಳಲ್ಲಿ ನೀರು ಬತ್ತಿ ಹೋಗುತ್ತಿವೆ...

ತುಮಕೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ನೀರಿಗೆ ಬರಗಾಲ ಬಂದಿದೆ. ಬೋರ್ ವೆಲ್ ಗಳಲ್ಲಿ ನೀರು ಬತ್ತಿ ಹೋಗುತ್ತಿವೆ. ತುಮಕೂರಿನ ಪಾವಗಡ ತಾಲ್ಲೂಕಿನ ಜನರು ಮಳೆದೇವರು ವರುಣನ ಮೊರೆ ಹೋಗಿದ್ದಾರೆ.
ಪೂಜೆ, ಪುನಸ್ಕಾರ ಮಾಡಿ ದೇವರನ್ನು ಒಲಿಸಿಕೊಳ್ಳುವುದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಗ್ರಾಮದ ಗಡಿಯಲ್ಲಿರುವ ದೊಡ್ಡ ಬಂಡೆ ಕಲ್ಲೊಂದನ್ನು ಉರುಳಿಸಿ ತಂದು ಮತ್ತೊಂದು ಗ್ರಾಮಕ್ಕೆ ಅಡ್ಡಲಾಗಿ ಇಟ್ಟಿದ್ದಾರೆ.ಬಂಡೆಯನ್ನು ಉರುಳಿಸಿದರೆ ಮಳೆ ಬರುತ್ತದೆ ಎಂಬ ಮೂಢನಂಬಿಕೆ ಇಲ್ಲಿನ ಗ್ರಾಮಸ್ಥರದ್ದು. ಕಳೆದ ಭಾನುವಾರ ಬೆಳಗ್ಗೆ ಬೆಳ್ಳಿಬಟ್ಟಲು ಗ್ರಾಮಸ್ಥರು ಈ ಸಂಪ್ರದಾಯವನ್ನು ತರಾತುರಿಯಿಂದ ಮಾಡಿ ಮುಗಿಸಿದ್ದಾರೆ.
ಸಣ್ಣ ಗುಂಡಿಯೊಂದನ್ನು ತೋಡಿ ಪ್ಲಾಸ್ಟಿಕ್ ಶೀಟನ್ನು ಅದರ ಮೇಲಿಟ್ಟಿದ್ದಾರೆ, ಗ್ರಾಮದೇವತೆಯನ್ನು ಗುಂಡಿಯ ಹತ್ತಿರ ಮೆರವಣಿಗೆಯಲ್ಲಿ ತಂದು ವಿಶೇಷ ಪೂಜೆ ಮಾಡಿದ್ದಾರೆ. ಅರ್ಚಕ ಪಾಳಯ್ಯನ ಮಾರ್ಗದರ್ಶನದಂತೆ ಗ್ರಾಮದಿಂದ 4 ಕಿಲೋ ಮೀಟರ್ ದೂರದಲ್ಲಿರುವ ಅಕ್ಕಮ್ಮ ಬೆಟ್ಟದ ತಪ್ಪಲಿನಲ್ಲಿರುವ ಸಣ್ಣ ಕೊಳದಿಂದ ನೀರನ್ನು ತಂದು ಗ್ರಾಮದಲ್ಲಿ ತೋಡಿದ ಗುಂಡಿಗೆ ನೀರನ್ನು ಗ್ರಾಮಸ್ಥರು ಸುರಿದರು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಪ್ರಖ್ಯಾತ ಗೌಡಚಂದ್ರ ಮಾರಮ್ಮ ದೇವತೆಯ ಮೂರ್ತಿಯನ್ನು ಗ್ರಾಮಕ್ಕೆ ತಂದು ಅದರ ಮುಖವನ್ನು ಗುಡ್ಡದ ಮೇಲಿರುವ ಕೊಳ್ಳದ ನೀರಿನಿಂದ ತೊಳೆದು ಪೂಜೆ ಸಲ್ಲಿಸಲಾಯಿತು.
ಕೆಲ ದಿನಗಳ ಹಿಂದೆ ಗ್ರಾಮ ಪಂಚಾಯತ್ ಅಧ್ಯಕ್ಷ ಗಿರಿಜಾ ಸತ್ಯನಾರಾಯಣ ಮತ್ತು ಸದಸ್ಯರಾದ ರಾಜಣ್ಣ ಮತ್ತು ಲಿಂಗಯ್ಯ ಸಭೆ ಸೇರಿ ಜಲ್ದಿ ಪೂಜೆ ಮಾಡುವ ಕುರಿತು ತೀರ್ಮಾನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT