ಪಂಚನಬೆಟ್ಟುವಿನಲ್ಲಿ ಪಂಪ್ ಸೆಟ್ ಮೂಲಕ ಜಲಾಶಯಕ್ಕೆ ನೀರು ಹಾಯಿಸುತ್ತಿರುವುದು 
ರಾಜ್ಯ

ಉಡುಪಿ: ಬರಿದಾಗುತ್ತಿರುವ ಶಿರೂರು ಅಣೆಕಟ್ಟು

ಬೇಸಿಗೆಯ ತಾಪ ಉಡುಪಿ ಜಿಲ್ಲೆಯ ಶಿರೂರು ಅಣೆಕಟ್ಟು ಬತ್ತಿ ಹೋಗುವಂತೆ ಮಾಡಿದೆ. ಬಜೆ ಅಣೆಕಟ್ಟಿನ ಮೂಲಕ ನೀರನ್ನು ಉಡುಪಿ ನಗರದ 35 ವಾರ್ಡ್ ಗಳಿಗೆ ಕುಡಿಯುವ ನೀರಿಗೆ ಪೂರೈಸಲಾಗುತ್ತಿದ್ದು ಏಪ್ರಿಲ್ 9ರಿಂದ ಪಂಪ್ ಮೂಲಕ ಪಂಚನಬೆಟ್ಟು ಪ್ರದೇಶವಾಗಿ ಅಣೆಕಟ್ಟಿಗೆ ನೀರು ಹರಿಸಲಾಗುತ್ತಿದೆ.

ಉಡುಪಿ: ಬೇಸಿಗೆಯ ತಾಪ ಉಡುಪಿ ಜಿಲ್ಲೆಯ ಶಿರೂರು ಅಣೆಕಟ್ಟು ಬತ್ತಿ ಹೋಗುವಂತೆ ಮಾಡಿದೆ. ಬಜೆ ಅಣೆಕಟ್ಟಿನ ಮೂಲಕ ನೀರನ್ನು ಉಡುಪಿ ನಗರದ 35 ವಾರ್ಡ್ ಗಳಿಗೆ ಕುಡಿಯುವ ನೀರಿಗೆ ಪೂರೈಸಲಾಗುತ್ತಿದ್ದು ಏಪ್ರಿಲ್ 9ರಿಂದ ಪಂಪ್ ಮೂಲಕ ಪಂಚನಬೆಟ್ಟು ಪ್ರದೇಶವಾಗಿ ಅಣೆಕಟ್ಟಿಗೆ ನೀರು ಹರಿಸಲಾಗುತ್ತಿದೆ.

ಉಡುಪಿ ನಗರ ಪಾಲಿಕೆಯ ಅಧಿಕಾರಿಗಳು ಬೇಸಿಗೆ ಮುಂದುವರಿದರೆ ಮಳೆ ಕೊರತೆಯಿಂದ ಕುಡಿಯುವ ನೀರಿಗೆ ತೊಂದರೆಯಾಗಬಹುದು ಎಂಬ ಆತಂಕದಲ್ಲಿದ್ದಾರೆ. ಕಾರ್ಕಳ ಜಲಾನಯದ ಪ್ರದೇಶದಲ್ಲಿ ಬೀಳುವ ಮಳೆಯನ್ನಾಧರಿಸಿ ಉಡುಪಿ ನಗರ  ಪ್ರದೇಶಕ್ಕೆ ಕುಡಿಯುವ ನೀರು ಅವಲಂಬಿಸಿದೆ.

ಬಜೆ ಅಣೆಕಟ್ಟಿನಲ್ಲಿ ಮೊನ್ನೆ ಏಪ್ರಿಲ್ 9ಕ್ಕೆ 4.49 ಮೀಟರ್ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಮೇ 4ರಂದು ಬಜೆ ಅಣೆಕಟ್ಟಿನಿಂದ ನಾಲ್ಕು ದಿನಗಳ ಕಾಲ ಉಡುಪಿ ನಗರಕ್ಕೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ವರ್ಷ ಆ ರೀತಿ ನೀರಿನ ಕೊರತೆಯುಂಟಾಗಬಾರದೆಂದು ಪಂಪ್ ಮೂಲಕ ನೀರು ಹಾಯಿಸಲು ಉಡುಪಿ ನಗರ ಪಾಲಿಕೆ ಸಿದ್ದತೆ ಮಾಡಿಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT