ಸಂಗ್ರಹ ಚಿತ್ರ 
ರಾಜ್ಯ

ಬಗೆ ಹರಿದ ವಿವಾದ: ನವವೃಂದಾವನ ಗಡ್ಡೆಯಲ್ಲಿ ಉತ್ತರಾಧಿ ಮಠಕ್ಕೆ ಮೊದಲ ಪೂಜೆಗೆ ಅವಕಾಶ!

ಸದಾ ಒಂದಿಲ್ಲೊಂದು ವಿವಾದದಲ್ಲಿರುವ ತಾಲ್ಲೂಕಿನ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಪೂಜೆಯ ಹಕ್ಕು ಮತ್ತು ಸ್ವತ್ತಿನ ವಾರಸತ್ವಕ್ಕೆ ಸಂಬಂಧಿಸಿದಂತೆ ಎರಡು ಮಠಗಳ ಮಧ್ಯೆ ಉಂಟಾಗಿರುವ ವಿವಾದಗಳ ಮಧ್ಯೆಯೇ ಪದ್ಮನಾಭ ತೀರ್ಥರ ಆರಾಧನೆ ನಡೆಯಲಿದೆ.

ಗಂಗಾವತಿ: ಸದಾ ಒಂದಿಲ್ಲೊಂದು ವಿವಾದದಲ್ಲಿರುವ ತಾಲ್ಲೂಕಿನ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಪೂಜೆಯ ಹಕ್ಕು ಮತ್ತು ಸ್ವತ್ತಿನ ವಾರಸತ್ವಕ್ಕೆ ಸಂಬಂಧಿಸಿದಂತೆ ಎರಡು ಮಠಗಳ ಮಧ್ಯೆ ಉಂಟಾಗಿರುವ ವಿವಾದಗಳ ಮಧ್ಯೆಯೇ ಪದ್ಮನಾಭ ತೀರ್ಥರ ಆರಾಧನೆ ನಡೆಯಲಿದೆ.
 
ಮಾಧ್ವ ಮತದ ಪ್ರಚಾರಕರಲ್ಲಿ ಅಗ್ರಸಾಲಿನಲ್ಲಿ ಗುರುತಿಸಿಕೊಂಡಿರುವ ಪದ್ಮನಾಭ ತೀರ್ಥರ ಆರಾಧನೆಯನ್ನು ಕಳೆದ ಹಲವು ದಶಕದಿಂದ ಭಕ್ತರು ಆಚರಿಸಿಕೊಂಡು ಬಂದಿದ್ದಾರೆ. ಧಾರ್ಮಿಕ ಆಚರಣೆಯನ್ನು ಉತ್ತರಾಧಿಮಠ ಹಾಗೂ ಮಂತ್ರಾಲಯದ ರಾಘವೇಂದ್ರ ಸ್ವಾಮೀಜಿಗಳ ಮಠ ನೆರವೇರಿಸಿಕೊಂಡು ಬಂದಿವೆ. 

ಆದರೆ ಕಳೆದ ಕೆಲ ವರ್ಷಗಳಿಂದೀಚೆ ನವವೃಂದಾವನದಲ್ಲಿನ ವಾರಸ್ವತ್ವ ಹಾಗೂ ಧಾರ್ಮಿಕ ನೇತೃತ್ವ ವಹಿಸಿಕೊಳ್ಳುವ ವಿಚಾರವಾಗಿ ಉಭಯ ಮಠಗಳ ಮಧ್ಯೆ ವಿವಾದ ಏರ್ಪಟ್ಟಿದೆ. ಈ ವಿವಾದ ಹೈಕೋರ್ಟ್ ಮೀರಿ, ಸುಪ್ರೀಕೋರ್ಟಿನ ಮೆಟ್ಟಿಲು ಹತ್ತಿದೆ. 

ಹೀಗಾಗಿ ಪ್ರತಿ ಬಾರಿಯೂ ಆರಾಧನಾ ಮಹೋತ್ಸವ ವಿವಾದ ಸ್ವರೂಪ ಪಡೆಯುತ್ತಿದೆ. ಕೇವಲ ಪದ್ಮನಾಭ ತೀರ್ಥರದ್ದು ಮಾತ್ರವಲ್ಲ, ಕವೀಂದ್ರ ತೀರ್ಥರು, ಸುಧೀಂದ್ರ ತೀರ್ಥರ ಆರಾಧನೆಯ ಸಂದರ್ಭದಲ್ಲೂ ಹಲವು ಬಾರಿ ವಿವಾದ ಏರ್ಪಟ್ಟಿದೆ. 

ಇದು ಭಕ್ತರ ಮಧ್ಯೆ ಬೇಸರಕ್ಕೆ ಕಾರಣವಾದರೆ, ಮಠಗಳ ಮಧ್ಯೆ ಪ್ರತಿಷ್ಠೆಯ ಪ್ರತೀಕವಾಗಿದೆ. ವರ್ಷಕ್ಕೆ ಮೂರರಿಂದ ನಾಲ್ಕು ಯತಿಗಳ ಆರಾಧನೆಯ ಸಂದರ್ಭದಲ್ಲಿ ವಿವಾದ ಏರ್ಪಡುತಿದೆ. ಸೂಕ್ತ ಬಂದೋಬಸ್ತ್ ನೀಡಲು ಪೊಲೀಸರು ಪರದಾಡುತ್ತಿದ್ದಾರೆ. 

ಹಿಂದು-ಮುಂದು: 
ಪದ್ಮನಾಭ ತೀರ್ಥರ ಪೂರ್ವರಾಧನೆ ಜನವರಿಯಲ್ಲಿ ಆರಂಭವಾಗಲಿದೆ. ಜನವರಿ 9 ಮತ್ತು 10ರಂದು ಆರಾಧನೆ ನಡೆಯಲಿದೆ. ಈ ಎರಡು ಧಾರ್ಮಿಕ ಆಚರಣೆಗಳನ್ನು ಉತ್ತರರಾಧಿ ಮಠದಿಂದಲೇ ಆರಂಭಿಸಬೇಕು ಎಂದು ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. 

ಬಳಿಕ ಉಳಿದ ಧಾರ್ಮಿಕ ಆಚರಣೆ ರಾಯರಮಠದ ಪಾಲಿಗೆ ಲಭಿಸಿದೆ. ಮಧ್ಯಾಹ್ನ ಎರಡು ಗಂಟೆಯ ಬಳಿಕ ನವವೃಂದಾವನಗಡ್ಡೆಯನ್ನು ಉತ್ತರಾಧಿ ಮಠದ ಅನುಯಾಯಿಗಳು ತೊರೆಯಬೇಕಿದ್ದು, ಮಧ್ಯಾಹ್ನ ಮೂರು ಗಂಟೆಯ ಬಳಿಕ ರಾಯರಮಠದ ಭಕ್ತರು ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. 

ವರದಿ: ಎಂಜೆ ಶ್ರೀನಿವಾಸ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT