ಸಂಗ್ರಹ ಚಿತ್ರ 
ರಾಜ್ಯ

ಲಾಕ್‌ಡೌನ್ ನಿಂದಾಗಿ ಪರೀಕ್ಷೆಗಳ ಮುಂದೂಡಿಕೆ: ದ್ವಿತೀಯ ಪಿಯು ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

ದ್ವಿತೀಯ ಪಿಯು ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗಳಲ್ಲಿ ಕೇವಲ ಒಂದು ಪತ್ರಿಕೆ ಬಾಕಿ ಇದೆ ಆದರೆ ನಕಲಿ ಸುದ್ದಿಗಳು ಬಿತ್ತರಿಸುವ ಸುದ್ದಿ ಕೇಳಿ , ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದವಾಗುತ್ತಿರುವ ವಿದ್ಯಾರ್ಥಿಗಳು ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದ್ದಾರೆ. “ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ನಾವು ಈಗ ನಮ್ಮ ಶಿಕ್ಷಕರಿಂದ ಪಡೆದ ಮ

ಬೆಂಗಳೂರು: ದ್ವಿತೀಯ ಪಿಯು ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗಳಲ್ಲಿ ಕೇವಲ ಒಂದು ಪತ್ರಿಕೆ ಬಾಕಿ ಇದೆ ಆದರೆ ನಕಲಿ ಸುದ್ದಿಗಳು ಬಿತ್ತರಿಸುವ ಸುದ್ದಿ ಕೇಳಿ , ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದವಾಗುತ್ತಿರುವ ವಿದ್ಯಾರ್ಥಿಗಳು ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದ್ದಾರೆ. “ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ನಾವು ಈಗ ನಮ್ಮ ಶಿಕ್ಷಕರಿಂದ ಪಡೆದ ಮಾಹಿತಿಯನ್ನು ಮಾತ್ರ  ನಂಬಲು ಬಯಸುತ್ತೇವೆ. ಕೆಲವು ಪೋರ್ಟಲ್‌ಗಳು ಪರೀಕ್ಷೆಗಳ ಬಗೆಗೆ ಇಲ್ಲ ಸಲ್ಲದ ವದಂತಿ ಘರಡಿವೆ. "ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಯೊಬ್ಬರು ಹೇಳಿದರು.

"ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮುಂಚಿತವಾಗಿ ವಾರ್ಷಿಕ ಪರೀಕ್ಷೆಗಳು ಯಾವಾಗಲೂ ಪೂರ್ಣಗೊಳ್ಳುವುದರಿಂದ, ಭವಿಷ್ಯ ಹೇಗಿರಲಿದೆ ಎಂಬುದರ ಬಗ್ಗೆ ಪೋಷಕರು ಸಹ ಕಳವಳ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ಅನುಮಾನಗಳನ್ನು ಸ್ಪಷ್ಟಪಡಿಸಲು ಕರೆ ಮಾಡಿದಲ್ಲಿ ಅಧ್ಯಾಪಕ ಸದಸ್ಯರು ಉತ್ತರಿಸಲಿದ್ದಾರೆ. ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರಿ ಗೊಳಿಸಲು ವಾಟ್ಸಾಪ್ ಗುಂಪುಗಳಿದೆ. ಆನ್‌ಲೈನ್‌ನಲ್ಲಿ ಹಲವಾರು ಅಣಕು ಪರೀಕ್ಷಾ ಮಾದರಿಗಳು ಸಹ ಲಭ್ಯವಿದ್ದು ಉಚಿತ ಕೋಚಿಂಗ್ ಕಾರ್ಯವಿಧಾನ ಚಾಲ್;ತಿಯಲ್ಲಿದೆ. " ಸೇಂಟ್ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ ರೂಪಾ ಎಸ್ ಹೇಳಿದರು.

ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ತಮ್ಮ ಆನ್‌ಲೈನ್ ಪೋರ್ಟಲ್ ಮೂಲಕ ಸಿಇಟಿಗೆ ರಾಜ್ಯ ಸರ್ಕಾರ ಒದಗಿಸುವ ಆನ್‌ಲೈನ್ ಕೋಚಿಂಗ್ ಗಾಗಿ ಆಸಕ್ತಿಯಿಂದ ಕಾಯುತ್ತಿದ್ದಾರೆ.  “ನಮಗೆ ತರಗತಿಯಲ್ಲಿ ಒಂದು ವಿಧಾನ ಹೇಳೀಕೊಡಲಾಗುವುದು. ಆನ್‌ಲೈನ್ ತರಗತಿಯಲ್ಲಿ ಶಾರ್ಟ್‌ಕಟ್ ಸೂತ್ರವನ್ನು ಕಲಿಸಲಾಗುತ್ತದೆ. ಸಾಮಾನ್ಯ ತರಗತಿಯಲ್ಲಿ ನಾವು ಕಲಿಯುವ ವಿಧಾನಹೇಗೆ ಪಡೆಯಲಾಗಿದೆ ಎಂಬುದರ ಕುರಿತು ಯಾವುದೇ ವಿವರಣೆಯಿಲ್ಲ ”ಎಂದು ಸಿಇಟಿಗೆ ತಯಾರಾಗುತ್ತಿರುವ ವಿದ್ಯಾರ್ಥಿ  ವರುಣ್ ಎ ಹೇಳಿದರು.

