ಸಾಂದರ್ಭಿಕ ಚಿತ್ರ 
ರಾಜ್ಯ

ಕರ್ನಾಟಕಕ್ಕೆ ಬಿಗ್ ರಿಲೀಫ್: ನಿನ್ನೆ 5218 ಮಂದಿ ಸೋಂಕಿತರು ಗುಣಮುಖ; 1 ಲಕ್ಷದ ಗಡಿಯತ್ತ ಕೋವಿಡ್‌ ಚೇತರಿಕೆಯ ಸಂಖ್ಯೆ

ಉತ್ತಮ ಬೆಳವಣಿಗೆಯಲ್ಲಿ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್‌ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಸೋಂಕಿತರಿಗಿಂತ ಹೆಚ್ಚಾಗಿದೆ. ಸೋಂಕಿನಿಂದ ಒಟ್ಟು ಚೇತರಿಸಿಕೊಂಡವರ ಪ್ರಮಾಣ ಕೂಡ ಒಂದು ಲಕ್ಷದ ಗಡಿ ತಲುಪಿದೆ.

ಬೆಂಗಳೂರು: ಉತ್ತಮ ಬೆಳವಣಿಗೆಯಲ್ಲಿ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್‌ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಸೋಂಕಿತರಿಗಿಂತ ಹೆಚ್ಚಾಗಿದೆ. ಸೋಂಕಿನಿಂದ ಒಟ್ಟು ಚೇತರಿಸಿಕೊಂಡವರ ಪ್ರಮಾಣ ಕೂಡ ಒಂದು ಲಕ್ಷದ ಗಡಿ ತಲುಪಿದೆ.

ಸೋಮವಾರ ರಾಜ್ಯದಲ್ಲಿ 5218 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದರಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 99,126ಕ್ಕೇರಿಕೆಯಾಗಿದೆ. ಜೊತೆಗೆ, ಕಳೆದ 24 ಗಂಟೆಗಳಲ್ಲಿ 4267 ಸೋಂಕಿತರು ಪತ್ತೆಯಾಗಿದ್ದು, 114 ಮಂದಿ ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಸೋಂಕಿತರ  ಸಂಖ್ಯೆ 1.82 ಲಕ್ಷ ತಲುಪಿದೆ. ಸದ್ಯ ರಾಜ್ಯದಲ್ಲಿ 3320 ಮಂದಿ ಮೃತಪಟ್ಟಿದ್ದು, 79,908 ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ 681 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ನಗರದಲ್ಲಿ 1243 ಪ್ರಕರಣಗಳು ವರದಿಯಾಗಿದ್ದು, 36 ಮಂದಿ ಮೃತಪಟ್ಟಿದ್ದಾರೆ. ಇದರಿಂದ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 75,428ಕ್ಕೇರಿಕೆಯಾಗಿದೆ. ಈ ಪೈಕಿ 32,985 ಸಕ್ರಿಯ ಪ್ರಕರಣಗಳಿವೆ. ಮೈಸೂರು ನಗರದಲ್ಲಿ 374, ಬಳ್ಳಾರಿಯಲ್ಲಿ 253, ದಾವಣಗೆರೆಯಲ್ಲಿ 225, ಕಲಬುರಗಿಯಲ್ಲಿ 196,  ರಾಯಚೂರಿನಲ್ಲಿ 165, ಧಾರವಾಡದಲ್ಲಿ 157, ಬಾಗಲಕೋಟೆಯಲ್ಲಿ 147, ದಕ್ಷಿಣ ಕನ್ನಡದಲ್ಲಿ 146, ವಿಜಯಪುರದಲ್ಲಿ 139, ಹಾಸನದಲ್ಲಿ 126, ಕೊಪ್ಪಳದಲ್ಲಿ 110, ಕೋಲಾರದಲ್ಲಿ 100 ಪ್ರಕರಣಗಳು ವರದಿಯಾಗಿವೆ.

ತುಮಕೂರಿನಲ್ಲಿ 98, ಉಡುಪಿಯಲ್ಲಿ 90, ರಾಮನಗರದಲ್ಲಿ 84, ಚಾಮರಾಜನಗರದಲ್ಲಿ 70, ಯಾದಗಿರಿಯಲ್ಲಿ 68, ಮಂಡ್ಯದಲ್ಲಿ 66, ಬೆಳಗಾವಿಯಲ್ಲಿ 54, ಉತ್ತರಕನ್ನಡದಲ್ಲಿ 53, ಬೆಂಗಳೂರು ಗ್ರಾಮಾಂತರದಲ್ಲಿ 50, ಹಾವೇರಿಯಲ್ಲಿ 45, ಚಿಕ್ಕಮಗಳೂರಿನಲ್ಲಿ 45, ಗದಗದಲ್ಲಿ 42, ಚಿತ್ರದುರ್ಗದಲ್ಲಿ 29,  ಬೀದರ್‌ನಲ್ಲಿ 28, ಚಿಕ್ಕಬಳ್ಳಾಪುರದಲ್ಲಿ 26 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದಳಪತಿ ವಿಜಯ್ ಅಭಿನಯದ 'ಜನ ನಾಯಗನ್'

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

SCROLL FOR NEXT