ವೆಂಕೋಸಾ ಬಂದಗೆ 
ರಾಜ್ಯ

ಗದಗ: ಕೊರೋನಾ ಗೆದ್ದ ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ವೆಂಕೋಸಾ ಬಂದಗೆ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ, ವೆಂಕೋಸಾ ಬಂದಗೆ ಅವರು ಕೊರೋನಾ ವೈರಸ್ ಗೆದ್ದು ರಾಜ್ಯದಲ್ಲಿ ಕೊರೋನಾದಿಂದ ಗುಣಮುಖರಾದ ಮೊದಲ ಹಿರಿಯ ವ್ಯಕ್ತಿಯಾಗಿದ್ದಾರೆ.

ಗದಗ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ, ವೆಂಕೋಸಾ ಬಂದಗೆ ಅವರು ಕೊರೋನಾ ವೈರಸ್ ಗೆದ್ದು ರಾಜ್ಯದಲ್ಲಿ ಕೊರೋನಾದಿಂದ ಗುಣಮುಖರಾದ ಮೊದಲ ಹಿರಿಯ ವ್ಯಕ್ತಿಯಾಗಿದ್ದಾರೆ.

ಕೊರೋನಾ ಗೆದ್ದ ನಂತರ ನಿಜವಾದ ಅರ್ಥದಲ್ಲಿ ಅವರು ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ.  104 ವರ್ಷದ ಬಂದಗೆ ಅವರು ಗದಗ ಜಿಲ್ಲೆಯ ಗಜೇಂದ್ರ ಗಡದ ನಿವಾಸಿಯಾಗಿದ್ದಾರೆ. ಆಗಸ್ಟ್ 7ರಂದು ಅವರಿಗೆ ಕೊರೋನಾ ಸೋಂಕು ಪತ್ತೆಯಾಗಿತ್ತು. ಅದಕ್ಕೂ ಮುನ್ನ ಜುಲೈ ತಿಂಗಳಿನಲ್ಲಿ ಅವರ ಕುಟುಂಬದ 14 ಮಂದಿಗೆ ಕೊರೋನಾ ಸೋಂಕು ತಗುಲಿತ್ತು. ಆದರೆ ಆ ವೇಳೆ ಅವರಿಗೆ ಸೋಂಕು ತಗುಲಿರಲಿಲ್ಲ, ಆದರೆ ಅವರ ವಯಸ್ಸಿನ ಹಿನ್ನೆಲೆಯಲ್ಲಿ ವೈದ್ಯರು ಅವರನ್ನು ಪ್ರತ್ಯೇಕವಾಗಿರಿಸಿದ್ದರು, ಈಗ ಅವರು ಕೊರೋನಾದಿಂದ ಗುಣಮುಖರಾಗಿದ್ದಾರೆ.

ಬಂದಗೆ ಅವರು ಕೊರೋನಾದಿಂದ ಗುಣಮುಖರಾಗಿರುವುದು ಕುಟುಂಬಸ್ಥರಿಗೆ ಮತ್ತು ನೆರೆಹೊರೆಯವರಿಗೆ ಸಂತಸದ ವಿಷಯವಾಗಿದೆ. 

ಕೊರೋನಾ ಬ್ರಿಟಿಷರಷ್ಟು ಕಠಿಣವಾಗಿಲ್ಲ ಎಂದು ನಗುಮುಖದಿಂದ ಬಂದಗೆ ಮನೆಗೆ ಬಂದವರಿಗೆ ಹೇಳಿದ್ದಾರೆ.
ನನ್ನದೇ ಕುಟುಂಬಸ್ಥರಿಂದ ನನಗೆ ಕೊರೋಮಾ ಸೋಂಕು ತಗುಲಿತು.ನನ್ನನ್ನು ಹೋಮ್ ಕ್ವಾರಂಟೈನ್ ನಲ್ಲಿಟ್ಟಿದ್ದರು, ನನಗೆ ಪ್ರತಿದಿನ ಒಂದು ಸೇಬು ಮತ್ತು ಇಂಜೆಕ್ಷನ್ ನೀಡುತ್ತಿದ್ದರು ಎಂದು ತಿಳಿಸಿದ್ದಾರೆ.

ಕೊರೋನಾ ಬಂದರು ಜನರು ಹೆದರಬೇಡಿ, ನಿಮ್ಮ ಆತ್ಮವಿಶ್ವಾಸ ಮತ್ತು ಶಕ್ತಿಗಿಂತ ಅದಕ್ಕೆ ಹೆಚ್ಚಿನ ಸಾಮರ್ಥ್ಯವಿಲ್ಲ,  ವೈದ್ಯರು ಹೇಳಿದ ರೀತಿ ಚಿಕಿತ್ಸೆ ಪಡೆದುಕೊಂಡರೇ
ಗುಣಮುಱರಾಗಬಹುದು ಎಂದು ತಿಳಿಸಿದ್ದಾರೆ, 

ನಮ್ಮ ಆತ್ಮವಿಶ್ವಾಸವನ್ನು ಕೊರೋನ ಕೊಲ್ಲಲಾಗದು ಎಂದು ಹೇಳಿದ್ದಾರೆ. ಗುರುವಾರದ ಮಧ್ಯರಾತ್ರಿವರೆಗೆ ಗದಗದಲ್ಲಿ 169 ಪ್ರಕರಣಗಳು ದಾಖಲಾಗಿವೆ, ಇದುವರೆಗೆ ಒಟ್ಟು 4,795 ಪ್ರಕರಣಗಳು ಪತ್ತೆಯಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT