ರಾಜ್ಯ

ಬೆಳಗಾವಿ: ಕತ್ತು ಸೀಳಿ ಪೆಟ್ರೋಲ್ ಬಂಕ್​ನ ಕಾರ್ಮಿಕರಿಬ್ಬರ ಭೀಕರ ಹತ್ಯೆ

Vishwanath S
ಬೆಳಗಾವಿ: ಪೆಟ್ರೋಲ್ ಬಂಕ್ ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರನ್ನು ಇಂದು ಬೆಳಗ್ಗೆ ಹತ್ಯೆ ಮಾಡಿರುವ ದಾರುಣ ಘಟನೆ ಬೆಳಗಾವಿ ಕಿತ್ತೂರಿನ ಶಿವ ಪೆಟ್ರೋಲ್ ಪಂಪ್ ನಲ್ಲಿ ನಡೆದಿದೆ.
ಪೊಲೀಸ್ ಅಧೀಕ್ಷಕ ಸುಧೀರ್ ಕುಮಾರ್ ರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿ, ಧಾರವಾಡ-ಕಿತ್ತೂರು ಹಾಗೂ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶಿವ ಪೆಟ್ರೋಲ್ ಪಂಪ್ ನಲ್ಲಿ ಆಗುಂತಕರು ಕಾರ್ಮಿಕರಿಬ್ಬರನ್ನು ಕೊಲೆಗೈದು ಹಣ ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿಸಿದರು.
ಮೃತರನ್ನು ತಿಗಡೊಳ್ಳಿ ಗ್ರಾಮದ ಮುಶ್ತಾಕ್ ಬೀದಿ (30) ಹಾಗೂ ಲಿಂಗದಳ್ಳಿ ಗ್ರಾಮದ ಮಂಜುನಾಥ್ ಪಟ್ಟಣ್ ಶೆಟ್ಟಿ (28) ಎಂದು ಗುರುತಿಸಲಾಗಿದೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಅವರು ತಿಳಿಸಿದರು.
SCROLL FOR NEXT