ರಾಜ್ಯ

ಇನ್ ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಪುತ್ರನ ಮದುವೆ ಫಿಕ್ಸ್! 

Shilpa D

ಬೆಂಗಳೂರು: ಇಸ್ಫೋಸಿಸ್‌ನ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಪುತ್ರ ರೋಹನ್‌ ಮೂರ್ತಿ ಕೇರಳದ ಕೊಚ್ಚಿ ಮೂಲದ ಅಪರ್ಣಾ ಕೃಷ್ಣನ್ ಅವರನ್ನು ವಿವಾಹವಾಗಲಿದ್ದಾರೆ.

ಡಿ.2ರಂದು ಈ ಜೋಡಿ ಬೆಂಗಳೂರಿನಲ್ಲಿ ಈ ಜೋಡಿ ಸರಳವಾಗಿ ವಿವಾಹವಾಗಲಿದೆ. ಇದರಲ್ಲಿ ಎರಡೂ ಕುಟುಂಬದ ಅತ್ಯಾಪ್ತರು ಮಾತ್ರವೇ  ಭಾಗಿಯಾಗಲಿದ್ದಾರೆ.

ಅಪರ್ಣಾ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕಮಾಂಡರ್  ಕೆ.ಆರ್‌. ಕೃಷ್ಣನ್‌ ಮತ್ತು ಎಸ್‌ಬಿಐನ ನಿವೃತ್ತ ಉದ್ಯೋಗಿ  ಸಾವಿತ್ರಿ ಅವರ ಪುತ್ರಿಯಾಗಿದ್ದಾರೆ.

ಸದ್ಯ ಅಪರ್ಣಾ ಅವರು ಬೆಂಗಳೂರು ನಿವಾಸಿಯಾಗಿದ್ದಾರೆ, ಎಂಸಿ ಕಿನ್ಸೆ ಮತ್ತು ಸೆಕ್ವೋಯಾದಲ್ಲಿ ಕೆಲಸ ಮಾಡುತ್ತಿದ್ದಾರೆ, ರೋಹನ್ ಮೂರ್ತಿ ಹಾರ್ವರ್ಡ್ ವಿವಿಯಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಪಿಎಚ್ ಡಿ  ಪಡೆದಿದ್ದಾರೆ. 

SCROLL FOR NEXT