ರಾಜ್ಯ

ಏ.29 ರಿಂದ ಬೆಂಗಳೂರಿನಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಕಾರ್ಯಾರಂಭ: ಆರ್. ಅಶೋಕ

Srinivas Rao BV

ಬೆಂಗಳೂರು: ನಾಳೆ (ಏ.29 ರಿಂದ) ಯಿಂದ ಬೆಂಗಳೂರಿನಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ತೆರೆಯಲು ಆದೇಶ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದ್ದಾರೆ. 

ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಈಗಾಗಲೇ ಬೇರೆ ಬೇರೆ ಜಿಲ್ಲೆಗಳಲ್ಲಿ ಉಪನೋಂದಣಾಧಿಕಾರಿ ಕಚೇರಿಗಳು ತೆರೆದಿವೆ. ಜನರು ಕಚೇರಿಗಳಿಗೆ ಬರುತ್ತಿಲ್ಲ ಎಂಬುದು ತಮ್ಮ ಗಮನಕ್ಕೆ ಬಂದಿದೆದೆ. ಆದರೆ ಕಚೇರಿ ತೆರೆದ ಕೂಡಲೇ ಜನರು ಬರಲು ಉಪನೋಂದಣಾಧಿಕಾರಿಗಳ ಕಚೇರಿ ಎನ್ನುವುದು ಹೊಟೇಲ್ ಅಲ್ಲ. 

ಈಗಷ್ಟೆ ಆರಂಭವಾಗಿವೆ. ಕಚೇರಿ ಕೆಲಸಗಳು ನಡೆಯುತ್ತಿರುತ್ತವೆ. ಹತ್ತು ದಿನಗಳಲ್ಲಿ ಎಲ್ಲವೂ ಸರಿ ಆಗಲಿದೆ ಎಂದು ಪ್ರಶ್ನೆಯೊಂದಕ್ಕೆ ಅಶೋಕ್ ಉತ್ತರಿಸಿದರು.

SCROLL FOR NEXT