ಆಹಾರ ಪಟ್ಟಣ ಸಂಗ್ರಹಿಸುತ್ತಿರುವ ಸಂಪತ್ 
ರಾಜ್ಯ

ಕಾರ್ಮಿಕರಿಗೆ, ಆಟೋ ಚಾಲಕರಿಗೆ ಆಟೋ ಅಣ್ಣನಿಂದ ಪ್ರತಿನಿತ್ಯ ಆಹಾರ, ಪಡಿತರ ವಿತರಣೆ

ಕೊರೋನಾ  ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿರುವ ನಿಟ್ಟಿನಲ್ಲಿ ಆದರ್ಶ ಆಟೋ ಚಾಲಕರ ಯೂನಿಯನ್ ಮತ್ತು ನಾಗರಿಕ ಮುಖಂಡ ಸಿ ಸಂಪತ್ ಅಗತ್ಯವಿರವವರಿಗೆ ಆಹಾರ ಮತ್ತು ಪಡಿತರ ವಿತರಣೆ ಮಾಡುತ್ತಿದ್ದಾರೆ.

ಬೆಂಗಳೂರು: ಕೊರೋನಾ  ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿರುವ ನಿಟ್ಟಿನಲ್ಲಿ ಆದರ್ಶ ಆಟೋ ಚಾಲಕರ ಯೂನಿಯನ್ ಮತ್ತು ನಾಗರಿಕ ಮುಖಂಡ ಸಿ ಸಂಪತ್ ಅಗತ್ಯವಿರವವರಿಗೆ ಆಹಾರ ಮತ್ತು ಪಡಿತರ ವಿತರಣೆ ಮಾಡುತ್ತಿದ್ದಾರೆ.

ದೈನಂದಿನ ಆಹಾರಕ್ಕಾಗಿ ಪರದಾಡುತ್ತಿರುವವರ ಜೊತೆಗೆ ವಲಸಿಗ  ಕಾರ್ಮಿಕರಿಗೂ ಸಹ ಸಹಾಯ ಮಾಡುತ್ತಿದ್ದಾರೆ.

ಯಶವಂತಪುರ ಎಪಿಎಂಸಿ ಯಾರ್ಡ್ ನಲ್ಲಿ ಪಡಿತರ ಆಹಾರ ಸಂಗ್ರಹಿಸಿ,ಕಳೆದ ನಾಲ್ಕು ದಿನಗಳಿಂದ ದಿನಕ್ಕೆ ಎರಡು ಬಾರಿ ಆಹಾರ ಸಂಗ್ರಹಿಸಿ ಅಗತ್ಯವಿರುವವರಿಗೆ ನೀಡುತ್ತಿದ್ದಾರೆ.

5 ಕೆಜಿ ಅಕ್ಕಿ, 1 ಕೆಜಿ ತೊಗರಿ ಬೇಳೆ, 1ಕೆಜಿ ಸಕ್ಕರೆ,  ಅಡುಗೆ ಎಣ್ಣೆ, ಅರಿಶಿನ ಪುಡಿ, ಸಾಂಬಾರ್ ಪೌಡರ್, ಮತ್ತು 1ಪ್ಯಾಕೆಟ್ ಬಿಸ್ಕಿಟ್ ಪ್ಯಾಕ್ ಮಾಡಿ ಎಸ್ ಕೆ ಗಾರ್ಡನ್, ಪುಲಕೇಶಿ ನಗರದ ಮನ ಮನೆಗಳಿಗೆ ತೆರಳಿ ಹಂಚುತ್ತಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಬರಲು ಸಾಧ್ಯವಿಲ್ಲ, ಹೀಗಾಗಿ ನನ್ನ ಆಟೋದಲ್ಲಿ ಆಹಾರ ಪದಾರ್ಥ ತಂದು ಮನೆ ಮನೆಗಳಿಗೆ ತಂದು ಕೊಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಸರಕುಗಳನ್ನು ಸ್ವೀಕರಿಸುವವರಿಗೆ ಹ್ಯಾಂಡ್ ಸ್ಯಾನಿಟೈಜರ್‌ಗಳನ್ನು ನೀಡಲಾಗುತ್ತದೆ. ಸಂಪತ್ ರೈಸ್ ಬಾತ್, ಬ್ರಿಂಜಾಲ್ ರೈಸ್ ಪುಳಿಯೊಗರೆ, ವೆಜ್ ಬಿರಿಯಾನಿಯನ್ನು ಬಿಬಿಎಂಪಿಯಿಂದ ಸಂಗ್ರಹಿಸಿ ಹಸಿದವರಿಗೆ ನೀಡುತ್ತಿದ್ದಾರೆ.

ಆದರ್ಶ ಯೂನಿಯನ್ ನ 14 ಸಾವಿರ ಆಟೋ ಚಾಲಕರಿಗೆ ಆಹಾರ ಮತ್ತು ಪಡಿತರ ನೀಡಿದ್ದು, ಯಶವಂತಪುರದಲ್ಲಿನ ಕಲ್ಯಾಣಮಂಟಪದಲ್ಲಿ ಪ್ಯಾಕ್ ಮಾಡಿಟ್ಟು ಅಲ್ಲಿಂದ ಪೌರಕಾರ್ಮಿಕರು, ಶೂ ಹೊಲಿಯುವವರು,ಪೇಂಟರ್ಸ್, ಕಾರ್ಪೆಂಟರ್ಸ್, ಎಲೆಕ್ಟ್ರಿಶಿಯನ್ಸ್ ನೀಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Indian Stock Market: ರಕ್ತಾಪಾತ.. ಒಂದೇ ಗಂಟೆಯಲ್ಲಿ ಹೂಡಿಕೆದಾರರಿಗೆ 7,60,00,00,00,000 ನಷ್ಟ!

ಯುದ್ಧ ನಮ್ಮದಲ್ಲ: ಶಶಿತರೂರ್ ಬಳಿಕ ಮೋದಿ ಸರ್ಕಾರವನ್ನು ಸಮರ್ಥಿಸಿಕೊಂಡ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ

ಭಾರತ- ಪಾಕಿಸ್ತಾನದ ಸಂಘರ್ಷ ಅಣ್ವಸ್ತ್ರದ ಅಪಾಯದಲ್ಲೇ ಇದೆ, ಪಾಕ್ ನಿಂದ ನಮಗೂ ಅಪಾಯ ತಪ್ಪಿದ್ದಲ್ಲ: ಅಮೆರಿಕ

ಸಮುದ್ರದಲ್ಲೇ ಬಿಗ್ ಡೀಲ್‌: ಚೀನಾದತ್ತ ಹೊರಟಿದ್ದ ರಷ್ಯಾದ ತೈಲ ನೌಕೆ ಭಾರತಕ್ಕೆ ಯು-ಟರ್ನ್!

ಪ್ರತಿ ವ್ಯಕ್ತಿ ತನ್ನ ಜೀವನದಲ್ಲಿ ಏನಾಗುತ್ತಿದೆ ಎಂದು ಎಲ್ಲರಿಗೂ ಹೇಳಲು ಬಯಸುವುದಿಲ್ಲ": ವಿವಾಹ ವದಂತಿಗೆ ಬಗ್ಗೆ ನಟಿ ಅನುಷ್ಕಾ ಶೆಟ್ಟಿ ಪ್ರತಿಕ್ರಿಯೆ...

SCROLL FOR NEXT