ಸಂಗ್ರಹ ಚಿತ್ರ 
ರಾಜ್ಯ

9 ಗ್ರಾಮಗಳಿಗೆ ಒಬ್ಬನೇ ಪೌರಕಾರ್ಮಿಕ: ವೇತನ ನೀಡುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ

9 ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲು ಅಧಿಕಾರಿಗಳು ಒಬ್ಬ ಕಾರ್ಮಿಕನನ್ನು ನೇಮಿಸಿದ್ದು, ವೇತನ ನೀಡುವಲ್ಲಿ ಅಧಿಕಾರಿಗಳು ವಹಿಸುತ್ತಿರುವ ನಿರ್ಲಕ್ಷ್ಯ ತಮ್ಮ ಮಕ್ಕಳ ಕನಸ್ಸನ್ನು ನನಸು ಮಾಡಲು ದಿನವಿಡೀ ಕಷ್ಟ ಪಡುವ ಈ ಪೌರಕಾರ್ಮಿಕನನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. 

ಬೆಂಗಳೂರು: 9 ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲು ಅಧಿಕಾರಿಗಳು ಒಬ್ಬ ಕಾರ್ಮಿಕನನ್ನು ನೇಮಿಸಿದ್ದು, ವೇತನ ನೀಡುವಲ್ಲಿ ಅಧಿಕಾರಿಗಳು ವಹಿಸುತ್ತಿರುವ ನಿರ್ಲಕ್ಷ್ಯ ತಮ್ಮ ಮಕ್ಕಳ ಕನಸ್ಸನ್ನು ನನಸು ಮಾಡಲು ದಿನವಿಡೀ ಕಷ್ಟ ಪಡುವ ಈ ಪೌರಕಾರ್ಮಿಕನನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. 

ಚಾಮರಾಜನಗರ ಜಿಲ್ಲೆಯ ಗೌಡಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಪೌರಕಾರ್ಮಿಕರಾಗಿರುವ ಮಹೇಂದ್ರ ಅವರ ಕಷ್ಟ ಹೇಳತೀರದಾಗಿದೆ. ಗ್ರಾಮಗಳಲ್ಲಿ 7 ವಾಟರ್ ಮ್ಯಾನ್'ಗಳು, ಇಬ್ಬರು ಬಿಲ್ ಸಂಗ್ರಹಕಾರರಿದ್ದಾರೆ. ಆದರೆ, 9 ಗ್ರಾಮಗಳಿಗೆ ಮಹೇಂದ್ರ ಒಬ್ಬರನ್ನೇ ಪೌರಕಾರ್ಮಿಕರನ್ನಾಗಿ ನೇಮಿಸಲಾಗಿದೆ. 

9 ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಿರುವ ಮಹೇಂದ್ರ ಅವರಿಗೆ ವೇತನ ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿದ್ದು. ಇದರಿಂದ ತಮ್ಮ ಮಕ್ಕಳ ಕನಸು ನನಸು ಮಾಡಲು ಹೊರಟಿರುವ ಮಹೇಂದ್ರ ಅವರು ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. 

ಮಾಡಿದ ಕೆಲಸಕ್ಕೆ ಸ್ಥಳೀಯ ಅಧಿಕಾರಿಗಳು ಸೂಕ್ತ ರೀತಿಯ ವೇತನ ಹಾಗೂ ಗೌರವಗಳನ್ನು ನೀಡುತ್ತಿಲ್ಲ. ಪ್ರತೀ ಗ್ರಾಮಕ್ಕೂ ಬಸ್ ನಲ್ಲಿಯೇ ತೆರಳಿ ಸ್ವಚ್ಛಗೊಳಿಸುತ್ತಿದ್ದೇನೆ. ಬಸ್ ನಲ್ಲಿ ತೆರಳಲು ಆಗುವಂತಹ ವೆಚ್ಚವನ್ನು ಸರ್ಕಾರ ನೀಡುತ್ತಿಲ್ಲ. ಪ್ರತೀನಿತ್ಯ ಮೂರು, ಮೂರು ಗ್ರಾಮಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ಗ್ರಾಮಗಳನ್ನು ಸ್ವಚ್ಛ ಮಾಡುತ್ತಿಲ್ಲ ಎಂದು ಸಾಕಷ್ಟು ಮಂದಿ ನನ್ನ ವಿರುದ್ಧ ದೂರು ನೀಡುತ್ತಾರೆ. ಒಂದೇ ದಿನಗಲ್ಲಿ 9 ಗ್ರಾಮಗಳನ್ನು ಸ್ವಚ್ಛಗೊಳಿಸುವುದು ಸಾಧ್ಯವಾಗುವುದಿಲ್ಲ. ವೇತನಕ್ಕಾಗಿ ಪ್ರತೀ ಬಾರಿ ಹೋರಾಟ ಮಾಡಬೇಕು. ಅಧಿಕಾರಿಗಳೊಂದಿಗೆ ಮಾತನಾಡಲು ಮುಂದಾದರೆ, ಬೆಂಗಳೂರಿಗೆ ಹೋಗಿ ಉನ್ನತಾಧಿಕಾರಿಗಳೊಂದಿಗೆ ಮಾತನಾಡಿ ಎಂದು ಹೇಳುತ್ತಾರೆ ಎಂದು ಹೇಳಿದ್ದಾರೆ. 

