ರಾಜ್ಯ

ಕಲಬುರಗಿ: ಮಕ್ಕಳ ಕಳ್ಳರೆಂದು ಶಂಕೆ, ಗ್ರಾಮಸ್ಥರಿಂದ ತಂದೆ-ಮಗನಿಗೆ ಥಳಿತ

Raghavendra Adiga

ಕಲಬುರಗಿ: ಮಕ್ಕಳ ಕಳ್ಳರು ಎಂದು ಭಾವಿಸಿ, ತಂದೆ, ಮಗನಿಗೆ ಸ್ಥಳೀಯರು ಥಳಿಸಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಸ್ಟೇಷನ್ ತಾಂಡಾದಲ್ಲಿ ಶನಿವಾರ ನಡೆದಿದೆ

ಶಂಕರ್ ಜೋಶಿ ಹಾಗೂ ಸಂತೋಷ ಜೋಶಿ ಎಂಬ ತಂದೆ ಮಗನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂಲತಃ ಕಲಬುರಗಿಯ ಬಬಲಾದ ಗ್ರಾಮದವರಾದ ಇವರು, ಇಂದು ಮುಂಜಾನೆ ಸ್ಟೇಷನ್ ತಾಂಡಾಕ್ಕೆ ತೆರಳಿದ್ದರು. 

ಈ ಸಂದರ್ಭದಲ್ಲಿ ಮಗುವೊಂದಕ್ಕೆ ಸಂತೋಷ ಜೋಶಿ,  ಬಿಸ್ಕಿಟ್ ನೀಡಿದ್ದರು. ಅಪರಿಚಿತನೋರ್ವ ಮಗುವಿಗೆ ಬಿಸ್ಕಿಟ್ ನೀಡುತ್ತಿರುವುದನ್ನು ಕಂಡು ಗಾಬರಿಗೊಂಡ ತಾಂಡಾ ನಿವಾಸಿಗಳು, ಅವರಿಬ್ಬರೂ ಮಕ್ಕಳು ಕಳ್ಳರಿರಬಹುದು ಎಂಬ ಭಾವಿಸಿ ಥಳಿಸಿದ್ದಾರೆ.

ಅಪ್ಪ, ಮಗ ಬೇರೆ ಬೇರೆ ಸ್ಥಳಗಳಿಗೆ ತೆರಳಿ ಜೋತಿಷ್ಯ ಹೇಳುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಚಿತ್ತಾಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾ

SCROLL FOR NEXT