ರಾಜ್ಯ

ಉಡುಪಿ: ಹುಲಿ ವೇಷಧಾರಿಗಳ ವಾಹನ ಪಲ್ಟಿ ಓರ್ವ ಸಾವು, ಇನ್ನಿಬ್ಬರು ಗಂಭೀರ

Raghavendra Adiga

ಉಡುಪಿ: ಗಣೇಶೋತ್ಸವ ಬಳಿಕ ಗಣೇಶ ವಿಸರ್ಜನೆ ಮೆರವಣಿಗೆಗಾಗಿ ಆಗಮಿಸಿದ್ದ ಹುಲಿ ವೇಷಧಾರಿಗಳ ತಂಡದ ವಾಹನ ಪಲ್ಟಿಯಾಗಿ ಓರ್ವ ವೇಷಧಾರಿ ಸಾವನ್ನಪ್ಪಿದ್ದು ಇನ್ನಿಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಉಡುಪಿ ಜಿಲ್ಲೆ ಸಂತೆಕಟ್ಟೆಯಲ್ಲಿ ನಡೆದಿದೆ.

ಬುಧವಾರ ಬೆಳಗಿನ ಸಮಯ ಸಂತೆಕಟ್ಟೆಯ ನೇಜಾರಿನಲ್ಲಿ ನಡೆಅ ಘಟನೆಯಲ್ಲಿ ಪಡುಬಿದ್ರೆಯ ಸುಮಂತ್ (22) ಸಾವನ್ನಪ್ಪಿದ್ದಾರೆ. 

ಹುಲಿವೇಷಧಾರಿಗಳು ನೇಜಾರಿನಿಂದ ಸಂತೆಕಟ್ಟೆಗೆ ಆಗಮಿಸುತ್ತಿದ್ದ ವೇಳೆ ಅಪಘಾತ ನಡೆದಿದ್ದು ನಿಯಂತ್ರಣ ತಪ್ಪಿದ ಟೆಂಪೋ ವಾಹನ ರಸ್ತೆ ಬದಿಗೆ ಪಲ್ಟಿಯಾಗಿದೆ.ಗಂಭೀರ ಗಾಯಗೊಂಡ ಸುಮಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಟೆಂಪೋದಲ್ಲಿ ಒಟ್ಟು ಹನ್ನೆರಡು ಮಂದಿ ಹುಲಿವೇಷಧಾರಿ ತಂಡದ ಸದಸ್ಯರಿದ್ದರು. ಅದರಲ್ಲಿ ಐವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಂಭೀರ ಗಾಯಗೊಂಡವರನ್ನು ಮಣಿಪಾಲದ ಕೆ ಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ.

ಘಟನಾ ಸ್ಥಳಕ್ಕೆ ಉಡುಪಿ ಹಾಗೂ ಮಲ್ಪೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

SCROLL FOR NEXT