ತನ್ನ ಮೃತದೇಹದ ಫೋಟೋವನ್ನು ತಾನೇ ಕಳಿಸಿದ ವ್ಯಕ್ತಿ: ದಾವಣಗೆರೆಯಲ್ಲಿ ಕೆಲಕಾಲ ಆತಂಕ ! 
ರಾಜ್ಯ

ತನ್ನ ಮೃತದೇಹದ ಫೋಟೋವನ್ನು ತಾನೇ ಕಳಿಸಿದ ವ್ಯಕ್ತಿ: ದಾವಣಗೆರೆಯಲ್ಲಿ ಕೆಲಕಾಲ ಆತಂಕ!

ಯುವಕನೋರ್ವ ತನ್ನದೇ ಮೃತದೇಹದ ಫೋಟೊಗಳನ್ನು ತಾನೆ ಕಳಿಸಿ ಆತಕ ಪೋಷಕರು, ಸ್ನೇಹಿತರು ಕಂಗಾಲಾಗುವಂತೆ ಮಾಡಿದ್ದ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ.

ದಾವಣಗೆರೆ: ಯುವಕನೋರ್ವ ತನ್ನದೇ ಮೃತದೇಹದ ಫೋಟೊಗಳನ್ನು ತಾನೆ ಕಳಿಸಿ ಆತಕ  ಪೋಷಕರು, ಸ್ನೇಹಿತರು ಕಂಗಾಲಾಗುವಂತೆ ಮಾಡಿದ್ದ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ. 
ಘಟನೆಯ ವಿವರ ತಿಳಿಯುತ್ತಿದ್ದಂತೆಯೇ ಆ ಯುವಕನ ಉದ್ದೇಶ ಬಹಿರಂಗವಾಗುತ್ತಿದ್ದಂತೆಯೇ ಪೊಲೀಸರು ಆತನನ್ನು ಬಂಧಿಸಿದ್ದಾರೆ. ದಾವಣಗೆರೆಯ ಯೆಲ್ಲಮ್ಮ ನಗರದ ನಿವಾಸಿ 23 ವರ್ಷದ ಪರಶುರಾಮ್  ಬಂಧಿತ ವ್ಯಕ್ತಿಯಾಗಿದ್ದು, ಪೋಷಕರು ಹಾಗೂ ಸ್ನೇಹಿತರಿಗೆ ಆತಂಕ ಉಂಟುಮಾಡುವುದಕ್ಕಾಗಿಯೇ ಈ ರೀತಿ ಮಾಡಿದ್ದಾನೆಂದು ತಿಳಿದುಬಂದಿದೆ. 
ದಾವಣಗೆರೆಯಲ್ಲಿ ಕಳೆದ ಕೆಲವು ದಿನಗಳಿಂದ ಸರಣಿ ಕೊಲೆಗಳು ನಡೆಯುತ್ತಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದದ್ದನ್ನು ಕಂಡ ಜನತೆ ಆತಂಕಕ್ಕೊಳಗಾಗಿದ್ದರು. ಪೊಲೀಸರು ವಿಚಾರಣೆಗೊಳಪಡಿಸಿದ ನಂತರ ಪರಶುರಾಮ್ ಎಂಬ ಯುವಕ ಸ್ಮಾರ್ಟ್ ಫೋನ್ ಗಾಗಿ ಹೀಗೆ ಮಾಡಿದ್ದಾನೆಂದು ತಿಳಿದುಬಂದಿದೆ. 
ಪರಶುರಾಮ್ ಹಾಗೂ ಸ್ನೇಹಿತರಿಗೆ ಆಕಸ್ಮಿಕವಾಗಿ ಸ್ಮಾರ್ಟ್ ಫೋನ್ ಸಿಕ್ಕಿದೆ, ಅದನ್ನು ಸ್ನೇಹಿತರಿಗೆ ಕೊಡುವುದಕ್ಕೆ ಇಷ್ಟ ಇಲ್ಲದೇ, ತಾನೆ ಇಟ್ಟುಕೊಳ್ಳಲು, ಸ್ನೇಹಿತರು ಹಾಗೂ ಕುಟುಂಬ ಸದಸ್ಯರನ್ನು ಭಯಪಡಿಸುವ ಉದ್ದೇಶದಿಂದ, ಟೊಮ್ಯಾಟೋ ಕೆಚ್ ಅಪ್, ಕುಂಕುಮದ ನೀರನ್ನು ತನ್ನ ಮೇಲೆ ಹಾಕಿಕೊಂಡು ಈ ರೀತಿ ತನ್ನದೇ ಮೃತದೇಹದ ಫೋಟೋವನ್ನು ವೈರಲ್ ಮಾಡಿದ್ದಾನೆಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT