ವಾಟಲ್ ನಾಗರಾಜ್ 
ರಾಜ್ಯ

ಮೈಸೂರ್ ಪಾಕ್ ನಮ್ದೆ: ತಮಿಳುನಾಡಿಗರಿಗೆ ಚಳಿ ಬಿಡಿಸಿದ ವಾಟಲ್ ನಾಗರಾಜ್!

ಮೈಸೂರು ಪಾಕ್ ಎಂಬುದು ಕೇವಲ ಸಿಹಿ ತಿನಿಸು ಮಾತ್ರವಲ್ಲ. ಇದು ಕನ್ನಡಿಗರ ಭಾವನೆಯೊಂದಿಗೆ ಬೆಸೆದುಕೊಂಡಿದೆ.

ಬೆಂಗಳೂರು: ಮೈಸೂರು ಪಾಕ್ ಎಂಬುದು ಕೇವಲ ಸಿಹಿ ತಿನಿಸು ಮಾತ್ರವಲ್ಲ. ಇದು ಕನ್ನಡಿಗರ ಭಾವನೆಯೊಂದಿಗೆ ಬೆಸೆದುಕೊಂಡಿದೆ.

ಆದರೆ ಕಳೆದ ಎರಡು ವರ್ಷಗಳಿಂದ ತಮಿಳುನಾಡು ಕ್ಯಾತೆ ತೆಗೆಯುತ್ತಿದೆ. ಈ ಮಧ್ಯೆ ತಮಿಳುನಾಡು ಲೇಖಕನೊಬ್ಬ ಮಾಡಿರುವ ಟ್ವೀಟ್ ಕನ್ನಡಿಗರು ಮತ್ತು ತಮಿಳು ಭಾಷಿಕರ ನಡುವೆ ಕಿತ್ತಾಡುಕೊಳ್ಳುವಂತೆ ಮಾಡಿತ್ತು. ಈ ಮಧ್ಯೆ ಕನ್ನಡ ಪರ ಹೋರಾಟಗಾರ ವಾಟಲ್ ನಾಗರಾಜ್ ಅವರು ತಮಿಳುನಾಡು ವಿರುದ್ಧ ತಿರುಗಿಬಿದ್ದಿದ್ದಾರೆ.

ತಮಿಳುನಾಡಿನವರು ಮೈಸೂರ್ ಪಾಕ್ ಅನ್ನು ತಿನ್ನಬೇಕು ಅಂತಾ ಒದ್ದಾಡಬೇಕು. ನಿಮಗೆ ಕಳುಹಿಸುವುದಿಲ್ಲ. ಹುಡುಗಾಟ ಆಡುತ್ತಿದ್ದೀರಾ ನೀವು. ಕಾವೇರಿ ಹೊಯ್ತು ಹೋಗ್ಲಿ, ಮೇಕೆದಾಟು ಸುಮ್ಮನಿದ್ದೀವಿ. ಈಗ ಸ್ವೀಟ್ ಗೂ ಬಂದಿದ್ದೀರಾ. ಚನ್ನಾಗಿದೆ. ಮೈಸೂರ್ ಪಾಕ್ ಹೆಸರು ಬದಲಾವಣೆ ಇಲ್ಲ. ಇಡೀ ಪ್ರಪಂಚದಲ್ಲೇ ಮೈಸೂರ್ ಪಾಕ್, ಮೈಸೂರ್ ಪಾಕ್ ಎಂದು ಹೇಳಿದ್ದಾರೆ. 

ಮೈಸೂರು ಪಾಕ್ ನ ಇತಿಹಾಸ
ಮೈಸೂರು ಪಾಕ್‌ ಮೊದಲು ತಯಾರಾಗಿದ್ದು ಮೈಸೂರು ಅರಮನೆ ಅಡುಗೆಮನೆಯಲ್ಲಿ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಆಳ್ವಿಕೆಯ ಸಂದರ್ಭದಲ್ಲಿ ಅರಮನೆಯ ಅಡುಗೆ ಭಟ್ಟರು ಈ ಸಿಹಿಯನ್ನು ತಯಾರಿಸಿದರು. ಕಡಲೆ ಹಿಟ್ಟಿನ ಜತೆ ತುಪ್ಪ ಮತ್ತು ಸಕ್ಕರೆ ಮಿಶ್ರಣದ ಪಾಕ ತಯಾರಿಸಿ ಅದನ್ನು ಬೇಕೆಂದ ಆಕಾರಕ್ಕೆ ತುಂಬಿದರು. ಒಣಗಿದ ನಂತರ ಅದು ಮಿಠಾಯಿ ರೀತಿಯಲ್ಲಿ ಕಂಡುಬಂತು. ಅದರ ಹೆಸರು ಕೇಳಿದಾಗ, ಮಾದಪ್ಪನವರು ಮನಸ್ಸಿನಲ್ಲಿ ಏನೂ ಆಲೋಚಿಸದ ಅವರು ಇದು ಕೇವಲ 'ಮೈಸೂರು ಪಾಕ್‌' ಎಂದು ಕರೆದರು. (ಪಾಕ್‌ ಅಥವಾ ಪಾಕ, ಎಂದರೆ ಸಂಸ್ಕೃತ ಅಥವಾ ಭಾರತದ ಬೇರೆ ಯಾವುದೇ ಭಾಷೆಗಳಲ್ಲಿ ಸಿಹಿ ಎಂದು ಅರ್ಥ ಕೊಡುತ್ತದೆ). 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT