ಸಂಗ್ರಹ ಚಿತ್ರ 
ರಾಜ್ಯ

ಸರ್ಕಾರಿ ಯೋಜನೆಯಡಿ ಹೃದಯ ಕಸಿ: ಮೊದಲ ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಬಾಗಲಕೋಟೆ ವ್ಯಕ್ತಿಗೆ ಮರುಜನ್ಮ

 ಹುಟ್ಟಿನಿಂದಲೂ ಸಂಕೀರ್ಣ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಬಾಗಲಕೋಟೆ ಮೂಲದ 38 ವರ್ಷದ ವ್ಯಕ್ತಿಯೊಬ್ಬರಿಗೆ ತಮ್ಮ ಸಾವಿಗೆ ಸಮೀಪವಾಗಿದ್ದ ವೇಳೆ ರಾಜ್ಯ ಸರ್ಕಾರದ ಅಂಗಾಂಗ ಕಸಿ ಯೋಜನೆಯ್ಯಡಿಯಲ್ಲಿ ದಾನಿಯೊಬ್ಬನ ಹೃದಯ ಸಿಕ್ಕು ಹೊಸ ಬದುಕು ದೊರಕಿದೆ.

ಬೆಂಗಳೂರು: ಹುಟ್ಟಿನಿಂದಲೂ ಸಂಕೀರ್ಣ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಬಾಗಲಕೋಟೆ ಮೂಲದ 38 ವರ್ಷದ ವ್ಯಕ್ತಿಯೊಬ್ಬರಿಗೆ ತಮ್ಮ ಸಾವಿಗೆ ಸಮೀಪವಾಗಿದ್ದ ವೇಳೆ ರಾಜ್ಯ ಸರ್ಕಾರದ ಅಂಗಾಂಗ ಕಸಿ ಯೋಜನೆಯ್ಯಡಿಯಲ್ಲಿ ದಾನಿಯೊಬ್ಬನ ಹೃದಯ ಸಿಕ್ಕು ಹೊಸ ಬದುಕು ದೊರಕಿದೆ.

ನಾರಾಯಣ ಹೆಲ್ತ್ ಸಿಟಿಯ ಪೀಡಿಯಾಟ್ರಿಕ್ ಮತ್ತು ವಯಸ್ಕರ ಜನ್ಮಜಾತ ಹೃದಯ ಕಾಯಿಲೆಗಳ ಪ್ರಮುಖ ವೈದ್ಯ ಡಾ.ಶಶಿರಾಜ್ ಎಸ್, “ರೋಗಿಯು ದೊಡ್ಡ ಅಪಧಮನಿ ಸ್ಥಳಾಂತರದಿಂದ ಬಳಲುತ್ತಿದ್ದರು.  ಮತ್ತು ತೀವ್ರವಾದ ಅಪಸಾಮಾನ್ಯ ಕ್ರಿಯೆಯಿಂದ ನಿಧಾನವಾಗಿ IV ನೇ ತರಗತಿಯ ಹೃದಯ ವೈಫಲ್ಯಕ್ಕೆ ತುತ್ತಾಗಿದ್ದರು.ಇದು ಬಹು ಅಪರೂಪದ ಜನ್ಮಜಾತ ಹೃದಯ ದೋಷವಾಗಿದ್ದು, ಭ್ರೂಣದ ಬೆಳವಣಿಗೆಯ ಸಮಯದಲ್ಲಿ ಹೃದಯವು ಅಸಹಜವಾಗಿ ತಿರುಗುತ್ತದೆ ಮತ್ತು ಕುಹರಗಳು ವ್ಯತಿರಿಕ್ತವಾಗಿರುತ್ತದೆ. ಕಳೆದ ವರ್ಷ ರೋಗಿಯು ನಮ್ಮ ಆಸ್ಪತ್ರೆಗೆ ಬಂದಿದ್ದರು. ನಾನು ಅವನಿಗೆ ಔಷಧಿಗಳ ಅಳತೆಗಳೊಡನೆ  ಚಿಕಿತ್ಸೆ ನೀಡಲು ಪ್ರಯತ್ನಿಸುತ್ತಿದ್ದೆ, ಆದರೆ ಅವರ ಸ್ಥಿತಿಯು  ಹದಗೆಟ್ಟಿತು, ಅವರಿಗೆ ಚಲಿಸಲು ಸಹ ಸಾಧ್ಯವಾಗಲಿಲ್ಲ ಮತ್ತು ಉಸಿರಾಟದ ತೊಂದರೆಯೂ ಇತ್ತು. ಅವನಿಗೆ ಬೇಗನೆ ದಾನಿಯ ಅಗತ್ಯವಿತ್ತು. ” ಎಂದಿದ್ದಾರೆ.

ಮೈಸೂರಿನ 28 ವರ್ಷದ ದಾನಿಗಳಿಂದ ಪಡೆದ ಹೃದಯವನ್ನು ಹಸಿರು ಕಾರಿಡಾರ್ ರಚಿಸುವ ಮೂಲಕ ಬೆಂಗಳೂರಿಗೆ ತಂದು ವ್ಯಕ್ತಿಗೆ ಜೋಡಿಸಲಾಗಿದೆ.ಆಗಸ್ಟ್ 16 ರಂದು ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು  ರೋಗಿಯು ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ.

ಕಸಿ ತನ್ನ ಜೀವವನ್ನು ಉಳಿಸಿದ್ದು ಮಾತ್ರವಲ್ಲ, ಅಂಗಾಂಗ ಕಸಿ ಯೋಜನೆಯಡಿ ಹೃದಯ ಕಸಿ ಮಾಡಿದ ಬೆಂಗಳೂರಿನ ಮೊದಲ ರೋಗಿ ಎಂಬ ದಾಖಲೆಗೆ ತಾನು ಪಾತ್ರನಾಗಿದ್ದೇನೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

 ಬಡತನ ರೇಖೆಗಿಂತ ಕೆಳಗಿರುವವರಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ. ಬಡ ರೋಗಿಗಳಿಗೆ ಅಂಗಾಂಗ ಕಸಿ ಮಾಡಲು ರಾಜ್ಯ ಸರ್ಕಾರ 30 ಕೋಟಿ ರೂ. ಮೀಸಲಿರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT