ಗಲಭೆ ವೇಳೆ ಸ್ಥಳದಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚಿರುವ ದುಷ್ಕರ್ಮಿಗಳು 
ರಾಜ್ಯ

ಗಲಭೆಕೋರರು ನನ್ನ ಕ್ಷೇತ್ರಕ್ಕೆ ಸೇರಿದವರಾಗಿರಲಿಲ್ಲ: ಶಾಸಕ ಅಖಂಡ ಶ್ರೀನಿವಾಸ ಮೂರ್ತಿ

ಮಂಗಳವಾರ ರಾತ್ರಿ ಏಕಾಏಕಿ 3-4 ಸಾವಿರ ಜನರು ಮನೆಯ ಮೇಲೆ ದಾಳಿ ನಡೆಸಿ, ನನ್ನ ಹಾಗೂ ತಮ್ಮನ ಮನೆಯನ್ನು ಸುಟ್ಟು ಹಾಕಿದ್ದಾರೆ. ಒಡವೆ, ಹಣ ಎತ್ತಿಕೊಂಡು ಹೋಗಿದ್ದಾರೆ. ಇವರಾರು ನನ್ನ ಕ್ಷೇತ್ರದ ಜನರಲಾಗಿರಲಿಲ್ಲ. ರಾಡ್ ಹಾಗೂ ಪೆಟ್ರೋಲ್ ನ್ನು ಹಿಡಿದು ಹೊರಗಿನಿಂದ ಬಂದಿದ್ದರು.

ಬೆಂಗಳೂರು: ಮಂಗಳವಾರ ರಾತ್ರಿ ಏಕಾಏಕಿ 3-4 ಸಾವಿರ ಜನರು ಮನೆಯ ಮೇಲೆ ದಾಳಿ ನಡೆಸಿ, ನನ್ನ ಹಾಗೂ ತಮ್ಮನ ಮನೆಯನ್ನು ಸುಟ್ಟು ಹಾಕಿದ್ದಾರೆ. ಒಡವೆ, ಹಣ ಎತ್ತಿಕೊಂಡು ಹೋಗಿದ್ದಾರೆ. ಇವರಾರು ನನ್ನ ಕ್ಷೇತ್ರದ ಜನರಲಾಗಿರಲಿಲ್ಲ. ರಾಡ್ ಹಾಗೂ ಪೆಟ್ರೋಲ್ ನ್ನು ಹಿಡಿದು ಹೊರಗಿನಿಂದ ಬಂದಿದ್ದರು. ಇದು ಪೂರ್ವ ನಿಯೋಜಿತ ಕೃತ್ಯವಾಗಿದೆ. ಪೊಲೀಸರಿಗೆ ಕರೆ ಮಾಡಲೂ ಕೂಡ ನಮಗೆ ಕಾಲಾವಕಾಶ ನೀಡಲಿಲ್ಲ ಎಂದು ಪುಲಿಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರು ಹೇಳಿದ್ದಾರೆ. 

ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಗಲಭೆಗೆ ರಾಜಕೀಯ ಕಾರಣಗಳನ್ನು ನಾನು ನೀಡುವುದಿಲ್ಲ. ಅಣ್ಣನ ಮಗನೊಂದಿಗೆ ಮಾತನಾಡಿ ಹಲವು ವರ್ಷಗಳೇ ಕಳೆದಿವೆ ಎಂದು ಹೇಳಿದ್ದಾರೆ. 

ಘಟನೆ ಬಳಿಕ ಶ್ರೀನಿವಾಸ ಮೂರ್ತಿಯವರೊಂದಿಗೆ ಅವರ ಅಣ್ಣನ ಮಗನ ನವೀನ್ ಅವರ ಫೋಟೋಗಳು ಹಾಗೂ ನಾಮಫಲಕಗಳು ಕಾವಲ್ ಬೈರಸಂದ್ರದಲ್ಲಿ ರಾರಾಜಿಸಲು ಆರಂಭಿಸಿವೆ. ನವೀನ್ ಅವರು 25 ವರ್ಷದ ಯುವಕನಾಗಿದ್ದು, ನಿರುದ್ಯೋಗಿಯಾಗಿದ್ದಾರೆ. ಎರಡು ತಿಂಗಳ ಹಿಂದಷ್ಟೇ ನವೀನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

SCROLL FOR NEXT