ಸುಯೋಗ ತಂಡದ ನಾಟಕ ತರಬೇತಿ 
ರಾಜ್ಯ

ಸುಯೋಗ ತಂಡದಿಂದ 'ಹುಡುಕಾಟ' ನಾಟಕ ಪ್ರದರ್ಶನ

ಬೆಂಗಳೂರಿನ ಹವ್ಯಾಸಿ ಕಲಾ ತಂಡ ಸುಯೋಗ ಇದೇ ಭಾನುವಾರ 'ಹುಡುಕಾಟ' ಹಾಸ್ಯ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ.

ಬೆಂಗಳೂರು: ಬೆಂಗಳೂರಿನ ಹವ್ಯಾಸಿ ಕಲಾ ತಂಡ ಸುಯೋಗ ಇದೇ ಭಾನುವಾರ 'ಹುಡುಕಾಟ' ಹಾಸ್ಯ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ.

ಈ ಹಿಂದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಕಷ್ಟು ನಾಟಕ ಪ್ರದರ್ಶನ ನೀಡಿ ಯಶಸ್ಸು ಗಳಿಸಿರುವ ಸುಯೋಗ ತಂಡ ಇದೀಗ ಸೆಪ್ಟೆಂಬರ್ 15 ಅಂದರೆ ಇದೇ ಭಾನುವಾರದಂದು ಬೆಂಗಳೂರಿನ್ ಎನ್.ಆರ್. ಕಾಲೋನಿಯಲ್ಲಿರುವ 
ಪ್ರಭಾತ್ ಕಲಾಪೂರ್ಣಮಾ ರಂಗಮಂದಿರದಲ್ಲಿ ಹುಡುಕಾಟ ನಾಟಕ ಪ್ರದರ್ಶನ ಮಾಡುತ್ತಿದೆ.

ಮನುಷ್ಯ ತನಗೆ ಸಿಕ್ಕಿದ್ದಕ್ಕೆ ತೃಪ್ತಿ ಪಟ್ಟುಕೊಳ್ಳದೇ ಮತ್ತಿನ್ನೇನೋ ಬೇಕು ಎಂದು ಹುಡುಕುತ್ತಿರುತ್ತಾನೆ. ಅವನ ಈ ಹುಡುಕಾಟದಲ್ಲಿ ಯಾಂತ್ರಿಕ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಆತನ ಪ್ರಯತ್ನವನ್ನು ನಾಟಕದಲ್ಲಿ ಹಾಸ್ಯಾತ್ಮಕವಾಗಿ ತೋರಿಸಲಾಗಿದೆ.

ಡುಂಡಿರಾಜ್ ರಚನೆಯ ಈ ನಾಟಕವನ್ನು ವಾಸುಕೇಶನ್ ಅವರು ನಿರ್ದೇಶಿಸುತ್ತಿದ್ದು, ಪ್ರದೀಪ್ ಬಿ ವಿ ಮತ್ತು ಪಾಣಿನಿ ದೇರಾಜೆ ಅವರು ಸಂಗೀತ ಸಂಯೋಜಿಸಿದ್ದಾರೆ. ಉಳಿದಂತೆ ಮಂಜು ನಾರಾಯಣ್ (ಬೆಳಕು) ಜಯರಾಜ್ ಹೊಸ್ಕೂರು (ಪ್ರಸಾದನ) ಶಾಂತಿರಾವ್ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ. ಇನ್ನು ಉದಯೋನ್ಮುಖ ನಟರಾದ ಯಶವಂತ್ ಕುಮಾರ್, ಶ್ರೀಕಾಂತ್ ಆಚಾರ್, ಶಾಂತಿರಾವ್, ಗೌತಮ್ ಮತ್ತು ಸತೀಶ್ ತೆರೆ ಹಂಚಿಕೊಳ್ಳಲಿದ್ದು, ಇವರೊಂದಿಗೆ ನಿರ್ದೇಶಕ ವಾಸುಕೇಶನ್ ಅವರೂ ಕೂಡ ಸಾಥ್ ನೀಡುತ್ತಿದ್ದಾರೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ವಿಳಾಸ ಸಂಪರ್ಕಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!

BJP-RSS ನಡುವೆ ಬಿರುಕು: ಸ್ಫೋಟಕ ಕಾರಣ ಬಿಚ್ಚಿಟ್ಟ ಅಭಿಜೀತ್ ದೀಪ್ಕೆ

ಜಾರ್ಖಂಡ್‌ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಹೋರಾಗಾರ್ತಿಗೆ 38 ಮಂದಿ ಲೈಂಗಿಕ ಕಿರುಕುಳ: ಎಫ್‌ಐಆರ್‌ ದಾಖಲು, ‘JMM ಗೂಂಡಾಗಳ’ ಕೃತ್ಯ ಎಂದ ಬಿಜೆಪಿ