ಮಹಿಳಾ ಕಾರ್ಮಿಕರು 
ರಾಜ್ಯ

ದುಡಿದ ಕೂಲಿ ಕೊಡುವಂತೆ ಗೊಳಾಟ: ಕನ್ನಡ ವಿವಿ ಗೇಟ್ ಮುಂಭಾಗ ಮಹಿಳಾ ಕಾರ್ಮಿಕರ ಪ್ರತಿಭಟನೆ 

ಫೆಲೋಶಿಪ್ ಕೊಡುವಂತೆ ನಿನ್ನೆ ವಿದ್ಯಾರ್ಥಿಗಳ ಪ್ರತಿಭಟನೆ ಬೆನ್ನಲ್ಲೇ ಇಂದು ದುಡಿದ ಕೂಲಿ ಕೊಡುವಂತೆ ಕಾರ್ಮಿಕರು ವಿವಿಯ ಗೇಟ್ ಮುಂದೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ವಿಶ್ವ ವಿದ್ಯಾಲಯದ ಗಾರ್ಡನ್ ಮತ್ತು ಕಛೇರಿಗಳ ಕಸ ಗುಡಿಸಿ ಜೀವನ ನಡೆಸುತಿದ್ದ ಬಡ ಕಾರ್ಮಿಕರು, ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ. 

ಹೊಸಪೇಟೆ: ಫೆಲೋಶಿಪ್ ಕೊಡುವಂತೆ ನಿನ್ನೆ ವಿದ್ಯಾರ್ಥಿಗಳ ಪ್ರತಿಭಟನೆ ಬೆನ್ನಲ್ಲೇ ಇಂದು ದುಡಿದ ಕೂಲಿ ಕೊಡುವಂತೆ ಕಾರ್ಮಿಕರು ವಿವಿಯ ಗೇಟ್ ಮುಂದೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ವಿಶ್ವ ವಿದ್ಯಾಲಯದ ಗಾರ್ಡನ್ ಮತ್ತು ಕಛೇರಿಗಳ ಕಸ ಗುಡಿಸಿ ಜೀವನ ನಡೆಸುತಿದ್ದ ಬಡ ಕಾರ್ಮಿಕರು, ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ. 

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ದಿನಗೂಲಿ ಮಾಡುತ್ತಿದ್ದ 15 ಜನ ಕಾರ್ಮಿಕರಿಗೆ ಕಳೆದ ಮೂರು ತಿಂಗಳಿನಿಂದ ಕೂಲಿಕೊಡದೆ ಗುತ್ತಿಗೆದಾರ ಪಾಟೀಲ್ ಹೊರಗೆ ತಳ್ಳಿದ್ದಾನೆ. ಹದಿನೈದರಿಂದ ಇಪ್ಪತ್ತು ವರ್ಷಗಳಿಂದ ಕೆಲಸಮಾಡುತ್ತಿರುವ ಈ ಕಾರ್ಮಿಕರಿಗೆ ಪಿ.ಎಪ್.ಇ.ಎಸ್.ಐ. ಸೌಲಭ್ಯ ನೀಡದೆ ದುಡಿಸಿಕೊಳ್ಳಲಾಗಿದೆ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ.

ಗುತ್ತಿಗೆದಾರ ಪಾಟೀಲ್ ದೌರ್ಜನ್ಯಕ್ಕೆ ಒಳಗಾಗಿ ಕಾರ್ಮಿಕ ಇಲಾಖೆಗೆ ದೂರು ನೀಡಿದ್ದರಿಂದ ಅವರನ್ನು ಗುತ್ತಿಗೆದಾರ ವಿವಿ ಗೇಟ್ ನಿಂದ ಹೊರಗಡೆ ತಳ್ಳಿದ್ದು, ದೂರನ್ನು  ಮರಳಿ ಪಡೆದರೆ ಕೆಲಸಕ್ಕೆ ಕರೆಸಿಕೊಳ್ಳುವುದಾಗಿ ಗುತ್ತಿಗೆದಾರ ಭಯಪಡಿಸುತ್ತಿದ್ದಾನೆ ಎಂದು ಪ್ರತಿಭಟಟನಾಕಾರರು ಆರೋಪಿಸಿದ್ದಾರೆ.

ಕೌಶಲ್ಯ ಸೆಕ್ವಿರಿಟಿ ಸರ್ವೀಸಸ್ ಎಂಬ ಹೆಸರಿನ ಎಜೆನ್ಸಿಯಿಂದ ಕಾರ್ಮಿಕರಿಗೆ ವಂಚನೆ ಆಗಿದ್ದರೂ  ವಿಶ್ವವಿದ್ಯಾನಿಲಯ ಕಾರ್ಮಿಕರ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಗೆ ಕೊಟ್ಟು ಕೈ ತೊಳೆದುಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT