ರಾಜ್ಯ

ಸ್ನೇಹಿತೆ ಮೇಲೆ ಸ್ನೇಹಿತನಿಂದಲೇ ಅತ್ಯಾಚಾರ, ಕೊಲೆ: ಆರೋಪಿ ಬಂಧನ

Manjula VN

ಬೆಂಗಳೂರು: ಖಾಸಗಿ ಕಾಲೇಜನಲ್ಲಿ ಫಾರ್ಮಸಿ ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತೆ ಮೇಲೆ ಅತ್ಯಾಚಾರ ಎಸಗಿ, ಆನಂತರ ಆಕೆಯನ್ನು ಹತ್ಯೆ ಮಾಡಿರುವ ಘಟನೆಯೊಂದು ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಅಸ್ಸಾಂ ಮೂಲಕ  20 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಹತ್ಯೆಗೀಡಾದ ದುರ್ದೈವಿಯಾಗಿದ್ದಾಳೆ. ಘಟನೆ ಸಂಬಂಧ 21 ವರ್ಷದ ಆರೋಪಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 

ಮೃತ ಯುವತಿ ಹಾಗೂ ಆರೋಪಿ ರೆಹಮಾನ್ ಆತ್ಮೀಯ ಸ್ನೇಹಿತರಾಗಿದ್ದು, ಆ ಎರಡೂ ಕುಟುಂಬಗಳಿಗೆ ಆಪ್ತ ಒಡನಾಟವಿದೆ. ಒಂದೂವರೆ ವರ್ಷದಿಂದ ನಗರದ ಖಾಸಗಿ ಕಾಲೇಜಿನಲ್ಲಿ ರೆಹಮಾನ್ ಮೂಲಕ ಮೃತ ಯುವತಿ ಕೂಡ ಬೆಂಗಳೂರಿನಲ್ಲಿ ನರ್ಸಿಂಗ್ ಓದಲು ಬಂದಿದ್ದಳು. ಅಸ್ಸಾಂನಿದ ಮಂಗಳವಾರವಷ್ಟೇ ಬಂದು ಕಾಲೇಜಿಗೆ ಆಕೆ ದಾಖಲಾಗಿದ್ದಳು. ಕಾಲೇಜಿಗೆ ಸೇರುವಾಗ ರೆಹಮಾನ್ ಸಹಾಯ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ. 

ಕಾಲೇಜಿನ ಹಾಸ್ಟೆಲ್ ನಲ್ಲಿ ಯುವತಿ ವಾಸ್ತವ್ಯ ಹೂಡಿದ್ದಳು. ಕೆಲವು ವಸ್ತುಗಳ ಖರೀದಿ ಸಲುವಾಗಿ ಗೆಳೆಯ ರೆಹಮಾನ್'ನನ್ನು ಶಾಪಿಂಗ್'ಗೆ ಕರೆದುಕೊಂಡು ಹೋಗಲು ಆಕೆ, ಬುಧವಾರ ಬೆಳಿಗ್ಗೆ ಬ್ಯಾಡರಹಳ್ಳಿ ಸಮೀಪವಿರುವ ರೆಹಮಾನ್ ಕೊಠಡಿಗೆ ಬಂದಿದ್ದಳು. ಆ ವೇಳೆ ಸ್ನೇಹಿತೆ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದಾನೆಂದು ಹೇಳಲಾಗುತ್ತಿದೆ. 

ಈ ನಡುವೆ ಘಟನೆ ಸಂಬಂಧ ಆರೋಪಿ ಪೊಲೀಸರಿಗೆ ಹೇಳಿಕೆ ನೀಡಿದ್ದು, ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗಲೇ ಸ್ನೇಹಿತ ಪ್ರಜ್ಞಾಹೀನಳಾದಳು. ಇದರಿಂದ ನನಗೆ ಭಯವಾಯಿತು. ಕೂಡಲೇ ನೆರೆಮನೆಯವರ ನೆರವು ಪಡೆದು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಆಸ್ಪತ್ರೆ ಸೇರುವ ಮುನ್ನವೇ ಮೃತಪಟ್ಟಿದ್ದಾಳೆಂದು ದೃಢಪಡಿಸಿದರು. ನಾನು ಕೊಲೆ ಮಾಡಿಲ್ಲ ಎಂದು ಹೇಳಿದ್ದಾನೆಂದು ತಿಳಿದುಬಂದಿದೆ. 

ಘಟನೆ ಸಂಬಂಧ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಕಾಯುತ್ತಿದ್ದಾರೆಂದು ವರದಿಗಳು ತಿಳಿಸಿವೆ. 

SCROLL FOR NEXT