ಮದುವೆಯ ಚಿತ್ರ 
ರಾಜ್ಯ

ಬೆಂಗಳೂರು: ಫಸ್ಟ್ ನೈಟ್ ನಲ್ಲೇ ವರನ ಎಡವಟ್ಟು: ಒಂದೇ ತಿಂಗಳಿಗೆ ಮುರಿದು ಬಿತ್ತು ದಾಂಪತ್ಯ!

ಮಗಳು ಚನ್ನಾಗಿರಲಿ ಎಂದು ಪೋಷಕರು ಅಳಿಯನಿಗೆ ಮರ್ಸಿಡಿಸ್ ಬೆಂಝ್ ಕಾರನ್ನು ವರೋಪಚಾರವಾಗಿ ನೀಡಿದ್ದರು. ಅಲ್ಲದೆ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟರೂ ಫಸ್ಟ್ ನೈಟ್ ನಲ್ಲೇ ವರ ಎಡವಟ್ಟು ಮಾಡಿಕೊಂಡಿದ್ದು ಮದುವೆಯಾಗಿ ಒಂದೇ ತಿಂಗಳಿಗೆ ದಾಂಪತ್ಯ ಜೀವನ ಮುರಿದುಬಿದ್ದಿದೆ. 

ಬೆಂಗಳೂರು: ಮಗಳು ಚನ್ನಾಗಿರಲಿ ಎಂದು ಪೋಷಕರು ಅಳಿಯನಿಗೆ ಮರ್ಸಿಡಿಸ್ ಬೆಂಝ್ ಕಾರನ್ನು ವರೋಪಚಾರವಾಗಿ ನೀಡಿದ್ದರು. ಅಲ್ಲದೆ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟರೂ ಫಸ್ಟ್ ನೈಟ್ ನಲ್ಲೇ ವರ ಎಡವಟ್ಟು ಮಾಡಿಕೊಂಡಿದ್ದು ಮದುವೆಯಾಗಿ ಒಂದೇ ತಿಂಗಳಿಗೆ ದಾಂಪತ್ಯ ಜೀವನ ಮುರಿದುಬಿದ್ದಿದೆ. 

ಬೆಂಗಳೂರಿನ ಎಲ್ ಬಿಎಸ್ ನಗರದ ನಿವಾಸಿ ಭರತ್ ಅಕ್ಟೋಬರ್ 29ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ. ಆದರೆ ಫಸ್ಟ್ ನೈಟ್ ದಿನವೇ ಭರತ್ ಕಂಠಪೂರ್ತಿ ಕುಡಿದುಬಂದಿದ್ದು ಆತನ ವರ್ತನೆಯನ್ನು ಕಂಡು ಕಕ್ಕಾಬಿಕ್ಕಿಯಾಗಿದ್ದಳು. ಈ ವಿಷಯವನ್ನು ಪೋಷಕರಿಗೆ ತಿಳಿಸಿದಾಗ ಅಂದಿನ ಮಧುಚಂದ್ರವನ್ನು ಮುಂದಿನ ದಿನಕ್ಕೆ ಮುಂದೂಡಿದರು.

ಎರಡನೇ ದಿನವೂ ಭರತ್ ಮತ್ತೆ ಕುಡಿದು ಬಂದಿದ್ದರಿಂದ ಪತ್ನಿ ಮಧುಚಂದ್ರಕ್ಕೆ ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಭರತ್ ಪತ್ನಿಯನ್ನು ಥಳಿಸಿದ್ದಾನೆ. ಇನ್ನು ಭರತ್ ಗೆ ಕುಡಿಯುವ ಚಟವಿರುವುದನ್ನು ಮುಚ್ಚಿಟ್ಟಿದ್ದ ಪತಿಯ ವಿರುದ್ಧ ಹೌಹಾರಿದ್ದಳು.

ಈ ಘಟನೆಯ ಬಳಿಕ ಭರತ್ ಹಾಗೂ ಆತನ ಪೋಷಕರು ಕಿರುಕುಳ ನೀಡಲು ಶುರು ಮಾಡಿದ್ದಾರೆ. ಇನ್ನು ಭರತ್ ಗೆ ಅದಾಗಲೇ ಮದುವೆಯಾಗಿರುವ ವಿಚಾರ ಸಹ ತಿಳಿದಿದ್ದರಿಂದ ಮಹಿಳೆ ನವೆಂಬರ್ 29ರಂದು ಹೆಚ್ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ದೂರಿನನ್ವಯ ಪತಿ ಭರತ್ ನನ್ನು ಪೊಲೀಸರು ಬಂಧಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

SCROLL FOR NEXT