“ಆನ್‌ಲೈನ್ ತರಗತಿಗಳು ಸಾಮಾನ್ಯ ತರಗತಿಯ ಬೋಧನೆಗೆ ಪರ್ಯಾಯವಲ್ಲ.  ಲಾಕ್‌ಡೌನ್ ರಜೆಯಂತೆ ಭಾಸವಾಗುತ್ತದೆ. ಗೆಟ್‌ಸೆಟ್‌ಗೋ ಉತ್ತಮ ಉಪಕ್ರಮ ಆದರೆ ಅನುಮಾನಗಳನ್ನು ನಿವಾರಿಸುವ  ಯಾವುದೇ ಕಾರ್ಯವಿಧಾನವಿಲ್ಲ. "ಸಿಇಟಿಗೆ ತಯಾರಾಗುತ್ತಿರುವ ವಿದ್ಯಾರ್ಥಿನಿ ಮೊನಾಲಿಸಾ ಆರ್ ಹೇಳಿದರು. ಕೋಚಿಂಗ್ ತರಗತಿಗಳನ್ನು ಅವಲಂಬಿಸಿರುವ ಅವರ ಹಲವಾರು ಗೆಳೆಯ, ಗೆಳತಿಯರು ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ  ತಯಾರಾಗುವವರು ಈ ಅವಧಿಯಲ್ಲಿ ಉತ್ತಮ ತರಬೇತಿಪಡೆಯಲು ಸಾಧ್ಯವಾಗಿಲ್ಲ.ನ್‌ಲೈನ್ ತರಗತಿಗಳು ನಮಗೆ ಅಂತರ್ಜಾಲಸೌಲಭ್ಯವಿದ್ದರಷ್ಟೇ ದೊರಕಲಿದೆ"ನಾವು ಲಾಕ್ ಡೌನ್ ಮಾಡುವ ಮೊದಲು ನಮ್ಮ ಭಾಗಗಳನ್ನು ಕೋಚಿಂಗ್ ತರಗತಿಗಳಲ್ಲಿ ಮುಗಿಸಿದ್ದೇವೆ. ಅನುಮಾನಗಳನ್ನು ನಿವಾರಿಸಲು  ಆನ್‌ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ ”ಎಂದು ಕ್ರೈಸ್ಟ್ ವಿಶ್ವವಿದ್ಯಾಲಯದ ಕ್ಯಾಲ್ವರ್ಟ್ ಎನ್ ಹೇಳಿದರು.

ನೀಟ್, ಜೆಇಇ ವಿಳಂಬಗೊಳಿಸುವ ನಿರ್ಧಾರಕ್ಕೆ ಸಚಿವರ ಶ್ಲಾಘನೆ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಮಂಗಳವಾರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಅವರೊಂದಿಗಿನ ವಿಡಿಯೋ ಸಂವಾದದಲ್ಲಿ ನೀಟ್ ಮತ್ತು ಜೆಇಇ ಮುಂದೂಡುವ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಪೋಖ್ರಿಯಾಲ್ ರಾಜ್ಯ ಶಿಕ್ಷಣ ಸಚಿವರೊಂದಿಗೆ ಸಂವಾದ ನಡೆಸಿ  ಸಾಮಾನ್ಯ ಸ್ಥಿತಿಗೆ ಮರಳಿದ ನಂತರ ಎರಡನೇ ವರ್ಷದ ಪಿಯು ಪರೀಕ್ಷೆಯ ಕೊನೆಯ  ಪತ್ರಿಕೆಯನ್ನು ಮುಗಿಸಲು  ಕರ್ನಾಟಕ ಆಶಿಸುತ್ತಿದೆ ಎಂದು ಕುಮಾರ್ ಪೋಖ್ರಿಯಲ್‌ಗೆ ತಿಳಿಸಿದರು.

 ಪ್ರಸ್ತುತ ಮತ್ತು ಮುಂಬರುವ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಸರ್ಕಾರ ಹಾಕಿಕೊಂಡ ಯೋಜನೆಗಳನ್ನು ಕೇಂದ್ರ ಸಚಿವರಿಗೆ ವಿವರಿಸಿದ ಸುರೇಶ್ ಕುಮಾರ್ ರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ “ಬಡ ಮಕ್ಕಳಿಗೆ” ಟ್ಯಾಬ್‌ಗಳನ್ನು ಒದಗಿಸಲು ಕೇಂದ್ರದ ಸಹಾಯವನ್ನು ಕೋರಿದರು. "ಮುಂದಿನ ದಿನಗಳಲ್ಲಿ, ಸರ್ಕಾರಿ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಹೋಗಬೇಕಾಗಬಹುದು, ಆದ್ದರಿಂದ ಅವರಿಗೆ ಟ್ಯಾಬ್ಲೆಟ್‌ಗಳನ್ನು ಒದಗಿಸುವ ಅವಶ್ಯಕತೆಯಿದೆ" ಎಂದು  ಅವರು ಅರಿಕೆ ಮಾಡಿದ್ದಾರೆ.

ಏತನ್ಮಧ್ಯೆ, ಮಾರ್ಚ್ 13 ರಿಂದ ತರಗತಿಗಳನ್ನು ನಿಲ್ಲಿಸಿದ್ದರಿಂದ 25 ಶಾಲಾ ದಿನಗಳು ನಷ್ಟವಾಗಿದೆ. ಜೂನ್ 1 ರಿಂದ ಶೈಕ್ಷಣಿಕ ಕ್ಯಾಲೆಂಡರ್  ಪ್ರಾರಂಭಿಸುವ ಬಗ್ಗೆ ರಾಜ್ಯ ಸರ್ಕಾರ ಇನ್ನೂ ತೀರ್ಮಾನಿಸಿಲ್ಲ. ಲಾಕ್‌ಡೌನ್ ವಿಸ್ತರಿಸಿದರೆ, ನಾವು ಇನ್ನಷ್ಟು ದಿನ ಕೆಲಸ ಮುಂದೂಡುವುದು ಅನಿವಾರ್ಯ" ಸಚಿವರು ಹೇಳೀದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT