ರಾಜ್ಯ

ಕಲಬುರಗಿ:ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ: ಕೊಲೆ ಶಂಕೆ

Raghavendra Adiga

ಕಲಬುರಗಿ: ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೋರ್ವನ ಶವ ಜಿಲ್ಲೆಯ ಚಿಂಚೋಳಿ ರಸ್ತೆಯ ರುದ್ನೂರ ಗೇಟ್ ಬಳಿ ಪತ್ತೆಯಾಗಿದೆ.

ಕಾಳಗಿ ತಾಲೂಕಿನ ಕೊಡದೂರ ನಿವಾಸಿ ಹಾವಪ್ಪ ಕುಕ್ಕುಂದಿ (32) ಸಾವನ್ನಪ್ಪಿರುವ ವ್ಯಕ್ತಿ. ರುದ್ನೂರ ಗೇಟ್ ನ ಮಹಾದ್ವಾರಕ್ಕೆ ನೇಣು ಬಿಗಿಯಲಾಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಅವರ ತಲೆಯ ಮೇಲೆ ಹಲವು ಗಾಯಗಳು ಕಂಡುಬಂದಿದೆ. ದುಷ್ಕರ್ಮಿಗಳು ಅವರನ್ನು ಬೇರೆಗೆ ಕೊಂದು ಇಲ್ಲಿಗೆ ತಂದು ನೇಣು ಹಾಕಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ‌.

ಕಳೆದ ವರ್ಷ ಮದುವೆಯಾಗಿದ್ದ ಹಾವಪ್ಪನ ಪತ್ನಿ ಕೇವಲ ನಾಲ್ಕು ದಿನಗಳ ಹಿಂದೆ ಗಂಡುಮಗುವಿಗೆ ಜನ್ಮ ನಿಡಿದ್ದಳು. ಆದರೆ ಆ ಸಂತೋಷ ಆಚರಿಸುವ ಮುನ್ನವೇ ಹಾವಪ್ಪ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ.

ಘಟನೆ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT