ಆಹಾರ ಧಾನ್ಯ 
ರಾಜ್ಯ

ಬಾಗಲಕೋಟೆ: ಗೋವಾದಲ್ಲಿನ ತವರಿನ ಜನತೆಗಾಗಿ ಮಿಡಿಯಿತು ಮನ

ಕೇಂದ್ರ ಸರ್ಕಾರ ಲಾಕ್‌ಡೌನ್ ಸೂತ್ರಕ್ಕೆ ಒಳಗಾಗಿ ಉದ್ಯೋಗ, ಆಹಾರವಿಲ್ಲದೆ ಬಾಗಲಕೋಟೆ ವಿಧಾನಸಭೆ ಕ್ಷೇತ್ರವ್ಯಾಪ್ತಿಯ ಕೂಲಿ ಕಾರ್ಮಿಕರು ಗೋವೆಯಲ್ಲಿ ತೊಂದರೆಯಲ್ಲಿ ಸಿಲುಕಿಕೊಂಡಿದ್ದಾರೆ.

ಬಾಗಲಕೋಟೆ: ಕೇಂದ್ರ ಸರ್ಕಾರ ಲಾಕ್‌ಡೌನ್ ಸೂತ್ರಕ್ಕೆ ಒಳಗಾಗಿ ಉದ್ಯೋಗ, ಆಹಾರವಿಲ್ಲದೆ ಬಾಗಲಕೋಟೆ ವಿಧಾನಸಭೆ ಕ್ಷೇತ್ರವ್ಯಾಪ್ತಿಯ ಕೂಲಿ ಕಾರ್ಮಿಕರು ಗೋವೆಯಲ್ಲಿ ತೊಂದರೆಯಲ್ಲಿ ಸಿಲುಕಿಕೊಂಡಿದ್ದಾರೆ.

ಮಾರಕ ಕೊರೋನಾ ವೈರಸ್ ನಿಯಂತ್ರಣ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಿದಾಗ, ಮಂಗಳೂರು, ಕೇರಳ, ಮುಂಬಯಿ, ಪುಣೆ ಮತ್ತು ಗೋವಾಕ್ಕೆ ಗುಳೇ ಹೋಗಿದ್ದ ಜನರಲ್ಲಿ ಬಹುತೇಕರು ಹೇಗೋ ಬಂದು ಊರು ಸೇರಿಕೊಂಡಿದ್ದಾರೆ. ಕೆಲವಷ್ಟು ಜನ ಇಲ್ಲಿಗೆ ಬಂದು ಕ್ವಾರಂಟೈನ್ ಆಗಿದ್ದಾರೆ.

ಇಷ್ಟಾಗಿಯೂ ಗೋವೆಯಲ್ಲಿ ಇನ್ನೂ ೫೦೦ಕ್ಕೂ ಅಧಿಕ ಕುಟುಂಬಗಳು ಅಲ್ಲಿಯೇ ಉಳಿದಿಕೊಂಡಿವೆ. ಆ ಕುಟುಂಬಗಳೆಲ್ಲ ಉದ್ಯೋಗ, ಆಹಾರವಿಲ್ಲದೆ ತೊಂದರೆಯಲ್ಲಿ ಬದುಕುತ್ತಿವೆ. ಜೀವನ ಸಾಗಿಸುವುದೇ ಕಷ್ಟವಾಗಿದ್ದು, ಊರಿಗೆ ಬಾರದ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಉದ್ಯೋಗವಿಲ್ಲದೆ, ಆಹಾರ ಸಮಸ್ಯೆ ಎದುರಿಸುತ್ತಿರುವವರಿಗೆ ಜಿಲ್ಲಾಡಳಿತ, ಜನಪ್ರತಿನಿಧಿಗಳು, ನಾನಾ ಸಂಘಸಂಸ್ಥೆಗಳು ಊಟ, ಆಹಾರ,ಧಾನ್ಯ, ಹಾಲು,ಹಣ್ಣು ಪೂರೈಕೆ ಮಾಡುತ್ತಿವೆ. ಆದರೆ ದೂರದ ಗೋವಾದಲ್ಲಿರುವ ನಮ್ಮವರನ್ನು ಕಾಳಜಿ ಮಾಡುವವರಾರು ಎನ್ನುವ ಪ್ರಶ್ನೆ ಎದುರಾಗುತ್ತಲೇ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಅವರು ಗೋವೆಯಲ್ಲಿರುವ ೫೦೦ ಕುಟುಂಬಗಳನ್ನು ಆಹಾರ ಸಮಸ್ಯೆಯಿಂದ ಪಾರು ಮಾಡಲು ಇಲ್ಲಿಂದಲೇ ಆಹಾರ ಸಾಮಾಗ್ರಿಗಳ ಕಿಟ್ ಸಿದ್ದಪಡಿಸಿ ಗೋವೆಗೆ ಕಳುಹಿಸಿಕೊಟ್ಟಿದ್ದಾರೆ.

ಗೋವಾದಲ್ಲಿರುವ ಇಲ್ಲಿನ ೫೧೦ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಆಹಾರದ ಕಿಟ್‌ಗಳನ್ನು ಸಿದ್ದ ಪಡಿಸಿ, ಅವುಗಳನ್ನು ಲಾರಿ ಮೂಲಕ ಕಳುಹಿಸಲಾಗಿದ್ದು, ಅಲ್ಲಿರುವ ನಮ್ಮವರ ಕುಟುಂಬಗಳನ್ನು ಗುರುತಿಸಿ ಹಂಚಿಕೆ ಮಾಡಲು ಇಲ್ಲಿಂದಲೇ ಶಾಸಕರ ಬೆಂಬಲಿಗರ ಪಡೆ ಹೋಗಿದೆ.

ಗೋವೆಯಲ್ಲಿ ತೀವ್ರ ಸಂಕಷ್ಟದಲ್ಲಿರುವ ತವರಿನ ಮಕ್ಕಳಿಗಾಗಿ ಕಳುಹಿಸಿರುವ ಆಹಾರದ ಕಿಟ್‌ಗಳು ತಲುಪುತ್ತಿದ್ದಂತೆ ಅಲ್ಲಿನ ಮನಗಳು ಸದ್ಯಕ್ಕೆ ಆಹಾರ ಸಮಸ್ಯೆಯಿಂದ ಪಾರಾದಲ್ಲಿ ಅಷ್ಟರ ಮಟ್ಟಿಗೆ ಶಾಸಕರು ಹಾಗೂ ಅವರ ಬೆಂಬಲಿಗರು ಪಟ್ಟ ಪ್ರಯತ್ನ ಸಾರ್ಥಕವಾಗಲಿದೆ. ಕೆಲ ದಿನಗಳ ಮಟ್ಟಿಗಾದರೂ ಆ ಕುಟುಂಬಗಳ ಬದಕಿನ ಜಟಕಾ ಬಂಡು ಉರುಳಲಿದೆ.

-ವಿಠ್ಠಲ ಆರ್. ಬಲಕುಂದಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT