ವಾಟಲ್ ನಾಗರಾಜ್ 
ರಾಜ್ಯ

ಮೈಸೂರ್ ಪಾಕ್ ನಮ್ದೆ: ತಮಿಳುನಾಡಿಗರಿಗೆ ಚಳಿ ಬಿಡಿಸಿದ ವಾಟಲ್ ನಾಗರಾಜ್!

ಮೈಸೂರು ಪಾಕ್ ಎಂಬುದು ಕೇವಲ ಸಿಹಿ ತಿನಿಸು ಮಾತ್ರವಲ್ಲ. ಇದು ಕನ್ನಡಿಗರ ಭಾವನೆಯೊಂದಿಗೆ ಬೆಸೆದುಕೊಂಡಿದೆ.

ಬೆಂಗಳೂರು: ಮೈಸೂರು ಪಾಕ್ ಎಂಬುದು ಕೇವಲ ಸಿಹಿ ತಿನಿಸು ಮಾತ್ರವಲ್ಲ. ಇದು ಕನ್ನಡಿಗರ ಭಾವನೆಯೊಂದಿಗೆ ಬೆಸೆದುಕೊಂಡಿದೆ.

ಆದರೆ ಕಳೆದ ಎರಡು ವರ್ಷಗಳಿಂದ ತಮಿಳುನಾಡು ಕ್ಯಾತೆ ತೆಗೆಯುತ್ತಿದೆ. ಈ ಮಧ್ಯೆ ತಮಿಳುನಾಡು ಲೇಖಕನೊಬ್ಬ ಮಾಡಿರುವ ಟ್ವೀಟ್ ಕನ್ನಡಿಗರು ಮತ್ತು ತಮಿಳು ಭಾಷಿಕರ ನಡುವೆ ಕಿತ್ತಾಡುಕೊಳ್ಳುವಂತೆ ಮಾಡಿತ್ತು. ಈ ಮಧ್ಯೆ ಕನ್ನಡ ಪರ ಹೋರಾಟಗಾರ ವಾಟಲ್ ನಾಗರಾಜ್ ಅವರು ತಮಿಳುನಾಡು ವಿರುದ್ಧ ತಿರುಗಿಬಿದ್ದಿದ್ದಾರೆ.

ತಮಿಳುನಾಡಿನವರು ಮೈಸೂರ್ ಪಾಕ್ ಅನ್ನು ತಿನ್ನಬೇಕು ಅಂತಾ ಒದ್ದಾಡಬೇಕು. ನಿಮಗೆ ಕಳುಹಿಸುವುದಿಲ್ಲ. ಹುಡುಗಾಟ ಆಡುತ್ತಿದ್ದೀರಾ ನೀವು. ಕಾವೇರಿ ಹೊಯ್ತು ಹೋಗ್ಲಿ, ಮೇಕೆದಾಟು ಸುಮ್ಮನಿದ್ದೀವಿ. ಈಗ ಸ್ವೀಟ್ ಗೂ ಬಂದಿದ್ದೀರಾ. ಚನ್ನಾಗಿದೆ. ಮೈಸೂರ್ ಪಾಕ್ ಹೆಸರು ಬದಲಾವಣೆ ಇಲ್ಲ. ಇಡೀ ಪ್ರಪಂಚದಲ್ಲೇ ಮೈಸೂರ್ ಪಾಕ್, ಮೈಸೂರ್ ಪಾಕ್ ಎಂದು ಹೇಳಿದ್ದಾರೆ. 

ಮೈಸೂರು ಪಾಕ್ ನ ಇತಿಹಾಸ
ಮೈಸೂರು ಪಾಕ್‌ ಮೊದಲು ತಯಾರಾಗಿದ್ದು ಮೈಸೂರು ಅರಮನೆ ಅಡುಗೆಮನೆಯಲ್ಲಿ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಆಳ್ವಿಕೆಯ ಸಂದರ್ಭದಲ್ಲಿ ಅರಮನೆಯ ಅಡುಗೆ ಭಟ್ಟರು ಈ ಸಿಹಿಯನ್ನು ತಯಾರಿಸಿದರು. ಕಡಲೆ ಹಿಟ್ಟಿನ ಜತೆ ತುಪ್ಪ ಮತ್ತು ಸಕ್ಕರೆ ಮಿಶ್ರಣದ ಪಾಕ ತಯಾರಿಸಿ ಅದನ್ನು ಬೇಕೆಂದ ಆಕಾರಕ್ಕೆ ತುಂಬಿದರು. ಒಣಗಿದ ನಂತರ ಅದು ಮಿಠಾಯಿ ರೀತಿಯಲ್ಲಿ ಕಂಡುಬಂತು. ಅದರ ಹೆಸರು ಕೇಳಿದಾಗ, ಮಾದಪ್ಪನವರು ಮನಸ್ಸಿನಲ್ಲಿ ಏನೂ ಆಲೋಚಿಸದ ಅವರು ಇದು ಕೇವಲ 'ಮೈಸೂರು ಪಾಕ್‌' ಎಂದು ಕರೆದರು. (ಪಾಕ್‌ ಅಥವಾ ಪಾಕ, ಎಂದರೆ ಸಂಸ್ಕೃತ ಅಥವಾ ಭಾರತದ ಬೇರೆ ಯಾವುದೇ ಭಾಷೆಗಳಲ್ಲಿ ಸಿಹಿ ಎಂದು ಅರ್ಥ ಕೊಡುತ್ತದೆ). 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!