ಶಿರೂರು ಮಠದಲ್ಲಿ ನಡೆದ ಪತ್ರಿಕಾಗೋಷ್ಠಿ 
ರಾಜ್ಯ

ಮಕರ ಸಂಕ್ರಾಂತಿಯ ನಂತರ ಶಿರೂರು ಮಠದ ಉತ್ತರಾಧಿಕಾರಿ ಘೋಷಣೆ: ಸೋದೆ ಶ್ರೀ ವಿಶ್ವವಲ್ಲಭ ಸ್ವಾಮೀಜಿ

ಶಿರೂರು ಮಠದ ಉತ್ತರಾಧಿಕಾರಿ ಆಯ್ಕೆ ಮಾಡಲಾಗಿದ್ದು ಮಕರ ಸಂಕ್ರಮಣದ ನಂತರ ಉತ್ತರಾಯಣದಲ್ಲಿ ಮಠದ ಪೀಠಕ್ಕೆ ನೇಮಕ ಮಾಡಲು ನಿರ್ಧರಿಸಿದ್ದೇವೆ.ಎಂದು ಪ್ರಸ್ತುತ ಶಿರೂರು ಮಠದ ಆಡಳಿತ ನೋಡಿಕೊಳ್ಳುತ್ತಿರುವ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ: ಶಿರೂರು ಮಠದ ಉತ್ತರಾಧಿಕಾರಿ ಆಯ್ಕೆ ಮಾಡಲಾಗಿದ್ದು ಮಕರ ಸಂಕ್ರಮಣದ ನಂತರ ಉತ್ತರಾಯಣದಲ್ಲಿ ಮಠದ ಪೀಠಕ್ಕೆ ನೇಮಕ ಮಾಡಲು ನಿರ್ಧರಿಸಿದ್ದೇವೆ.ಎಂದು ಪ್ರಸ್ತುತ ಶಿರೂರು ಮಠದ ಆಡಳಿತ ನೋಡಿಕೊಳ್ಳುತ್ತಿರುವ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

"ಅಷ್ಠ ಮಠಾಧೀಷರ ಸಹಕಾರದೊಂದಿಗೆ ನಾವು ಇಲ್ಲಿಯವರೆಗೆ ಕರ್ತವ್ಯಗಳನ್ನು ನಿರ್ವಹಿಸಿದ್ದೇವೆ. ಭವಿಷ್ಯದಲ್ಲಿಯೂ ಭಕ್ತರ ಸಹಕಾರವನ್ನು ನಾವು ನಿರೀಕ್ಷಿಸುತ್ತೇವೆ"  ಸ್ವಾಮೀಜಿ ಹೇಳಿದರು.

ಡಿಸೆಂಬರ್ 5 ರ ಶನಿವಾರ ಶಿರೂರು ಮಠದಲ್ಲಿ ಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. "ಲಕ್ಷ್ಮಿವರ ತೀರ್ಥ ಶ್ರೀಪಾದರು ಈಗಾಗಲೇ ಶಿರೂರು ಮೂಲ ಮಠ ಹಾಗೂ ಉಡುಪಿ ನಿವಾಸಗಳ ನವೀಕರಣ ಮತ್ತು ಆಚರಣೆಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಿದ್ದಾರೆ. ಮಠದ ಪ್ರಧಾನ ದೇವತೆಯನ್ನು ಗ್ರಾಮಸ್ಥರೆಲ್ಲರ ಸಹಕಾರದಲ್ಲಿ ಹೊಸ ದೇವಾಲಯದಲ್ಲಿ ಸ್ಥಾಪನೆಗೆ ನಿರ್ಧರಿಸಲಾಗಿದೆ. . ಇದಲ್ಲದೆ, ಕೀಲೂರುರು ಮೂಲಮಠದ ಬಳಿಯಿರುವ ದುರ್ಗಾಪರಮೇಶ್ವರಿ ದೇವತೆಯಸ್ಥಾನವನ್ನು ಸಹ ಗ್ರಾಮಸ್ಥರ ಸಹಾಯದಿಂದ ನವೀಕರಿಸಲಾಗಿದೆ. ಹಿರಿಯಡ್ಕ  ಸಮೀಪದ ಪಾಪಾಜೆ ಮಠ ದುರ್ಬಲಗೊಂಡಿರುವುದರಿಂದ ಅದನ್ನು ನವೀಕರಿಸಲು ನಿರ್ಧರಿಸಲಾಗಿದೆ. "ಎಂದು ಶ್ರೀಗಳು ವಿವರಿಸಿದರು.

"ಶಿರೂರು ಮಠದ ಉತ್ತರಾಧಿಕಾರಿಗಳು ಯಾರಾಗುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿತ್ತು. ಮಕರ ಸಂಕ್ರಾಂತಿಯ ನಂತರ ಉತ್ತರಾಯಣದಲ್ಲಿ ಉತ್ತರಾಧಿಕಾರಿ  ಘೋಷಣೆಯಾಗಲಿದೆ. ಇದಕ್ಕಾಗಿ ಆಗಲೇ ಯೋಗ್ಯ ವಟುವಿನ ಆಯ್ಕೆಯಾಗಿದ್ದು ತರಬೇತಿ ನೀಡಲಾಗುತ್ತಿದೆ. ಮುಂದಿನ ವರ್ಷದಲ್ಲಿ ಅವರ ಪಟ್ಟಾಭಿಷೇಕ  ನೆರವೇರಲಿದೆ"

“ಎರಡು ವರ್ಷಗಳ ನಂತರ ಪ್ರತಿಯೊಂದು ಸಮಸ್ಯೆಗಳು ಒಂದೊಂದಾಗಿ ಬಗೆಹರಿಯುತ್ತವೆ. ಒಳ್ಳೆಯ ದಿನಗಳು ಬರಲಿವೆ ಮತ್ತು ಶೀಘ್ರದಲ್ಲೇ ಶಿರೂರು ಮಠಕ್ಕೆ ಉತ್ತಮ ಉತ್ತರಾಧಿಕಾರಿ ಬರಲಿದ್ದಾರೆ. ಅವರು ವೇದವಿದ್ಯೆ ಕಲಿಯುತ್ತಿದ್ದು. ಇಡೀ ಸಮಾಜ ಅವರನ್ನು ಸ್ವಾಗತಿಸುತ್ತದೆ." ಎಂದು ಪಲಿಮಾರು ಮಠದ ರು ಸ್ವಾಮೀಜಿ ಶ್ರೀ ವಿದ್ಯಾಧೀಷತೀರ್ಥ ಹೇಳಿದ್ದಾರೆ.

ಶಿರೂರು ಮಠದ  ಶ್ರೀಗಳಾದ ಶ್ರೀ ಶ್ರೀ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಕೃಷ್ಣೈಕ್ಯರಾದ ನಂತರ ಜುಲೈ 19, 2018ರಿಂದ ಪೀಠವು ಖಾಲಿಯಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT