ರಾಜ್ಯ

ರಾಯಭಾಗ: ಸಿಡಿಲು ಬಡಿದು ತೆಂಗಿನ ಮರ ಭಸ್ಮ

Raghavendra Adiga

ರಾಯಬಾಗ:ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಮರವು ದಗದಗ ಹೊತ್ತಿ ಉರಿದ ಘಟನೆ  ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ನಡೆದಿದೆ.

ಚಿಂಚಲಿ ಪಟ್ಟಣದ ಈರಗಾರ ಎಂಬತರ ತೋಟದಲ್ಲಿ ಘಟನೆ‌ ನಡೆದಿದ್ದು, ಘಟನೆಯಿಂದ ಜನರು ಭಯಭೀತರಾರದರು. 

ಬೆಳಿಗ್ಗೆಯಿಂದ ಭೀಕರ ಬಿಸಿಲಿನಿಂದ ತತ್ತರಿಸಿದ್ದ ಜನರಿಗೆ ಸಂಜೆ ವೇಳೆಗೆ ಗುಡುಗು ಸಹಿತ ಗಾಳಿ ಜೋರಾಗಿ ಬೀಸತೊಡಗಿತು. ಅಲ್ಪಸ್ವಲ್ಪ ಮಳೆಯೂ ಆರಂಭವಾದಾಗ ಅಬ್ಬರದ ಸಿಡಿಲು ತೆಂಗಿನ‌ ಮರದ ಸುಳಿಯಲ್ಲಿ ಬಡಿದ ಹಿನ್ನೆಲೆ ಸುತ್ತಮುತ್ತಲು ಪ್ರಕಾಶಗೊಂಡು ಬೆಂಕಿ ಹತ್ತಿ ಸ್ವಲ್ಪ ಹೊತ್ತು ದಗದಗ ಉರಿಯಿತು.

ಮೇಲಿಂದ‌ ಬೆಂಕಿಯ ಕಣಗಳು ಕೆಳಗೆ ಬೀಳುತ್ತಿರುವ ಹಿನ್ನೆಲೆ ಜನರು ಅವುಗಳನ್ನುಆರಿಸಿದರು.. ಆದರೆ ಯಾವುದೇ ರೀತಿಯಾಗಿ ಪ್ರಾಣಾಪಾಯ ಸಂಭವಿಸಿಲ್ಲ. 

ಕುಡಚಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದೆ.

SCROLL FOR NEXT