ರಾಜ್ಯ

ಸಹಸ್ರಾರು ಜನರನ್ನು ಕೊಂದ ಟಿಪ್ಪು ಇತಿಹಾಸ ಮಕ್ಕಳಿಗೆ ಬೇಡ: ಪ್ರಹ್ಲಾದ್ ಜೋಶಿ

Srinivas Rao BV

ಹುಬ್ಬಳ್ಳಿ/ಮೈಸೂರು: ಸಹಸ್ರಾರು ಜನರನ್ನು ಕೊಂದ ಟಿಪ್ಪು ಸುಲ್ತಾನ್ ನ ಕ್ರೌರ್ಯ ಮಕ್ಕಳಿಗೆ ಬೇಡ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಹೇಳಿದ್ದಾರೆ. ಟಿಪ್ಪು ಪಠ್ಯ ತೆಗೆದುಹಾಕುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸಂಸದ ಪ್ರತಾಪ್ ಸಿಂಹ ಸ್ವಾಗತಿಸಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಷಿ, ದೇಶದ ಉದಾರತೆ, ಸಂಸ್ಕೃತಿ ಸಾರುವ ವಿಷಯಗಳನ್ನು  ಪಠ್ಯದಲ್ಲಿ ಪರಿಚಯಿಸಬೇಕು. ಟಿಪ್ಪು ಕುರಿತ ಪಠ್ಯವನ್ನು ತೆಗೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು. ಟಿಪ್ಪು ಸುಲ್ತಾನ್ ಕುರಿತ ಇತಿಹಾಸವನ್ನು ಪಠ್ಯ ಪುಸ್ತಕದಿಂದ ತೆಗೆಯುವ ಕುರಿತ ಮುಖ್ಯಮಂತ್ರಿ ಯಡಿಯೂರಪ್ಪ ಅವರ  ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅಪ್ಪನನ್ನು ಜೈಲಿಗೆ ಕಳುಹಿಸಿದ ಔರಂಗಜೇಬನ ಕ್ರೌರ್ಯ ಮಕ್ಕಳಿಗೆ ಮಾದರಿಯಲ್ಲ. ಟಿಪ್ಪು ಸುಲ್ತಾನ್ ಸಾವಿರಾರು ಜನರನ್ನ ಕೊಲೆ ಮಾಡಿದ ಇತಿಹಾಸ ಮಕ್ಕಳಿಗೆ ಬೇಡ ಎಂದರು.
 

SCROLL FOR NEXT