ರಾಜ್ಯ

'ವೃಷಭಾವತಿ 'ಪುನಶ್ಚೇತನಕ್ಕೆ ರಾಕಿಂಗ್ ಸ್ಟಾರ್ ಯಶ್ ಬೆಂಬಲ

Nagaraja AB

ಬೆಂಗಳೂರು: ಒಂದು ಕಾಲದಲ್ಲಿ ನದಿಯಾಗಿದ್ದ ವೃಷಭಾವತಿ ಇದೀಗ ಕೆಂಗೇರಿ ಮೋರಿಯಾಗಿದೆ. ಇದರ ಪುನಶ್ಚೇತನಕ್ಕಾಗಿ ಯುವ ಬ್ರಿಗೇಡ್ ವತಿಯಿಂದ ಸೆಪ್ಟೆಂಬರ್ 22 ರಂದು ಭಾನುವಾರ ರನ್ ಫಾರ್ ವೃಷಭಾವತಿ ಮ್ಯಾರಥಾನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಒಂದು ಕಾಲದಲ್ಲಿ ಶ್ರೇಷ್ಠವಾಗಿದ್ದ ವೃಷಭಾವತಿ ನದಿ ಈಗ ಮಲೀನವಾಗಿದೆ. ಅದರ ರಕ್ಷಣೆಗೆ ಯುವ ಬ್ರಿಗೇಡ್ ಮುಂದಾಗಿದೆ. ಈ ಮ್ಯಾರಥಾನ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ವೃಷಭಾವತಿ ಪುನಶ್ಚೇತನಕ್ಕೆ ಮುಂದಾಗಬೇಕೆಂದು ಜನತೆಗೆ ಯಶ್ ಕರೆ ನೀಡಿದ್ದಾರೆ.

SCROLL FOR NEXT