ಈ ನಡುವೆ ರಾಜ್ಯ ಪೌರಕಾರ್ಮಿಕ ಸಮಿತಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಅವರಿಗೆ ಮನವಿ ಮಾಡಿಕೊಂಡಿದ್ದು, ಗ್ರಾಮಗಳಲ್ಲಿ ಪೌರ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸುವಂತೆ ತಿಳಿಸಿದ್ದಾರೆ. 

ಜು.23ರ ಸರ್ಕಾರದ ಆದೇಶದ ಪ್ರಕಾರ  5000 ಮಂದಿಗೆ ಒಬ್ಬ ಪೌರ ಕಾರ್ಮಿಕ ಇರಬೇಕೆಂದು ತಿಳಿಸಿದೆ. ಐಪಿಡಿ ಸಾಲಪ್ಪ ವರದಿ ಪ್ರಕಾರ 500 ಮಂದಿಗೆ ಒಬ್ಬ ಪೌರಕಾರ್ಮಿಕನಿರಬೇಕೆಂದು ತಿಳಿಸಿದೆ. 

ಮನವಿ ಸ್ವೀಕರಿಸಿರುವ ಉಮಾ ಮಹದೇವನ್ ಅವರು, ಗ್ರಾಮಗಳಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಶೀಘ್ರದಲ್ಲಿಯೇ ಪರಿಹಾರವನ್ನು ಕಂಡುಕೊಳ್ಳಲಾಗುತ್ತದೆ ಎಂದಿದ್ದಾರೆ. 

ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕ ಅಶ್ರಫ್ ಉಲ್ ಹಸನ್ ಮಾತನಾಡಿ, ವೇತನ ನಿಯಮಾವಳಿಗಳನ್ನು ಬದಲಾವಣೆ ಮಾಡಲು ಕಾರ್ಯಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

GBA ಆಯ್ತು.. ಈಗ ಗ್ರೇಟರ್ ಮೈಸೂರು ಸಿಟಿ ಕಾರ್ಪೋರೇಷನ್ ಗೆ ಸಂಪುಟ ಅನುಮೋದನೆ!

'ಮಾತು' ಜಗತ್ತಿಗೆ ಉತ್ತಮವಾಗದ ಹೊರತು ಅದು ಶಕ್ತಿಯಲ್ಲ; ಡಿಕೆಶಿ ಪೋಸ್ಟ್​​ಗೆ CM ಸಿದ್ದರಾಮಯ್ಯ ಕೌಂಟರ್

ಮಹಿಳೆಗೆ ಕಚ್ಚಿದ ನಾಯಿ, ಪ್ರಶ್ನೆ ಮಾಡಿದ ಸಂತ್ರಸ್ಥೆಗೆ ಮಾಲಕಿ ಕಪಾಳಮೋಕ್ಷ, Video Viral

ಸಂಸತ್ತಿನಲ್ಲಿ 'ವಂದೇ ಮಾತರಂ', 'ಜೈ ಹಿಂದ್' ಘೋಷಣೆಗಳಿಗೆ ಆಕ್ಷೇಪಣೆ ಯಾಕೆ?: ಬಿಜೆಪಿ ಪ್ರಶ್ನಿಸಿದ ಕಾಂಗ್ರೆಸ್

ಯುದ್ಧ ಸಾರಿದ ನ್ಯೂಜಿಲೆಂಡ್, 25 ಲಕ್ಷ Stone Cold Killers ನಿರ್ಮೂಲನೆ ಮಾಡುವ ಶಪಥ!

SCROLL FOR NEXT