ಹಾಟ್ ಸ್ಪಾಟ್ 
ರಾಜ್ಯ

ನಗರದಲ್ಲಿ ಕೊರೋನಾ ಹಾಟ್‌ಸ್ಪಾಟ್ ಸಂಖ್ಯೆ 42ಕ್ಕೆ ಏರಿಕೆ

ಕೊರೊನಾ ವೈರಾಣು ಸೋಂಕಿತ ಪ್ರಕರಣಗಳನ್ನು ಆಧರಿಸಿ ನಗರದ ಹಾಟ್‌ಸ್ಪಾಟ್‌ ವಾರ್ಡ್‌ಗಳ ಸಂಖ್ಯೆಯನ್ನು 42ಕ್ಕೆ ಹೆಚ್ಚಿಸಲಾಗಿದ್ದು ಕಂಟೈನ್ಮೆಂಟ್‌ ವಲಯಗಳ (ನಿಯಂತ್ರಿತ ಪ್ರದೇಶ) ಸಂಖ್ಯೆಯಲ್ಲೂ ಏರಿಕೆ ಕಂಡಿದೆ.

ಬೆಂಗಳೂರು:ಕೊರೊನಾ ವೈರಾಣು ಸೋಂಕಿತ ಪ್ರಕರಣಗಳನ್ನು ಆಧರಿಸಿ ನಗರದ ಹಾಟ್‌ಸ್ಪಾಟ್‌ ವಾರ್ಡ್‌ಗಳ ಸಂಖ್ಯೆಯನ್ನು 42ಕ್ಕೆ ಹೆಚ್ಚಿಸಲಾಗಿದ್ದು ಕಂಟೈನ್ಮೆಂಟ್‌ ವಲಯಗಳ (ನಿಯಂತ್ರಿತ ಪ್ರದೇಶ) ಸಂಖ್ಯೆಯಲ್ಲೂ ಏರಿಕೆ ಕಂಡಿದೆ.

ಏಪ್ರಿಲ್ 14ರಂದು ಈ ವಾರ್ಡ್‌ಗಳ ಸಂಖ್ಯೆ 38 ಇತ್ತು. ಆನಂತರ ಕ್ರಮೇಣ ಇಳಿಕೆಯಾಗಿತ್ತು. ಇದೇ ಮೊದಲ ಬಾರಿಗೆ ಹಾಟ್‌ಸ್ಪಾಟ್‌ ವಾರ್ಡ್‌ಗಳ ಸಂಖ್ಯೆ 42ಕ್ಕೆ ಏರಿರುವುದು ಆತಂಕ ಮೂಡಿಸಿದೆ. ಹಂಪಿನಗರ, ಬ್ಯಾಟರಾಯನಪುರ, ಜಗಜೀವನ್‌ರಾಂನಗರ, ಛಲವಾದಿಪಾಳ್ಯ, ಶಿವನಗರ, ಪುಲಿಕೇಶಿನಗರ, ನಾಗಪುರ, ಭೈರಸಂದ್ರ ವಾರ್ಡ್‌ಗಳು ಹಾಟ್‌ಸ್ಪಾಟ್‌ ವಾರ್ಡ್‌ಗಳ ಸಾಲಿಗೆ ಹೊಸದಾಗಿ ಸೇರಿವೆ.

ಹಾಟ್‌ಸ್ಪಾಟ್‌ ವಾರ್ಡ್‌ಗಳನ್ನು ಸೀಲ್‌ಡೌನ್‌ ಮಾಡುವುದಿಲ್ಲ. ಬದಲಿಗೆ ಆ ವಾರ್ಡ್‌ನಲ್ಲಿ ಸೋಂಕಿತರು ವಾಸವಿದ್ದ ಪ್ರದೇಶವನ್ನು ಕಂಟೇನ್ಮೆಂಟ್‌ ವಲಯವೆಂದು ಗುರುತಿಸಿ, ಸೀಲ್‌ಡೌನ್‌ ಮಾಡಲಾಗುತ್ತಿದೆ. ಈ ಮಧ್ಯೆ, ಕೊರೊನಾ ಸೋಂಕಿತರುವ ವಾಸವಿದ್ದ ಪ್ರದೇಶಗಳನ್ನು ಕಂಟೇನ್ಮೆಂಟ್‌ ವಲಯಗಳೆಂದು (ನಿಯಂತ್ರಿತ ಪ್ರದೇಶ) ಗುರುತಿಸುತ್ತಿದ್ದು, ಈ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಈವರೆಗೆ 135 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 58 ಮಂದಿ ಗುಣಮುಖರಾಗಿದ್ದಾರೆ.

ಆರು ಮಂದಿ ಮೃತಪಟ್ಟಿದ್ದಾರೆ. ಬೊಮ್ಮನಹಳ್ಳಿ ಮತ್ತು ಪಶ್ಚಿಮ ವಲಯದಲ್ಲಿಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಇಲ್ಲಿ ತಲಾ 37 ಪ್ರಕರಣಗಳು ವರದಿಯಾಗಿವೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 450 ಮಂದಿ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 4369 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