ಆಹಾರ ಪಟ್ಟಣ ಸಂಗ್ರಹಿಸುತ್ತಿರುವ ಸಂಪತ್ 
ರಾಜ್ಯ

ಕಾರ್ಮಿಕರಿಗೆ, ಆಟೋ ಚಾಲಕರಿಗೆ ಆಟೋ ಅಣ್ಣನಿಂದ ಪ್ರತಿನಿತ್ಯ ಆಹಾರ, ಪಡಿತರ ವಿತರಣೆ

ಕೊರೋನಾ  ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿರುವ ನಿಟ್ಟಿನಲ್ಲಿ ಆದರ್ಶ ಆಟೋ ಚಾಲಕರ ಯೂನಿಯನ್ ಮತ್ತು ನಾಗರಿಕ ಮುಖಂಡ ಸಿ ಸಂಪತ್ ಅಗತ್ಯವಿರವವರಿಗೆ ಆಹಾರ ಮತ್ತು ಪಡಿತರ ವಿತರಣೆ ಮಾಡುತ್ತಿದ್ದಾರೆ.

ಬೆಂಗಳೂರು: ಕೊರೋನಾ  ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿರುವ ನಿಟ್ಟಿನಲ್ಲಿ ಆದರ್ಶ ಆಟೋ ಚಾಲಕರ ಯೂನಿಯನ್ ಮತ್ತು ನಾಗರಿಕ ಮುಖಂಡ ಸಿ ಸಂಪತ್ ಅಗತ್ಯವಿರವವರಿಗೆ ಆಹಾರ ಮತ್ತು ಪಡಿತರ ವಿತರಣೆ ಮಾಡುತ್ತಿದ್ದಾರೆ.

ದೈನಂದಿನ ಆಹಾರಕ್ಕಾಗಿ ಪರದಾಡುತ್ತಿರುವವರ ಜೊತೆಗೆ ವಲಸಿಗ  ಕಾರ್ಮಿಕರಿಗೂ ಸಹ ಸಹಾಯ ಮಾಡುತ್ತಿದ್ದಾರೆ.

ಯಶವಂತಪುರ ಎಪಿಎಂಸಿ ಯಾರ್ಡ್ ನಲ್ಲಿ ಪಡಿತರ ಆಹಾರ ಸಂಗ್ರಹಿಸಿ,ಕಳೆದ ನಾಲ್ಕು ದಿನಗಳಿಂದ ದಿನಕ್ಕೆ ಎರಡು ಬಾರಿ ಆಹಾರ ಸಂಗ್ರಹಿಸಿ ಅಗತ್ಯವಿರುವವರಿಗೆ ನೀಡುತ್ತಿದ್ದಾರೆ.

5 ಕೆಜಿ ಅಕ್ಕಿ, 1 ಕೆಜಿ ತೊಗರಿ ಬೇಳೆ, 1ಕೆಜಿ ಸಕ್ಕರೆ,  ಅಡುಗೆ ಎಣ್ಣೆ, ಅರಿಶಿನ ಪುಡಿ, ಸಾಂಬಾರ್ ಪೌಡರ್, ಮತ್ತು 1ಪ್ಯಾಕೆಟ್ ಬಿಸ್ಕಿಟ್ ಪ್ಯಾಕ್ ಮಾಡಿ ಎಸ್ ಕೆ ಗಾರ್ಡನ್, ಪುಲಕೇಶಿ ನಗರದ ಮನ ಮನೆಗಳಿಗೆ ತೆರಳಿ ಹಂಚುತ್ತಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಬರಲು ಸಾಧ್ಯವಿಲ್ಲ, ಹೀಗಾಗಿ ನನ್ನ ಆಟೋದಲ್ಲಿ ಆಹಾರ ಪದಾರ್ಥ ತಂದು ಮನೆ ಮನೆಗಳಿಗೆ ತಂದು ಕೊಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಸರಕುಗಳನ್ನು ಸ್ವೀಕರಿಸುವವರಿಗೆ ಹ್ಯಾಂಡ್ ಸ್ಯಾನಿಟೈಜರ್‌ಗಳನ್ನು ನೀಡಲಾಗುತ್ತದೆ. ಸಂಪತ್ ರೈಸ್ ಬಾತ್, ಬ್ರಿಂಜಾಲ್ ರೈಸ್ ಪುಳಿಯೊಗರೆ, ವೆಜ್ ಬಿರಿಯಾನಿಯನ್ನು ಬಿಬಿಎಂಪಿಯಿಂದ ಸಂಗ್ರಹಿಸಿ ಹಸಿದವರಿಗೆ ನೀಡುತ್ತಿದ್ದಾರೆ.

ಆದರ್ಶ ಯೂನಿಯನ್ ನ 14 ಸಾವಿರ ಆಟೋ ಚಾಲಕರಿಗೆ ಆಹಾರ ಮತ್ತು ಪಡಿತರ ನೀಡಿದ್ದು, ಯಶವಂತಪುರದಲ್ಲಿನ ಕಲ್ಯಾಣಮಂಟಪದಲ್ಲಿ ಪ್ಯಾಕ್ ಮಾಡಿಟ್ಟು ಅಲ್ಲಿಂದ ಪೌರಕಾರ್ಮಿಕರು, ಶೂ ಹೊಲಿಯುವವರು,ಪೇಂಟರ್ಸ್, ಕಾರ್ಪೆಂಟರ್ಸ್, ಎಲೆಕ್ಟ್ರಿಶಿಯನ್ಸ್ ನೀಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಳ್ಳಿ, ಕಳ್ಳಿ' ಅಂತಾ ಘೋಷಣೆ ಕೂಗಿ ಮಮತಾ ಬ್ಯಾನರ್ಜಿ ಕಾರಿನ ಮೇಲೆ ಕಲ್ಲು ತೂರಾಟ, ಕೆಸರು ಎರಚಿ ಆಕ್ರೋಶ! ಭಯಾನಕ Video

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

ಬಿಡದಿ ಟೌನ್‌ಶಿಪ್‌ ಯೋಜನೆ ಬಗ್ಗೆ BJP-JDS ಅಪಪ್ರಚಾರ, ರೈತರ ಭೂಮಿ ಬಲವಂತವಾಗಿ ಪಡೆಯಲ್ಲ: ಸಚಿವ ಯತೀಂದ್ರ

ಖಾತೆ ಹಂಚಿಕೆಗೂ ಮುನ್ನ ಸಚಿವ ನಾಗೇಂದ್ರಗೆ ಸಂಕಷ್ಟ! ವಿಶೇಷ ನ್ಯಾಯಾಲಯದ ಜಾಮೀನು ಷರತ್ತು ಉಲ್ಲಂಘಿಸಿದ ಆರೋಪ

ಮುಂಬೈ: ಬಾಲಿವುಡ್ ನಟಿಯ ಮೇಲೆ ಅತ್ಯಾಚಾರ ಆರೋಪ; 73 ವರ್ಷದ ಖ್ಯಾತ ಸಿನಿಮಾ ಡೈರೆಕ್ಟರ್ ಬಂಧನ!