ಕಿಶೋರ್ ಕುಮಾರ್ 
ರಾಜ್ಯ

ಶಿವಮೊಗ್ಗ: ಸೇನೆ ಸೇರಲು ಆಸಕ್ತಿ ಹೊಂದಿರುವ ಯುವಕರಿಗೆ ಉಚಿತ ತರಬೇತಿ ನೀಡುವ ಮಾಜಿ ಸೈನಿಕ

ಮಲೆನಾಡು ಸೆರಗು ಶಿವಮೊಗ್ಗ ಜಿಲ್ಲೆಯ ಅನಂದಪುರಂ ಬಳಿ ಸೇನೆ ಸೇರಲು ಉತ್ಸುಕರಾಗಿರುವ ಗ್ರಾಮೀಣ ಭಾಗದ ಯುವಕರಿಗೆ ಮಾಜಿ ಸೈನಿಕರೊಬ್ಬರು ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ.

ಶಿವಮೊಗ್ಗ: ಮಲೆನಾಡು ಸೆರಗು ಶಿವಮೊಗ್ಗ ಜಿಲ್ಲೆಯ ಅನಂದಪುರಂ ಬಳಿ ಸೇನೆ ಸೇರಲು ಉತ್ಸುಕರಾಗಿರುವ ಗ್ರಾಮೀಣ ಭಾಗದ  ಯುವಕರಿಗೆ ಮಾಜಿ ಸೈನಿಕರೊಬ್ಬರು ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ.

ಮೇ 28 ರಂದು ಸೇನಾ ನೇಮಕಾತಿ ನಡೆಯುತ್ತಿದೆ . ಈ ಹಿನ್ನೆಲೆಯಲ್ಲಿ  ಸುತ್ತಮುತ್ತಲಿನ ಸುಮಾರು 80 ಯುವಕರಿಗೆ   ಮಾಜಿ ಸೈನಿಕ ಕಿಶೋರ್ ಕುಮಾರ್ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ಇವರು ಸೇನೆಯಲ್ಲಿ 18 ವರ್ಷ ಸೇವೆ ಸಲ್ಲಿಸಿದ್ದಾರೆ.

ಬೈರಾಪುರ ಗ್ರಾಮದ ಕಿಶೋರ್ ಕುಮಾರ್ ಮದ್ರಾಸ್ ರೆಜಿಮೆಂಟ್ ನಲ್ಲಿ  ಸೇವೆ ಸಲ್ಲಿಸಿದ್ದಾರೆ. ಸೇನೆ ಸೇರಲು ಏನು ಮಾಡಬೇಕೆಂಬ ಬಗ್ಗೆ ಇಲ್ಲಿನ ಯುವಕರಿಗೆ ಮಾಹಿತಿ ದೊರೆಯುತ್ತಿಲ್ಲ. ಆದ್ದರಿಂದ ಯೋಚಿಸಿ ಕೋಚಿಂಗ್ ಸೆಂಟರ್ ಆರಂಭಿಸಿದ್ದೇನೆ. ಇದರಿಂದಲೇ ಅವರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

ನಾಗರಿಕ ಸೇವೆ ಸೇರಬಯಸುವ ಆಕಾಂಕ್ಷಿಗಳಿಗೆ ಕೋಚಿಂಗ್ ಸೆಂಟರ್ ಗಳು ಇರುವುದನ್ನ ನಾವು ನೋಡಿದ್ದೇವೆ. ಆದರೆ. ಸೇನೆ ಸೇರಬೇಕೆನ್ನುವ ಆಕಾಂಕ್ಷಿಗಳಿಗೆ ಒಂದೇ ಒಂದು ಕೋಚಿಂಗ್ ಸೆಂಟರ್ ಕಾಣಸಿಗುವುದಿಲ್ಲ. ದಕ್ಷಿಣ ಭಾರತದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೇನೆ ಸೇರಬೇಕು ಎನ್ನುವುದು ನನ್ನ ಉದ್ದೇಶವಾಗಿದೆ. ಇದು ದೇಶಭಕ್ತಿ ಕಾಯಕ ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ಹೇಳಿದ್ದಾರೆ.

 ಆಟೋ ಚಾಲಕರು, ಬಸ್ ಏಜೆಂಟ್, ವ್ಯಾಪಾರಿಗಳು ಮತ್ತು ತರಕಾರಿ ವ್ಯಾಪಾರಿಗಳಿಂದ  ನಿಧಿ ಸಂಗ್ರಹಿಸುತ್ತಾರೆ. ಆ ಹಣದಲ್ಲಿ ಬಡ ಕುಟುಂಬದಿಂದ ಬಂದ ಮಕ್ಕಳಿಗೆ ಆನ್ ಲೈನ್ ನಲ್ಲಿ ಹೇಗೆ ಅರ್ಜಿ ತುಂಬುವುದು ಸೇರಿದಂತೆ ಎಲ್ಲಾ ರೀತಿಯ ನೆರವು ನೀಡುತ್ತಿದ್ದಾರೆ.

ಕಿಶೋರ್ ಕುಮಾರ್ ಜೊತೆಗೆ ಮೂವರು ಸೈನಿಕರು ಹಾಗೂ ಮಾಜಿ ಸೈನಿಕರೊಬ್ಬರು ಸೇರಿಕೊಂಡಿದ್ದಾರೆ.  ಸೈನಿಕರು ರಜೆಯ ಸಂದರ್ಭದಲ್ಲಿ ಬಂದು ಯುವಕರಿಗೆ ದೈಹಿಕತೆ ಬಗ್ಗೆ ತರಬೇತಿ ನೀಡಿದರೆ, ಮಾಜಿ ಸೈನಿಕರೊಬ್ಬರು ವ್ಯಾಯಾಮಾದ ಬಗ್ಗೆ ತರಬೇತಿ ನೀಡುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT