ಸಂಗ್ರಹ ಚಿತ್ರ 
ರಾಜ್ಯ

ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ಸೈನಿಕರ ಮಾದರಿಯಲ್ಲಿ ರೆಡಿ ಟು ಈಟ್ ಆಹಾರ!

ದೇಶಾದ್ಯಂತ ಸಾವಿನ ಭೀತಿ ಸೃಷ್ಟಿಸಿರುವ ಮಾರಕ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ಸೈನಿಕರ ಮಾದರಿಯಲ್ಲಿ ರೆಡಿ ಟು ಈಟ್ ಆಹಾರ ಸರಬರಾಜು ಮಾಡಲು ಮೈಸೂರು ಮೂಲದ ಖ್ಯಾತ ಆಹಾರ ಲ್ಯಾಬ್ ಸಿದ್ಧವಾಗಿದೆ.

ಮೈಸೂರು: ದೇಶಾದ್ಯಂತ ಸಾವಿನ ಭೀತಿ ಸೃಷ್ಟಿಸಿರುವ ಮಾರಕ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ಸೈನಿಕರ ಮಾದರಿಯಲ್ಲಿ ರೆಡಿ ಟು ಈಟ್ ಆಹಾರ ಸರಬರಾಜು ಮಾಡಲು ಮೈಸೂರು ಮೂಲದ ಖ್ಯಾತ ಆಹಾರ ಲ್ಯಾಬ್ ಸಿದ್ಧವಾಗಿದೆ.

ಮೈಸೂರು ಮೂಲದ ಡಿಫೆನ್ಸ್ ಫುಡ್ ರಿಸರ್ಚ್ ಲ್ಯಾಬೋರೇಟರಿ (Defence Food Research Laboratory-DFRL) ಕೊರೋನಾ ವಿರುದ್ದ ಹೋರಾಡುತ್ತಿರುವ ವೈದ್ಯರಿಗೆ ರೆಡಿ ಟು ಈಟ್ ಆಹಾರ ಪೂರೈಕೆ ಮಾಡಲು ಸಿದ್ಧವಾಗಿದ್ದೇವೆ ಎಂದು ಹೇಳಿದೆ. ಡಿಆರ್ ಡಿಒ ಅಧೀನದಲ್ಲಿ  ಬರುವ ಈ ಸಂಸ್ಥೆ ಗಡಿಯಲ್ಲಿ ಕಾರ್ಯ ನಿರ್ವಹಿಸುವ ಯೋಧರಿಗೆ ರೆಡಿ ಟು ಈಟ್ ಆಹಾರ ಪೂರೈಕೆ ಮಾಡುತ್ತಿದೆ. ಇದೀಗ ಅದೇ ಮಾದರಿಯ ಉತ್ತಮ ಗುಣಮಟ್ಟದ ಆಹಾರಗಳನ್ನು ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ನೀಡಲು  ಸಿದ್ಧವಾಗಿದ್ದೇವೆ ಎಂದು ಹೇಳಿದೆ.

ವೆಜ್ ಪಲಾವ್, ಬಿರಿಯಾನಿ, ದಾಲ್ ಮತ್ತು ರೈಸ್ ನಂತಹ ಹಲವು ಬಗೆಯ ಆಹಾರಗಳನ್ನು ಸಂಸ್ಥೆ ಸಿದ್ಧಪಡಿಸುತ್ತಿದ್ದು, ಅಗತ್ಯ ಬಿದ್ದರೆ ಈ ತಯಾರಿಕಾ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡುವುದಾಗಿ ಸಂಸ್ಥೆ ಹೇಳಿದೆ. ಈ ಕುರಿತು ಕೇಂದ್ರ ರಕ್ಷಣಾ ಸಚಿವಾಲಯದ  ನಿರ್ದೇಶನಕ್ಕೆ ತಾವು ಕಾಯುತ್ತಿದ್ದು, ಸೂಚನೆ ಬಂದರೆ ಕೂಡಲೇ ಈ ಬಗ್ಗೆ ಕಾರ್ಯ ಪ್ರವೃತ್ತರಾಗುತ್ತೇವೆ. ಈ ಸಂಬಂಧ ಸಂಸ್ಥೆಯಲ್ಲಿ ಸಾಕಷ್ಟು ಅಗತ್ಯವಸ್ತುಗಳ ದಾಸ್ತಾನಿದ್ದು, ಅಗತ್ಯ ಬಿದ್ದರೆ ಮತ್ತಷ್ಟು ವಸ್ತುಗಳ ದಾಸ್ತಾನು ಶೇಕರಿಸುವುದಾಗಿ ಸಂಸ್ಥೆ ಹೇಳಿದೆ. 

ಈ ಬಗ್ಗೆ ಮಾತನಾಡಿರುವ ಡಿಆರ್ ಡಿಒದ ಲೈಫ್ ಸೈನ್ಸಸ್ ವಿಭಾಗದ ನಿರ್ದೇಶಕ ಜನರಲ್ ಎಕೆ ಸಿಂಗ್ ಅವರು, ದೇಶದಲ್ಲಿ ಪ್ರಸ್ತುತ ಕೊರೋನಾ ವೈರಸ್ ಸಂಪೂರ್ಣ ನಿಯಂತ್ರಣದಲ್ಲಿದೆ. ಒಂದು ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ದಾಖಲಾದರೆ ಅವರಿಗೆ ಆಹಾರ ಒದಗಿಸಲು  ಸಮುದಾಯ ಅಡುಗೆ ಮನೆಯಲ್ಲಿ ಅಡುಗೆ ಮಾಡುವುದು ಅಪಾಯಕಾರಿಯಾಗಬಹುದು. ಹೀಗಾಗಿ ಪ್ಯಾರಾ ಮೆಡಿಕ್ಸ್, ಆಸ್ಪತ್ರೆ ಸಿಬ್ಬಂದಿಗಳು ಮತ್ತು ವೈದ್ಯರು ಆಹಾರ ತಯಾರಿಸಿಕೊಳ್ಳಲು ಸಮಯ ಸಿಗದೇ ಇರಬಹುದು. ಇದೇ ಕಾರಣಕ್ಕೆ ಸಂಸ್ಥೆ ಎಲ್ಲ ಪರಿಸ್ಥಿತಿಗಳಿಗೂ ತನ್ನನು ತಾನು ಸಿದ್ಧ  ಪಡಿಸಿಕೊಳ್ಳುತ್ತಿದೆ ಎಂದು ಹೇಳಿದರು.

DFRL ಈಗಾಗಲೇ ಭಾರತೀಯ ಸೈನಿಕರಿಗೆ ಮತ್ತು ಅಂತರಿಕ್ಷ ಪ್ರಯಾಣ ಮಾಡುವವರಿಗೆ ರೆಡಿ ಟು ಈಟ್ ಆಹಾರಗಳನ್ನು ಸರಬರಾಜು ಮಾಡುತ್ತಿದೆ. ಇನ್ನು ಡಿಆರ್ ಡಿಒ ಬಿಹೆಚ್ಇಎಲ್ ಮತ್ತು ಮೈಸೂರು ಮೂಲದ ವೆಂಟಿಲೇಟರ್ ತಯಾರಿಕಾ ಸಂಸ್ಥೆಗೆ ತಾಂತ್ರಿಕ ನೆರವು ನೀಡುತ್ತಿದ್ದು,  ಕಡಿಮೆ ಅವಧಿಯಲ್ಲಿ ತಯಾರಾಗುವ ಕಡಿಮೆ ವೆಚ್ಚದ ವೆಂಟಿಲೇಟರ್ ಗಳ ತಯಾರಿಕೆ ಮಾಡುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT