ಗುರು ಭಾಗವತ ಕನ್ನಡ ಅವತರಣಿಕೆ 
ರಾಜ್ಯ

ಶ್ರೀಗುರು ಭಾಗವತದ ಕನ್ನಡ ಅವತರಣಿಕೆ ಬಿಡುಗಡೆ

ಗುರು-ಶಿಷ್ಯರ ನಡುವಿನ ಸಂಬಂಧ, ಗುರುತತ್ವ ಇತ್ಯಾದಿ ಮಹತ್ವಪೂರ್ಣ ವಿಷಯಗಳನ್ನೊಳಗೊಂಡ ಸಂಗ್ರಹ ಶ್ರೀ ಗುರು ಭಾಗವತದ ಐದು ಸಂಪುಟಗಳ ಕನ್ನಡ ಅವತರಣಿಕೆಯನ್ನು ಶಿರಡಿ ಸಾಯಿ ಮಂಗಲಂ ಟ್ರಸ್ಟ್ (ಹೊಸೂರು) ವತಿಯಿಂದ ಬಿಡುಗಡೆ ಮಾಡಲಾಯಿತು. 

ಬೆಂಗಳೂರು: ಮಾನವರ ಜೀವನದಲ್ಲಿ ಸದ್ಗುರುಗಳ ಮಹತ್ವ ಹಾಗೂ ಪಾತ್ರ, ಗುರು-ಶಿಷ್ಯರ ನಡುವಿನ ಸಂಬಂಧ, ಗುರುತತ್ವ ಇತ್ಯಾದಿ ಮಹತ್ವಪೂರ್ಣ ವಿಷಯಗಳನ್ನೊಳಗೊಂಡ ಸಂಗ್ರಹ ಶ್ರೀ ಗುರು ಭಾಗವತದ ಐದು ಸಂಪುಟಗಳ ಕನ್ನಡ ಅವತರಣಿಕೆಯನ್ನು ಭಾನುವಾರ ಶ್ರೀ ಶಿರಡಿ ಸಾಯಿ ಮಂಗಲಂ ಟ್ರಸ್ಟ್ (ಹೊಸೂರು) ವತಿಯಿಂದ ಬಿಡುಗಡೆ ಮಾಡಲಾಯಿತು. ಖ್ಯಾತ ಚಿಂತಕ ಚಂದ್ರ ಭಾನು ಸತ್ಪಥಿಯವರು ಇದನ್ನು ರಚಿಸಿದ್ದಾರೆ.

ಶ್ರೀ ಶಿರಡಿ ಸಾಯಿ ಮಂಗಲಂ ಟ್ರಸ್ಟ್ ಹಾಗೂ ಪ್ರಸನ್ನ ಮಿಯಾಪುರಂ ಮತ್ತು ಅವರ ಪತ್ನಿ ರಶ್ಮಿ ಮಿಯಾಪುರಂ ಅವರ ವಿಶೇಷ ಕಾಳಜಿಯಿಂದ ಇದೇ ಮೊದಲ ಬಾರಿಗೆ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಲಾಗಿದೆ.

ಡಾ.ಸತ್ಪಥಿಯವರು ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಮಾಜಿ ಮಹಾನಿರ್ದೇಶಕರು ಮತ್ತು ಶ್ರೀ ಸಾಯಿಬಾಬಾ ಅವರ ಭಕ್ತರು. ತಮ್ಮ ಸೇವಾವಧಿಯಲ್ಲಿ ತಮ್ಮ ಪ್ರಶಂಸನೀಯ ಸೇವೆಗಾಗಿ ಮತ್ತು ಬಾಬಾರವರ ಮೇಲಿನ ಪ್ರೌಢ ಬರಹಗಳಿಗಾಗಿ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಜತೆಗೆ ಉತ್ತಮ ಜೀವನ ಹಾಗೂ ಆಧ್ಯಾತ್ಮಿಕ ಮುಕ್ತಿಗೆ ಗುರುವಿನ ಮಾರ್ಗದರ್ಶನದ ಅಗತ್ಯತೆಯ ಬಗೆಗೂ ಅವರು ಕೃತಿಗಳನ್ನು ರಚಿಸಿದ್ದಾರೆ.

ಶ್ರೀ ಗುರು ಭಾಗವತದ ಏಳು ಸಂಪುಟಗಳನ್ನು ಅವರು ರಚಿಸಿದ್ದು, ಮೂಲತಃ ಒಡಿಯಾ ಭಾಷೆಯಲ್ಲಿರುವ ಈ ಕೃತಿ ಬಳಿಕ ಇಂಗ್ಲಿಷ್, ಹಿಂದಿ, ಅಸ್ಸಾಮಿ, ಮರಾಠಿ, ಬಂಗಾಳಿ ಮತ್ತು ತೆಲುಗು ಭಾಷೆಗೆ ತರ್ಜುಮೆಗೊಂಡಿದೆ. ಐದು ಸಂಪುಟಗಳ ಜತೆಗೆ, ಶ್ರೀ ಗುರು ಭಾಗವತದ ವಿಶೇಷ ಉಲ್ಲೇಖಗಳನ್ನು ಒಳಗೊಂಡ ವಿಶೇಷ ಡೈರಿಯನ್ನು ಕೂಡಾ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಖ್ಯಾತ ಕನ್ನಡ ಬರಹಗಾರ ಶ್ರೀ. ಬಾಬು ಕೃಷ್ಣಮೂರ್ತಿ, ಶ್ರೀ. ವರದರಾಜನ್ ಅಯ್ಯಂಗಾರ್ ಮತ್ತು ಶ್ರೀ. ಅನಂತರಾಮು ಪುಸ್ತಕ ಬಿಡುಗಡೆ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದರು. ಕನ್ನಡಿಗರಿಗೆ ಪ್ರಯೋಜನವಾಗುವ ರೀತಿಯಲ್ಲಿ ಈ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ ಬಗ್ಗೆ ಲೇಖಕರು ಸಂತಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT