ಭಾರತ ಲಾಕ್‌ಡೌನ್: ಮೊಟ್ಟೆ, ಮ್ಯಾಗಿ ಕಳಿಸಿ ಎಂದು ಪಿಎಂಒ ಕಚೇರಿಗೆ ಟ್ವೀಟ್ ಮಾಡಿದ ಮಂಗಳೂರು ವೈದ್ಯಕೀಯ ವಿದ್ಯಾರ್ಥಿನಿ 
ರಾಜ್ಯ

ಭಾರತ ಲಾಕ್‌ಡೌನ್: ಮೊಟ್ಟೆ, ಮ್ಯಾಗಿ ಕಳಿಸಿ ಎಂದು ಪಿಎಂಒ ಕಚೇರಿಗೆ ಟ್ವೀಟ್ ಮಾಡಿದ ಮಂಗಳೂರು ವೈದ್ಯಕೀಯ ವಿದ್ಯಾರ್ಥಿನಿ!

ಲಾಕ್‌ಡೌನ್ ಅವಧಿಯಲ್ಲಿ ಜನರು ಅಗತ್ಯ ವಸ್ತುಗಳ ಕೊರತೆ ನಡುವೆಯೂ ಧಾವಂತವಿಲ್ಲದ  ಜೀವನವನ್ನು ಮುಂದುವರಿಸಲು ಜನರು ಒಗ್ಗಿದ್ದಾರೆ. ಆದರೆ ಮಂಗಳುರಿನ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ತನಗೆ ಮೊಟ್ಟೆ ಹಾಗೂ ಮ್ಯಾಗಿಯು ಅಗತ್ಯವಿದೆ, ಕಳಿಸಿಕೊಡಿ ಎಂದು ಪ್ರಧಾನಮಂತ್ರಿ ಕಚೇರಿಗೆ (ಪಿಎಂಒ) ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾಳೆ.

ಮಂಗಳೂರು: ಲಾಕ್‌ಡೌನ್ ಅವಧಿಯಲ್ಲಿ ಜನರು ಅಗತ್ಯ ವಸ್ತುಗಳ ಕೊರತೆ ನಡುವೆಯೂ ಧಾವಂತವಿಲ್ಲದ  ಜೀವನವನ್ನು ಮುಂದುವರಿಸಲು ಜನರು ಒಗ್ಗಿದ್ದಾರೆ. ಆದರೆ ಮಂಗಳುರಿನ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ತನಗೆ ಮೊಟ್ಟೆ ಹಾಗೂ ಮ್ಯಾಗಿಯು ಅಗತ್ಯವಿದೆ, ಕಳಿಸಿಕೊಡಿ ಎಂದು ಪ್ರಧಾನಮಂತ್ರಿ ಕಚೇರಿಗೆ (ಪಿಎಂಒ) ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾಳೆ.

ಇದಕ್ಕೂ ಅಚ್ಚರಿ ಎಂದರೆ ಆಕೆ ಬೇಡಿಕೆ ಇಟ್ಟ ಕೇವಲ ಅರ್ಧ ಗಂಟೆಯಲ್ಲಿ ಅವಳಿಗೆ ಮ್ಯಾಗಿ ಹಾಗೂ ಮೊಟ್ಟೆಯನ್ನು ಪಊರೈಸಲಾಗಿದೆ. 

ಉತ್ತರ ಭಾರತ ರಾಜ್ಯದ ಮೂಲದವಳಾದ ವೈದ್ಯಕೀಯ ವಿದ್ಯಾರ್ಥಿನಿ ಸೌಮ್ಯಾ ಸಿಂಗ್ ಮಂಗಳೂರುಲೇಡೀಸ್ ಹಾಸ್ಟೆಲ್‌ನಲ್ಲಿ ನೆಲೆಸಿದ್ದಾಳೆ.ಮಾರ್ಚ್ 31 ರಂದು ಎಲ್ಲಾ ಅಂಗಡಿಗಳನ್ನು ಮುಚ್ಚಿದ ನಂತರ ಸೌಮ್ಯಾ ಪಿಎಂಒಗೆ ಮೊಟ್ಟೆ ಮತ್ತು ಮ್ಯಾಗಿ ಸರಬರಾಜು ಮಾಡುವಂತೆ ಟ್ವೀಟ್ ಮಾಡಿದ್ದಾಳೆ.  . ಈ ಟ್ವೀಟ್ ಅನ್ನು ಕರ್ನಾಟಕ ನಗರಾಭಿವೃದ್ಧಿ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಗಮನಿಸಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್  ನೇತೃತ್ವದಲ್ಲಿ ಕಾರ್ಯಾಚರಿಸುತ್ತಿದ್ದ ಇಲ್ಲಿನ ವಾರ್ ರೂಮಿಗೆ ಅವರು ಮಾಹಿತಿ ಕೊಟ್ಟಿದ್ದಾರೆ.

ಪ್ರದ್ಯುಮ್ನಾ ರಾವ್ ನೇತೃತ್ವದ ತಂಡವು ವಿದ್ಯಾರ್ಥಿನಿಯ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ ಆಕ್ಗೆ ನಿಖರವಾಗಿ ಏನು ಬೇಕಾಗಿದೆ ಎಂದು ತಿಳಿದುಕೊಂಡಿದೆ. ವಿದ್ಯಾರ್ಥಿನಿ ತನಗೆ ಒಂದು ಡಜನ್ ಮೊಟ್ಟೆ ಹಾಗೂ ಆರು ಪ್ಯಾಕೆಟ್ ಮ್ಯಾಗಿ ಬೇಕೆಂದು ಬೇಡಿಕೆ ಇಟ್ಟಿದ್ದಾಳೆ.ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ವಿದ್ಯಾರ್ಥಿನಿಗೆ ಅಗತ್ಯವಾಗಿರುವ ಮೊಟ್ಟೆ ಹಾಗೂ ಮ್ಯಾಗಿಯನ್ನು ಉಚಿತವಾಗಿ ಒದಗಿಸಿಕೊಡುತ್ತಾರೆ.. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT