ರಾಜ್ಯ

ಮಡಿಕೇರಿ: ಸಾಲ ವಾಪಾಸ್ ಕೇಳಿದ್ದಕ್ಕೆ ಬ್ಯಾಂಕ್ ಮ್ಯಾನೇಜರ್ ಗೆ ಮಚ್ಚಿನೇಟು!

Raghavendra Adiga

ಮಡಿಕೇರಿ:  ಬ್ಯಾಂಕ್ ಮ್ಯಾನೇಜರ್ ಮೇಲೆ ವ್ಯಕ್ತಿಯೋರ್ವ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಮಡಿಕೇರಿ ತಾಲೂಕಿನ ಕಡಗದಾಳು ಎಂಬ ಗ್ರಾಮದಲ್ಲಿ ನಡೆದಿದೆ‌.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮ್ಯಾನೇಜರ್ ಸತೀಶ್ ಎಂಬವರ ಮೇಲೆ ಗಣಪತಿ ಎಂಬುವವರು ಹಲ್ಲೆ ಮಾಡಿದ್ದಾರೆ.

ಆರೋಪಿ ಗಣಪತಿ, ಸತೀಶ್ ಬಳಿ 10 ಸಾವಿರ ರೂ ಸಾಲ ಮಾಡಿಕೊಂಡಿದ್ದರು. 10 ಸಾವಿರ ಪೈಕಿ ಗಣಪತಿ 2,500ರೂ ಉಳಿಸಿಕೊಂಡಿದ್ದರು ಎನ್ನಲಾಗಿದೆ. ಹಣ ಹಿಂತಿರುಗಿಸುವಂತೆ ಕೇಳಿದಾಗ ಬ್ಯಾಂಕ್ ಮ್ಯಾನೇಜರ್ ಸತೀಶ್ ಮೇಲೆ ಎರಗಿ ಬಿದ್ದ ಆರೋಪಿ ಗಣಪತಿ ತೀವ್ರ ವಾಗ್ವಾದ ನಡೆಸಿದ್ದಲ್ಲದೆ ಕತ್ತಿಯಿಂದ ಸತೀಶ್ ತಲೆ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಕತ್ತಿ ಸಮೇತ ಪರಾರಿಯಾಗಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಸಧ್ಯ ಹಲ್ಲೆಯಿಂದ ಗಾಯಗೊಡಿರುವ ಮ್ಯಾನೇಜರ್ ಸತೀಶ್ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ.

SCROLL FOR NEXT