ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ 
ರಾಜ್ಯ

ಮುಂದಿನ ವರ್ಷದ ಆರಂಭದೊಳಗೆ ಕೋವಿಡ್ ಲಸಿಕೆ ಕುರಿತು ಒಳ್ಳೆಯ ಸುದ್ದಿ ಹೊಂದಿರಬೇಕು- ಡಬ್ಲ್ಯೂಎಚ್ ಒ ಮುಖ್ಯ ವಿಜ್ಞಾನಿ 

ಮುಂದಿನ ವರ್ಷದ ಆರಂಭದೊಳಗೆ ಕೋವಿಡ್-19 ಲಸಿಕೆ ಕುರಿತು ಒಳ್ಳೆಯ ಸುದ್ದಿಗಳನ್ನು ಹೊಂದಿರಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.

ಬೆಂಗಳೂರು: ಮುಂದಿನ ವರ್ಷದ ಆರಂಭದೊಳಗೆ ಕೋವಿಡ್-19 ಲಸಿಕೆ ಕುರಿತು ಒಳ್ಳೆಯ ಸುದ್ದಿಗಳನ್ನು ಹೊಂದಿರಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.

ಐಐಎಂ ಬೆಂಗಳೂರು ಆಯೋಜಿಸಿದ್ದ ಸಾರ್ವಜನಿಕ ನೀತಿ ಮತ್ತು ನಿರ್ವಹಣೆ ಕುರಿತ 15ನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸೀಮಿತ ಔಷಧದಿಂದಾಗಿ ಶ್ರೀಮಂತ ರಾಷ್ಟ್ರಗಳನ್ನು ಮೂಲೆಗುಂಪು ಮಾಡದೆ ಲಸಿಕೆಯನ್ನುವಿಶ್ವದಾದ್ಯಂತ ಸಮಾನವಾಗಿ ಹಂಚಿಕೆ ಮಾಡುವುದು ದೊಡ್ಡ ಸವಾಲಾಗಿದೆ ಎಂದರು.

ಆದರೆ, ಭಾರತದಲ್ಲಿ ಪರಿಸ್ಥಿತಿ ಉತ್ತಮವಾಗಿದೆ, ಏಕೆಂದರೆ ಅನೇಕ ಕಂಪನಿಗಳು ಲಸಿಕೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ.ಸ್ವಂತವಾಗಿ ಅಥವಾ ಇತರ ರಾಷ್ಟ್ರಗಳ ಸಹಭಾಗಿತ್ವದೊಂದಿಗೆ ದೇಶ ಲಸಿಕೆಗಳ ತಯಾರಿಕಾ ಹಬ್ ಆಗಿದೆ. ವಯಸ್ಕರ ರೋಗನಿರೋಧಕ ಕಾರ್ಯಕ್ರಮಗಳಿಗೆ ಯೋಜನೆ ಅಗತ್ಯ ಎಂದು ತಿಳಿಸಿದರು.

ಲಸಿಕೆ ಹಂಚಿಕೆಗಾಗಿಯೇ 31 ಬಿಲಿಯನ್ ಅಮೆರಿಕನ್ ಡಾಲರ್ ಅಗತ್ಯವಿರುವುದಾಗಿ ಹೇಳಿದ ಸ್ವಾಮಿನಾಥನ್, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಸ್ಥಿತಿಸ್ಥಾಪಕತ್ವ ಪ್ರಗತಿ ತಿಳಿಯುವ ಅವಕಾಶವನ್ನು ಕೋವಿಡ್-19 ನೀಡಿದೆ. ಆರೋಗ್ಯ ಎಂದರೆ ಕೇವಲ ಕಾಯಿಲೆಗಳಿಗೆ ಚಿಕಿತ್ಸೆ ಅಲ್ಲ, ಅದು ಆಹಾರ, ನೈರ್ಮಲ್ಯತೆ, ನೀರು, ಮನೆ, ಮದ್ಯ ಮತ್ತು ತಂಬಾಕು ಸೇವನೆಯಿಂದಾಗಿ ದುಷ್ಟಾರಿಣಾಗಳನ್ನು ಒಳಗೊಂಡಿರುತ್ತದೆ. ಅಧಿಕಾರ ಹಂಚಿಕೆ ಇರುವಲ್ಲಿ, ಸಮುದಾಯದ ಭಾಗವಹಿಸುವಿಕೆ ಮತ್ತು ಸುಸ್ಥಿರ ಪ್ರತಿಕ್ರಿಯೆ ಇದೆ, ”ಎಂದು ಅವರು ವಿವರಿಸಿದರು.

ಸರಿಯಾದ ಸಮಯಕ್ಕೆ ಮರಣ ಪ್ರಮಾಣ ಮತ್ತು ಕಾಯಿಲೆ ಹರಡುವಿಕೆ ಸರ್ಕಾರದ ಮೊದಲ ಆದ್ಯತೆಯಾಗಬೇಕು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಬೇಕು, ಎಲ್ಲರಿಗೂ ಆರೋಗ್ಯ ವಿಮೆ ಒದಗಿಸಬೇಕು, ಆರೋಗ್ಯ ಕಾರ್ಯಕರ್ತೆಯರಿಗೆ ತರಬೇತಿ ನೀಡಬೇಕು, ಆರೋಗ್ಯ ವ್ಯವಸ್ಥೆಯಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿ ನಿಟ್ಟಿನಲ್ಲಿ ಹೂಡಿಕೆಯನ್ನು ಹೆಚ್ಚಿಸಬೇಕು ಎಂದು ಡಾ. ಸೌಮ್ಯ ಸ್ವಾಮಿನಾಥನ್  ಸಲಹೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?

'ಸಿಂಹ ಸುಮ್ಮನೆ ಕುಳಿತಿದೆ ಅಂದ್ರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ': ಕಿಚ್ಚ ಸುದೀಪ್ ದಿಢೀರ್ ಪೋಸ್ಟ್; ಇಲ್ಲಿದೆ ಕಾರಣ...

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Nepal: 80 ಸೇತುವೆಗಳು ಹಾನಿ, 40 ಕಿ.ಮೀ ರಸ್ತೆಗಳು ನಾಶ