ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಡಿಸೆಂಬರ್ 7 ರಿಂದ 17ರವರೆಗೆ ಸಬ್ ಅರ್ಬನ್ ರೈಲು ಓಡಾಟ

ಲಾಕ್ ಡೌನ್ ಬಳಿಕ ಇದೇ ಮೊದಲ ಬಾರಿಗೆ 6 ಸಬ್ ಅರ್ಬನ್ ರೈಲುಗಳ ಓಡಾಟ ಆರಂಭವಾಗುತ್ತಿದೆ.

ಬೆಂಗಳೂರು: ಲಾಕ್ ಡೌನ್ ಬಳಿಕ ಇದೇ ಮೊದಲ ಬಾರಿಗೆ 6 ಸಬ್ ಅರ್ಬನ್ ರೈಲುಗಳ ಓಡಾಟ ಆರಂಭವಾಗುತ್ತಿದೆ.

ಇದೇ ಡಿಸೆಂಬರ್ 7 ರಿಂದ 17ರವರೆಗೆ ಬೆಂಗಳೂರಿನಿಂದ ನಾಲ್ಕೂ ದಿಕ್ಕುಗಳಲ್ಲಿ ಸಬ್ ಅರ್ಬನ್ ರೈಲು ಓಡಾಡಲಿದ್ದು, ಈ ಬಗ್ಗೆ ನೈರುತ್ಯ ರೈಲ್ವೆ (ಎಸ್‌ಡಬ್ಲ್ಯುಆರ್) ಗುರುವಾರ ಘೋಷಣೆ ಮಾಡಿದೆ. 

ಮಾರ್ಚ್ 25ರ ಬಳಿಕ ಅಂದರೆ ಲಾಕ್ ಡೌನ್ ಹೇರಿಕೆ ಬಳಿಕ ಇದೇ ಮೊದಲ ಬಾರಿಗೆ ನಗರದಲ್ಲಿ ರಿಸರ್ವೇಷನ್ ರಹಿತ ರೈಲುಗಳಿಗೆ ಚಾಲನೆ ನೀಡಲಾಗುತ್ತಿದೆ. ಈ ರೈಲುಗಳು ಈ ಹಿಂದೆ ಕೇಂದ್ರ ಸರ್ಕಾರ ಸೌಥ್ ವೆಸ್ಟ್ ರೈಲ್ವೇಗೆ ಘೋಷಣೆ ಮಾಡಲಾಗಿದ್ದ 26 ರೈಲುಗಳ ಯೋಜನೆಯ  ಭಾಗವಾಗಿದೆ. 

ರೈಲುಗಳ ವಿವರಗಳು, ಸಮಯಗಳು
ಯಶವಂತಪುರ-ಹಾಸನ-ಯಶವಂತಪುರ ಡೆಮು (06579/06580): ಬೆಳಿಗ್ಗೆ 9.30 ಕ್ಕೆ ವೈಪಿಆರ್ (ಯಶವಂತಪುರ ರೈಲ್ವೇ ನಿಲ್ದಾಣ) ನಿಂದ ನಿರ್ಗಮಿಸಿ, ಮಧ್ಯಾಹ್ನ 1 ಗಂಟೆಗೆ ಹಾಸನ ತಲುಪುತ್ತದೆ; ಮಧ್ಯಾಹ್ನ 1.30 ಕ್ಕೆ ಹಾಸನದಿಂದ ಹೊರಟು, ಅದೇ ದಿನ ಸಂಜೆ 5 ಗಂಟೆಗೆ  ಯಶವಂತಪುರಕ್ಕೆ ಆಗಮಿಸುತ್ತದೆ.

ಯಶವಂತಪುರ-ತುಮಕೂರು-ಯಶವಂತಪುರ ಡೆಮು (06553/06554): ಸಂಜೆ 6.35 ಕ್ಕೆ ಯಶವಂತಪುರದಿಂದ ಹೊರಟು ರಾತ್ರಿ 8 ಗಂಟೆಗೆ ತುಮಕೂರು ತಲುಪುತ್ತಾರೆ; ಬೆಳಿಗ್ಗೆ 7.30 ಕ್ಕೆ ತುಮಕೂರು ನಿಂದ ಹೊರಟು, ಬೆಳಿಗ್ಗೆ 9 ಗಂಟೆಗೆ ಯಶವಂತಪುರ ತಲುಪುತ್ತದೆ.

ಕೆ.ಎಸ್.ಆರ್ ಬೆಂಗಳೂರು-ಮಾರಿಕಪ್ಪಂ-ಕೆ.ಎಸ್.ಆರ್ ಮೆಮು (06555/06556): ಸಂಜೆ 6.05 ಕ್ಕೆ ಕೆ.ಎಸ್.ಆರ್ ನಿಂದ ಹೊರಟು, ಅದೇ ದಿನ ರಾತ್ರಿ 8.30 ಕ್ಕೆ ಮಾರಿಕಪ್ಪಂಗೆ ಆಗಮಿಸುತ್ತದೆ; ಬೆಳಿಗ್ಗೆ 6.35 ಕ್ಕೆ ಮಾರಿಕಪ್ಪಂನಿಂದ ಹೊರಟು, ಬೆಳಿಗ್ಗೆ 9.10 ಕ್ಕೆ  ಕೆಎಸ್‌ಆರ್ ತಲುಪುತ್ತದೆ.

ಬಂಗಾರಪೇಟೆ-ಮೈಸೂರು ಎಂಇಎಂಯು (06557/06558): ಸಂಜೆ 6.40 ಕ್ಕೆ ಬಂಗಾರಪೇಟೆಯಿಂದ ಹೊರಟು, ರಾತ್ರಿ 10.25 ಕ್ಕೆ ಮೈಸೂರು ತಲುಪುತ್ತದೆ; ಬೆಳಿಗ್ಗೆ 5 ಗಂಟೆಗೆ ಮೈಸೂರಿನಿಂದ ಹೊರಟು, ಬೆಳಿಗ್ಗೆ 10.40 ಕ್ಕೆ ಬಂಗಾರಪೇಟೆಗೆ ಆಗಮಿಸುತ್ತದೆ. ಹಿಂದೂಪುರ-ಯಶವಂತಪುರ  -ಹಿಂದೂಪುರ ಮೆಮು (06563/06564): ಬೆಳಿಗ್ಗೆ 6 ಗಂಟೆಗೆ ಹಿಂದೂಪುರದಿಂದ ಹೊರಟು, ಬೆಳಿಗ್ಗೆ 8.25 ಕ್ಕೆ ಯಶವಂತಪುರ ತಲುಪುತ್ತದೆ; ಸಂಜೆ 6 ಗಂಟೆಗೆ ಯಶವಂತಪುರದಿಂದ ನಿರ್ಗಮಿಸಿ, ರಾತ್ರಿ 8.25 ಕ್ಕೆ ಹಿಂದೂಪುರಕ್ಕೆ ಆಗಮಿಸುತ್ತದೆ. 

ಕೆಎಸ್‌ಆರ್ ಬೆಂಗಳೂರು-ಹೊಸೂರು-ಬೆಂಗಳೂರು ಎಂಇಎಂಯು (06547/06547): ಕೆಎಸ್‌ಆರ್ ಅನ್ನು ಬೆಳಿಗ್ಗೆ 7.15 ಕ್ಕೆ ಹೊರಟು, ಬೆಳಿಗ್ಗೆ 8.35 ಕ್ಕೆ ಹೊಸೂರಿಗೆ ಆಗಮಿಸುತ್ತದೆ; ಬೆಳಿಗ್ಗೆ 8.45 ಕ್ಕೆ ಹೊಸೂರಿನಿಂದ ಹೊರಟು, ಅದೇ ದಿನ ಬೆಳಿಗ್ಗೆ 10.10 ಕ್ಕೆ  ಕೆಎಸ್‌ಆರ್‌ಗೆ ಆಗಮಿಸುತ್ತದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT