ರಾಜ್ಯ

ಕಲಬುರಗಿ: ರೋಗಿಯ ಮನೆ ಬಾಗಿಲಿಗೆ ಮಾತ್ರೆ ತಲುಪಿಸಿ ಮಾನವೀಯತೆ ಮೆರೆದೆ ಕೊರೋನಾ ವಾರಿಯರ್ಸ್

Nagaraja AB

ಕಲಬುರಗಿ: ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕೋವಿಡ್ -19 ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್ (ಸೈನಿಕರು) ಮಾನವೀಯತೆ ಮೆರೆದಿದ್ದಾರೆ. 

ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ತುರ್ತಾಗಿ ಬೇಕಾಗಿದ್ದ ಮಾತ್ರೆಗೆ ಸಹಾಯ ಹಸ್ತ ನೀಡಿದ್ದಾರೆ.

ಬೀದರ್ ಜಿಲ್ಲೆಯ ಹುಮನಾಬಾದ್‌ ತಾಲೂಕಿನ ದುಬಲಗುಂಡಿ ಗ್ರಾಮದ ಶಿವಶರಣ ಎಂಬ ರೋಗಿಗೆ ಪ್ರತಿ ಮಾಹೆ ಸೇವಿಸಬೇಕಾದ ಮಾತ್ರೆಗಳನ್ನು ತಮ್ಮ ಸ್ವಂತ ವಾಹನದಲ್ಲಿ ಕಲಬುರಗಿಯಿಂದ ಹುಮನಾಬಾದ್ ಗೆ ಕೊರೊನಾ ಸೈನಿಕರಾದ ಹರ್ಷಲ್ ಹಾಗೂ ಸಂದೀಪ್ ಹೋಗಿ ತಲುಪಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

SCROLL FOR NEXT