ಸಿಬಿಐ 
ರಾಜ್ಯ

ಫೋನ್-ಟ್ಯಾಪಿಂಗ್ ಪ್ರಕರಣ: ಕಡೆಗೂ ಎಫ್ಐಆರ್ ದಾಖಲಿಸಿದ ಸಿಬಿಐ

ರಾಜ್ಯದ ಅಕ್ರಮ ಫೋನ್ ಕದ್ದಾಲಿಕೆ ಪ್ರಕರಣದ ಸಂಬಂಧ ಕೇಂದ್ರೀಯ ತನಿಖಾ ದಳ (ಸಿಬಿಐ) ಎಫ್ಐಆರ್ ದಾಖಲಿಸಿದೆ. 

ಬೆಂಗಳೂರು: ರಾಜ್ಯದ ಅಕ್ರಮ ಫೋನ್ ಕದ್ದಾಲಿಕೆ ಪ್ರಕರಣದ ಸಂಬಂಧ ಕೇಂದ್ರೀಯ ತನಿಖಾ ದಳ (ಸಿಬಿಐ) ಎಫ್ಐಆರ್ ದಾಖಲಿಸಿದೆ. ಆಡಳಿತ ಮತ್ತು ವಿರೋಧ ಪಕ್ಷಗಳ ರಾಜಕೀಯ ಮುಖಂಡರು ಮತ್ತು ಅವರ ಸಹಚರರು, ಆಗಸ್ಟ್ 1, 2018 ಮತ್ತು 2019 ರ ಆಗಸ್ಟ್ 19 ರ ನಡುವೆ ಸರ್ಕಾರಿ ನೌಕರರ ಸಂಬಂಧಿಕರು ಸೇರಿದಂತೆ ದೂರವಾಣಿಗಳನ್ನು ಅಕ್ರಮ / ಅನಧಿಕೃತ / ಅನಗತ್ಯವಾಗಿ ಕದ್ದಾಲಿಸಿದ ಪ್ರಕರಣವನ್ನು ದೆಹಲಿ ಸಿಬಿಐ ಘಟಕ ತನಿಖೆ ನಡೆಸಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 72, 1985 ರ ಇಂಡಿಯನ್ ಟೆಲಿಗ್ರಾಫ್ ಕಾಯ್ದೆ ಸೆಕ್ಷನ್ 26 ರ ಅಡಿಯಲ್ಲಿ ಎಫ್ಐಆರ್ (ಸಂಖ್ಯೆ 2172019 ಎ 10006) ದಾಖಲಾಗಿದೆ.

ಮೂಲಗಳ ಪ್ರಕಾರ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಲ್ಲಿ ಗುಪ್ತಚರ ಉದ್ದೇಶಗಳಿಗಾಗಿ ರಹಸ್ಯ ಪ್ರತಿಬಂಧಗಳಲ್ಲದೆ, ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಕರೆ ದಾಖಲೆಗಳನ್ನು (ಸಿಡಿಆರ್) ಪಡೆದುಕೊಳ್ಳಲಾಗಿದೆ. ಇದೀಗ ತನಿಖಾ ಏಜೆನ್ಸಿ ಈ ಕುರಿತಂತೆ ಮಾಹಿತಿ ಕಲೆ ಹಾಕಿದೆ. ರಾಷ್ಟ್ರೀಯ ಭದ್ರತೆ ಮತ್ತು ಸೀಮಿತ ಅವಧಿಯವರೆಗೆ ನಿರ್ದಿಷ್ಟ ಉದ್ದೇಶಗಳಿಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಕೇಳಿದ ಆ ಕರೆ ಗಳನ್ನು ಅನುಮೋದಿಸುವ ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿ ವರದಿಯನ್ನೂ ಸಿಬಿಐ ಪಡೆಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. 

"ಇವುಗಳು ಹೆಚ್ಚು ವರ್ಗೀಕೃತ ದಾಖಲೆಗಳಾಗಿವೆ ಮತ್ತು ಅವುಗಳನ್ನು ಸರ್ಕಾರದ ಬಲವಾದ ಕೋಣೆಯಲ್ಲಿ ಇರಿಸಲಾಗಿದೆ. ಪ್ರತಿಬಂಧಗಳನ್ನು ಹೆಚ್ಚು ಕಾಲ ಇಡಲಾಗುವುದಿಲ್ಲ ಮತ್ತು ನಿಗದಿತ ಸಮಯದ ನಂತರ ಅವು ನಾಶವಾಗಲಿದೆ. ಆದರೆ ಅದನ್ನೂ ಸಹ ಸಮಿತಿಗೆ ತಲುಪಿಸಲಾಗುತ್ತದೆ, ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಆಡಿಯೋ ಕ್ಲಿಪ್ ಮಾಧ್ಯಮಕ್ಕೆ ಸೋರಿಕೆಯಾದ ನಂತರ ಅಕ್ರಮ ಫೋನ್ ಟ್ಯಾಪಿಂಗ್ ಬೆಳಕಿಗೆ ಬಂದಿತ್ತು. ಬೆಂಗಳೂರಿನ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಭಾರತೀಯ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 72 ಮತ್ತು ಭಾರತೀಯ ಟೆಲಿಗ್ರಾಫ್ ಕಾಯ್ದೆ ಸೆಕ್ಷನ್ 26 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT